ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯವಿದೆ’

ಅಕ್ಷರ ಗಾತ್ರ

‘ಸಾಹಿತಿಗಳ ಚಿತ್ರ ಹರಿದ ಕಿಡಿಗೇಡಿಗಳು’ ತಲೆಬರಹದ ಸಂಗತಿ (ಪ್ರವಾ ಏ.8) ಅತ್ಯಂತ ದುರುಳತನದ್ದು. ಬೆಂಗಳೂರಿನ ಶಂಕರಮಠ ಸಮೀಪ ಹಾಕಲಾಗಿದ್ದ   ಜ್ಞಾನಪೀಠ ಪ್ರಶಸ್ತಿ ಪುರ­ಸ್ಕೃತ ಸಾಹಿತಿಗಳ ಫಲಕದಲ್ಲಿದ್ದ ಯು.ಆರ್‌. ಅನಂತ­ಮೂರ್ತಿ, ಗಿರೀಶ್‌ ಕಾರ್ನಾಡ್‌ ಮತ್ತು ಚಂದ್ರಶೇಖರ ಕಂಬಾ­ರರ ಚಿತ್ರ­ಗಳನ್ನು ಹರಿದು ಹಾಕಿರುವುದು ಖಂಡನೀಯ.

ಇದಕ್ಕೆ ಕಾರಣ ಕಾಂಗ್ರೆಸ್‌ಗೆ ಬೆಂಬಲ ವ್ಯಕ್ತಪಡಿಸಿರುವುದು. ಸಾಹಿತಿ­ಗಳು ರಾಜ­ಕೀಯ ಪಕ್ಷವೊಂದಕ್ಕೆ ತಮ್ಮ ಬೆಂಬಲವನ್ನು ಸೂಚಿ­ಸು­ವುದು ಇತರರೆಲ್ಲರಿಗಿಂತಲೂ ಜವಾಬ್ದಾರಿಯುತ­ವಾದುದು. ಸಾಹಿ-­ತಿಗಳು ವರ್ತಮಾನದ ಪ್ರಚಲಿತ ವಿದ್ಯ­ಮಾನಗಳಿಗೆ ಪ್ರಬುದ್ಧ ರೀತಿಯಲ್ಲಿ ದನಿಯಾಗಬೇಕಾದ ಅವಶ್ಯಕತೆಯೂ ಇದೆ.

ತಮ್ಮ ನಿಲುವಿಗೆ ಸರಿದೋರುವಂಥ, ಯಾವ ರಾಜಕೀಯ ಪಕ್ಷವನ್ನಾದರೂ ಬೆಂಬಲಿಸುವ ತಮ್ಮ ಅಭಿ­­­ಪ್ರಾಯವನ್ನು ವ್ಯಕ್ತ­ಪಡಿಸುವ ಸಂವಿಧಾನದತ್ತ ಅಭಿವ್ಯಕ್ತಿ ಸ್ವಾತಂತ್ರ್ಯ ಅವರಿಗಿದ್ದೇ ಇದೆ. ಇದು ಯಾವುದೇ ಸರ್ಕಾರಿ ಹುದ್ದೆಯಲ್ಲಿರುವ ವ್ಯಕ್ತಿಗಳಿಗೂ ಅನ್ವಯವಾಗುವ ಸಂಗತಿ.

ಶಂಕರಪುರದಲ್ಲಿ ರಾಜಕೀಯ ದುರುದ್ದೇಶ­ದಿಂದ ಮಾಡಿದ ಅವಮಾನ, ಕೇವಲ ಮೂರು ಮಂದಿ ಜ್ಞಾನ­ಪೀಠ ಪ್ರಶಸ್ತಿ ವಿಜೇತ­ರಿಗೆ ಮಾತ್ರವಲ್ಲ ಆರು ಕೋಟಿ ಕನ್ನಡಿಗರಿಗೆ ಮತ್ತು ಅವರ ಸಾಹಿತ್ಯಕ್ಕೆ ಮಾಡಿದ ಅಕ್ಷಮ್ಯ ಅಪರಾಧ. ಇದನ್ನು ಕನ್ನಡಪರ ಸಂಘಟನೆಗಳು ಪ್ರತಿಭಟಿಸ­ಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT