<p>‘ಸಾಹಿತಿಗಳ ಚಿತ್ರ ಹರಿದ ಕಿಡಿಗೇಡಿಗಳು’ ತಲೆಬರಹದ ಸಂಗತಿ (ಪ್ರವಾ ಏ.8) ಅತ್ಯಂತ ದುರುಳತನದ್ದು. ಬೆಂಗಳೂರಿನ ಶಂಕರಮಠ ಸಮೀಪ ಹಾಕಲಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಫಲಕದಲ್ಲಿದ್ದ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರ ಚಿತ್ರಗಳನ್ನು ಹರಿದು ಹಾಕಿರುವುದು ಖಂಡನೀಯ.<br /> <br /> ಇದಕ್ಕೆ ಕಾರಣ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿರುವುದು. ಸಾಹಿತಿಗಳು ರಾಜಕೀಯ ಪಕ್ಷವೊಂದಕ್ಕೆ ತಮ್ಮ ಬೆಂಬಲವನ್ನು ಸೂಚಿಸುವುದು ಇತರರೆಲ್ಲರಿಗಿಂತಲೂ ಜವಾಬ್ದಾರಿಯುತವಾದುದು. ಸಾಹಿ-ತಿಗಳು ವರ್ತಮಾನದ ಪ್ರಚಲಿತ ವಿದ್ಯಮಾನಗಳಿಗೆ ಪ್ರಬುದ್ಧ ರೀತಿಯಲ್ಲಿ ದನಿಯಾಗಬೇಕಾದ ಅವಶ್ಯಕತೆಯೂ ಇದೆ.<br /> <br /> ತಮ್ಮ ನಿಲುವಿಗೆ ಸರಿದೋರುವಂಥ, ಯಾವ ರಾಜಕೀಯ ಪಕ್ಷವನ್ನಾದರೂ ಬೆಂಬಲಿಸುವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿದ್ದೇ ಇದೆ. ಇದು ಯಾವುದೇ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೂ ಅನ್ವಯವಾಗುವ ಸಂಗತಿ.<br /> <br /> ಶಂಕರಪುರದಲ್ಲಿ ರಾಜಕೀಯ ದುರುದ್ದೇಶದಿಂದ ಮಾಡಿದ ಅವಮಾನ, ಕೇವಲ ಮೂರು ಮಂದಿ ಜ್ಞಾನಪೀಠ ಪ್ರಶಸ್ತಿ ವಿಜೇತರಿಗೆ ಮಾತ್ರವಲ್ಲ ಆರು ಕೋಟಿ ಕನ್ನಡಿಗರಿಗೆ ಮತ್ತು ಅವರ ಸಾಹಿತ್ಯಕ್ಕೆ ಮಾಡಿದ ಅಕ್ಷಮ್ಯ ಅಪರಾಧ. ಇದನ್ನು ಕನ್ನಡಪರ ಸಂಘಟನೆಗಳು ಪ್ರತಿಭಟಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>‘ಸಾಹಿತಿಗಳ ಚಿತ್ರ ಹರಿದ ಕಿಡಿಗೇಡಿಗಳು’ ತಲೆಬರಹದ ಸಂಗತಿ (ಪ್ರವಾ ಏ.8) ಅತ್ಯಂತ ದುರುಳತನದ್ದು. ಬೆಂಗಳೂರಿನ ಶಂಕರಮಠ ಸಮೀಪ ಹಾಕಲಾಗಿದ್ದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿಗಳ ಫಲಕದಲ್ಲಿದ್ದ ಯು.ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್ ಮತ್ತು ಚಂದ್ರಶೇಖರ ಕಂಬಾರರ ಚಿತ್ರಗಳನ್ನು ಹರಿದು ಹಾಕಿರುವುದು ಖಂಡನೀಯ.<br /> <br /> ಇದಕ್ಕೆ ಕಾರಣ ಕಾಂಗ್ರೆಸ್ಗೆ ಬೆಂಬಲ ವ್ಯಕ್ತಪಡಿಸಿರುವುದು. ಸಾಹಿತಿಗಳು ರಾಜಕೀಯ ಪಕ್ಷವೊಂದಕ್ಕೆ ತಮ್ಮ ಬೆಂಬಲವನ್ನು ಸೂಚಿಸುವುದು ಇತರರೆಲ್ಲರಿಗಿಂತಲೂ ಜವಾಬ್ದಾರಿಯುತವಾದುದು. ಸಾಹಿ-ತಿಗಳು ವರ್ತಮಾನದ ಪ್ರಚಲಿತ ವಿದ್ಯಮಾನಗಳಿಗೆ ಪ್ರಬುದ್ಧ ರೀತಿಯಲ್ಲಿ ದನಿಯಾಗಬೇಕಾದ ಅವಶ್ಯಕತೆಯೂ ಇದೆ.<br /> <br /> ತಮ್ಮ ನಿಲುವಿಗೆ ಸರಿದೋರುವಂಥ, ಯಾವ ರಾಜಕೀಯ ಪಕ್ಷವನ್ನಾದರೂ ಬೆಂಬಲಿಸುವ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿದ್ದೇ ಇದೆ. ಇದು ಯಾವುದೇ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೂ ಅನ್ವಯವಾಗುವ ಸಂಗತಿ.<br /> <br /> ಶಂಕರಪುರದಲ್ಲಿ ರಾಜಕೀಯ ದುರುದ್ದೇಶದಿಂದ ಮಾಡಿದ ಅವಮಾನ, ಕೇವಲ ಮೂರು ಮಂದಿ ಜ್ಞಾನಪೀಠ ಪ್ರಶಸ್ತಿ ವಿಜೇತರಿಗೆ ಮಾತ್ರವಲ್ಲ ಆರು ಕೋಟಿ ಕನ್ನಡಿಗರಿಗೆ ಮತ್ತು ಅವರ ಸಾಹಿತ್ಯಕ್ಕೆ ಮಾಡಿದ ಅಕ್ಷಮ್ಯ ಅಪರಾಧ. ಇದನ್ನು ಕನ್ನಡಪರ ಸಂಘಟನೆಗಳು ಪ್ರತಿಭಟಿಸಬೇಕಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>