<p>ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದಲಿತರು ದೇವಾಲಯ ಪ್ರವೇಶಿಸಿದರೆಂಬ ಕಾರಣಕ್ಕೆ ಮೇಲ್ಜಾತಿಯವರು ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ 1000 ರೂಪಾಯಿ ದಂಡ ವಿಧಿಸಿರುವುದಲ್ಲದೆ ನಿಂದಿಸಿರುವುದು ಅಮಾನವೀಯ. ಮೈಲಿಗೆ ಆಗಿರುವ ದೇವರನ್ನು ಮಡಿ ಮಾಡುವ ಕಾರ್ಯ ಕೈಗೊಂಡಿದ್ದನ್ನು ಓದಿ ಅಚ್ಚರಿಯೆನಿಸಿತು.<br /> <br /> 12ನೇ ಶತಮಾನದಲ್ಲೇ ಬಸವಣ್ಣನವರು ಸಮಾಜದಲ್ಲಿ ಜಾತಿ ಪದ್ಧತಿಯನ್ನು ಹೋಗಲಾಡಿಸಲೆಂದು, ಸಮಾನತೆ, ಏಕತೆ ಮೂಡಬೇಕೆಂದು ತಮ್ಮ ವಚನಗಳ ಮೂಲಕ ಎಚ್ಚರಿಸಿದ್ದರು. ಹೀಗೆ ಸಾರಿದ ಬಸವಣ್ಣನ ದೇಗುಲದಲ್ಲೇ ಜಾತೀಯತೆಯನ್ನು ಜೀವಂತವಿಟ್ಟು ದಲಿತರಿಗೆ ಪ್ರವೇಶ ನಿರಾಕರಿಸಿದ್ದು ಖಂಡನೀಯ.<br /> <br /> 21ನೇ ಶತಮಾನದಲ್ಲೂ ಇಂತಹ ಅಮಾನವೀಯ ಆಚರಣೆಗಳಿರುವುದು ತಪ್ಪಲ್ಲವೇ? ಅದೂ ಅಲ್ಲದೆ ಸಂಸದರ ನಿಧಿಯಿಂದ ಕಟ್ಟಿದ ಸಮುದಾಯ ಭವನಕ್ಕೂ ದಲಿತರಿಗೆ ನಿಷೇಧ ಹೇರಿರುವುದು ಖಂಡನೀಯ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕಿದೆ. ಸಾರ್ವಜನಿಕ ಸ್ಥಳಗಳನ್ನು ಯಾವುದೇ ತಾರತಮ್ಯವಿಲ್ಲದೆ ಉಪಭೋಗಿಸುವ ಹಕ್ಕಿದೆ. ಅದನ್ನು ಯಾರಿಂದಲೂ ಕಸಿಯಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲ್ಲೂಕಿನ ಸಿಗರನಹಳ್ಳಿಯಲ್ಲಿ ದಲಿತರು ದೇವಾಲಯ ಪ್ರವೇಶಿಸಿದರೆಂಬ ಕಾರಣಕ್ಕೆ ಮೇಲ್ಜಾತಿಯವರು ಸ್ತ್ರೀಶಕ್ತಿ ಸಂಘದ ಮಹಿಳೆಯರಿಗೆ 1000 ರೂಪಾಯಿ ದಂಡ ವಿಧಿಸಿರುವುದಲ್ಲದೆ ನಿಂದಿಸಿರುವುದು ಅಮಾನವೀಯ. ಮೈಲಿಗೆ ಆಗಿರುವ ದೇವರನ್ನು ಮಡಿ ಮಾಡುವ ಕಾರ್ಯ ಕೈಗೊಂಡಿದ್ದನ್ನು ಓದಿ ಅಚ್ಚರಿಯೆನಿಸಿತು.<br /> <br /> 12ನೇ ಶತಮಾನದಲ್ಲೇ ಬಸವಣ್ಣನವರು ಸಮಾಜದಲ್ಲಿ ಜಾತಿ ಪದ್ಧತಿಯನ್ನು ಹೋಗಲಾಡಿಸಲೆಂದು, ಸಮಾನತೆ, ಏಕತೆ ಮೂಡಬೇಕೆಂದು ತಮ್ಮ ವಚನಗಳ ಮೂಲಕ ಎಚ್ಚರಿಸಿದ್ದರು. ಹೀಗೆ ಸಾರಿದ ಬಸವಣ್ಣನ ದೇಗುಲದಲ್ಲೇ ಜಾತೀಯತೆಯನ್ನು ಜೀವಂತವಿಟ್ಟು ದಲಿತರಿಗೆ ಪ್ರವೇಶ ನಿರಾಕರಿಸಿದ್ದು ಖಂಡನೀಯ.<br /> <br /> 21ನೇ ಶತಮಾನದಲ್ಲೂ ಇಂತಹ ಅಮಾನವೀಯ ಆಚರಣೆಗಳಿರುವುದು ತಪ್ಪಲ್ಲವೇ? ಅದೂ ಅಲ್ಲದೆ ಸಂಸದರ ನಿಧಿಯಿಂದ ಕಟ್ಟಿದ ಸಮುದಾಯ ಭವನಕ್ಕೂ ದಲಿತರಿಗೆ ನಿಷೇಧ ಹೇರಿರುವುದು ಖಂಡನೀಯ. ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು. ಸಮಾಜದಲ್ಲಿ ಎಲ್ಲರಿಗೂ ಸಮಾನತೆಯ ಹಕ್ಕಿದೆ. ಸಾರ್ವಜನಿಕ ಸ್ಥಳಗಳನ್ನು ಯಾವುದೇ ತಾರತಮ್ಯವಿಲ್ಲದೆ ಉಪಭೋಗಿಸುವ ಹಕ್ಕಿದೆ. ಅದನ್ನು ಯಾರಿಂದಲೂ ಕಸಿಯಬಾರದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>