<p>ನಮ್ಮ ಮಹಾನಗರದಲ್ಲಿ ರಸ್ತೆಗಳ ಪಾಡು ಗೋಳು ಆಗಿರುವುದು ಒಂದು ಸಮಸ್ಯೆಯಾದರೆ ಹೆದ್ದಾರಿಗಳಲ್ಲಿನ ನಾಯಿಗಳನ್ನು ಕಂಡರೆ ಅಯ್ಯೋ ಪಾಪ ಎನಿಸುತ್ತದೆ.<br /> <br /> ಆಹಾರ ಹುಡುಕುತ್ತಲೋ, ಇನ್ನೇತಕ್ಕೋ ಅಮಾಯಕವಾಗಿ ರಸ್ತೆ ದಾಟುವ ನಾಯಿಗಳು ಯಮವೇಗದ ವಾಹನಗಳ ಹೊಡೆತಕ್ಕೆ ಸಿಕ್ಕಿ ಅಲ್ಲೇ ಹೆಣವಾಗುತ್ತವೆ. ಮತ್ತೆ ಹತ್ತಾರು ವಾಹನಗಳು ಅವುಗಳ ಮೇಲೆ ಚಲಿಸಿ ಕೊನೆಗೆ ರಸ್ತೆಗಂಟಿದ ಚರ್ಮ ಮಾತ್ರವಾಗಿ ಹೋಗುವವರೆಗೂ ದುರ್ನಾತ ಬೀರುತ್ತಾ ಬಿದ್ದಿರುತ್ತದೆ.<br /> <br /> ಸಾರ್ವಜನಿಕರು ಮೂಗು, ಕಣ್ಣು ಮುಚ್ಚಿಕೊಂಡು ಮುಂದೆ ಹೋಗುವುದಲ್ಲದೆ ಬೇರೇನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಸತ್ತ ತಕ್ಷಣವೇ ಯಾರಾದರೂ ಅತ್ತ ಗಮನಹರಿಸಿದರೆ ಆದೀತು. ಆದರೆ ಅಂಥವರು ಯಾರಿದ್ದಾರೆ?<br /> <br /> ಅವರ ಧಾವಂತ ಅವರಿಗೆ. ಹಾಗಾಗಿ ಈ ಕಳೇಬರಗಳ ವಿಲೇವಾರಿಯನ್ನು ಸ್ಥಳೀಯ ಆಡಳಿತದ ಸಹಾಯದಿಂದ ನಿಭಾಯಿಸಬೇಕು. ಯಾರೋ ಹುಚ್ಚು ಆವೇಶದಿಂದ ವಾಹನ ಚಲಾಯಿಸಿ ಬಲಿ ತೆಗೆದುಕೊಂಡ ಮೂಕ ಪ್ರಾಣಿಗಳ ರಕ್ತ ಮಾಂಸ ಇನ್ನೊಂದಷ್ಟು ವಾಹನಗಳ ಚಕ್ರಕ್ಕೆ ಮೆತ್ತಿಕೊಂಡು ಹೇಳಹೆಸರಿಲ್ಲದಂತಾಗುವುದನ್ನಾದರೂ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಉತ್ತಮ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ನಮ್ಮ ಮಹಾನಗರದಲ್ಲಿ ರಸ್ತೆಗಳ ಪಾಡು ಗೋಳು ಆಗಿರುವುದು ಒಂದು ಸಮಸ್ಯೆಯಾದರೆ ಹೆದ್ದಾರಿಗಳಲ್ಲಿನ ನಾಯಿಗಳನ್ನು ಕಂಡರೆ ಅಯ್ಯೋ ಪಾಪ ಎನಿಸುತ್ತದೆ.<br /> <br /> ಆಹಾರ ಹುಡುಕುತ್ತಲೋ, ಇನ್ನೇತಕ್ಕೋ ಅಮಾಯಕವಾಗಿ ರಸ್ತೆ ದಾಟುವ ನಾಯಿಗಳು ಯಮವೇಗದ ವಾಹನಗಳ ಹೊಡೆತಕ್ಕೆ ಸಿಕ್ಕಿ ಅಲ್ಲೇ ಹೆಣವಾಗುತ್ತವೆ. ಮತ್ತೆ ಹತ್ತಾರು ವಾಹನಗಳು ಅವುಗಳ ಮೇಲೆ ಚಲಿಸಿ ಕೊನೆಗೆ ರಸ್ತೆಗಂಟಿದ ಚರ್ಮ ಮಾತ್ರವಾಗಿ ಹೋಗುವವರೆಗೂ ದುರ್ನಾತ ಬೀರುತ್ತಾ ಬಿದ್ದಿರುತ್ತದೆ.<br /> <br /> ಸಾರ್ವಜನಿಕರು ಮೂಗು, ಕಣ್ಣು ಮುಚ್ಚಿಕೊಂಡು ಮುಂದೆ ಹೋಗುವುದಲ್ಲದೆ ಬೇರೇನೂ ಮಾಡುವ ಸ್ಥಿತಿಯಲ್ಲಿರುವುದಿಲ್ಲ. ಸತ್ತ ತಕ್ಷಣವೇ ಯಾರಾದರೂ ಅತ್ತ ಗಮನಹರಿಸಿದರೆ ಆದೀತು. ಆದರೆ ಅಂಥವರು ಯಾರಿದ್ದಾರೆ?<br /> <br /> ಅವರ ಧಾವಂತ ಅವರಿಗೆ. ಹಾಗಾಗಿ ಈ ಕಳೇಬರಗಳ ವಿಲೇವಾರಿಯನ್ನು ಸ್ಥಳೀಯ ಆಡಳಿತದ ಸಹಾಯದಿಂದ ನಿಭಾಯಿಸಬೇಕು. ಯಾರೋ ಹುಚ್ಚು ಆವೇಶದಿಂದ ವಾಹನ ಚಲಾಯಿಸಿ ಬಲಿ ತೆಗೆದುಕೊಂಡ ಮೂಕ ಪ್ರಾಣಿಗಳ ರಕ್ತ ಮಾಂಸ ಇನ್ನೊಂದಷ್ಟು ವಾಹನಗಳ ಚಕ್ರಕ್ಕೆ ಮೆತ್ತಿಕೊಂಡು ಹೇಳಹೆಸರಿಲ್ಲದಂತಾಗುವುದನ್ನಾದರೂ ತಪ್ಪಿಸಬಹುದು. ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಉತ್ತಮ.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>