<p>ಭಾರತದ<strong></strong>ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದ ಪ್ರಣವ್ ಅವರ ವಿಶಿಷ್ಠ ಜೀವನದ ಕುರಿತು ಇಲ್ಲಿ ವಿವರಿಸಲಾಗಿದೆ.</p>.<p>-ಪ್ರಣಬ್ ಮುಖರ್ಜಿ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಶಾಸ್ತ್ರದಲ್ಲಿ ಕಾನೂನು ವಿಷಯದಲ್ಲಿ ಉನ್ನತಪದವಿ ಪಡೆದಿದ್ದವರು. 1963ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 247 ಪರಗಣಗಳಲ್ಲಿನ ವಿದ್ಯಾನಗರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದ್ದಾರೆ.</p>.<p>-ಬಂಗಾಲಿ ಭಾಷೆಯ ಮಾಸಪತ್ರಿಕೆ, ವಾರಪತ್ರಿಕೆಯಲ್ಲಿ ಸಂಪಾದಕರೂ ಆಗಿದ್ದರು.</p>.<p>-1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯೊಂದಿಗೆ ರಾಜ್ಯಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ.</p>.<p>-ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ರಕ್ಷಣೆ, ವಾಣಜ್ಯ, ವಿದೇಶಾಂಗ ಮತ್ತು ಹಣಕಾಸು – ಪ್ರಮುಖ ನಾಲ್ಕು ಸಚಿವಾಲಯಗಳನ್ನು ನಿರ್ವಹಿಸಿದ ಏಕೈಕ ಸಚಿವ.</p>.<p>-ಹಣಕಾಸು ಸಚಿವರಾಗಿ ಹೆಚ್ಚು ಹೆಸರು ಮಾಡಿದವರು. ಏಳು ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ ಎಂಬ ಖ್ಯಾತಿಯೂ ಇವರಿಗಿದೆ. 1984 ರಲ್ಲಿ, ಯೂರೋಮನಿ ನಿಯತಕಾಲಿಕೆಯು ಮುಖರ್ಜಿ ಅವರನ್ನು ವಿಶ್ವದ ಅತ್ಯುತ್ತಮ ಹಣಕಾಸು ಸಚಿವ ಎಂದು ಆಯ್ಕೆ ಮಾಡಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/photo/pranab-mukherjee-great-politician-and-leader-of-india-rare-images-757556.html" itemprop="url" target="_blank">Photos: ಭಾರತ ರತ್ನ ಪ್ರಣವ್ ಮುಖರ್ಜಿ ಅಪರೂಪದ ಚಿತ್ರಗಳು</a></p>.<p>-ಇಂದಿರಾಗಾಂಧಿ ಹತ್ಯೆ ನಂತರ, ಪ್ರಣಬ್ ಅವರಿಗೆ ಪ್ರಧಾನಿ ಹುದ್ದೆ ಕೈತಪ್ಪಿತ್ತು. ಆಗ ರಾಜೀವ್ಗಾಂಧಿ ಪ್ರಧಾನಿಯಾದರು. ಪ್ರಣಬ್ ಮುಖರ್ಜಿ ಕಾಂಗ್ರೆಸ್ ತ್ಯಜಿಸಿ, ರಾಷ್ಟ್ರೀಯ ಸಮಾಜವಾದಿ ಪಕ್ಷ ಸ್ಥಾಪಿಸಿದ್ದರು. 1989ರಲ್ಲಿ ರಾಜೀವ್ ಗಾಂಧಿ ಜತೆ, ತಮ್ಮ ಪಕ್ಷವನ್ನು ವಿಲೀನವಾಗಿಸಿದರು.</p>.<p>-ಭಾರತದ 13 ನೇ ರಾಷ್ಟ್ರಪತಿಯಾಗಿ ನೇಮಕಗೊಂಡ ನಂತರ ಪ್ರಣಬ್ ಮುಖರ್ಜಿ ಅವರು ಉಗ್ರ ಅಫ್ಜಲ್ ಗುರು ಮತ್ತು ಅಜ್ಮಲ್ ಕಸಬ್ ಸೇರಿದಂತೆ ಏಳು ಕೈದಿಗಳ ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.</p>.<p>-ಸೆಪ್ಟೆಂಬರ್ 5, 2015ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭಾರತದ ರಾಜಕೀಯ, ಇತಿಹಾಸ ಕುರಿತು ಪಾಠ ಮೂಲಕ ಇತಿಹಾಸ ನಿರ್ಮಿಸಿದರು.</p>.<p>-ಪ್ರಣಬ್ ಮುಖರ್ಜಿಯವರಿಗೆ 40 ವರ್ಷಗಳಿಂದ ನಿತ್ಯ ಡೈರಿ ಬರೆಯುವ ಹವ್ಯಾಸ. ಆ ಡೈರಿಯಲ್ಲಿರುವ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ತರುವ ಕುರಿತು ಅನೇಕ ಬಾರಿ ಚರ್ಚೆ ನಡೆದಿತ್ತು. ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ಪುಸ್ತಕ ಪ್ರಕಟಿಸುತ್ತಾರೆಂದು ಹೇಳಲಾಗುತ್ತಿತ್ತು.</p>.<p>-ನಿತ್ಯ ಹದಿನೆಂಟು ಗಂಟೆ ಕೆಲಸ ಮಾಡುತ್ತಿದ್ದರು ಪ್ರಣಬ್ ಮುಖರ್ಜಿ. ದುರ್ಗಾಪೂಜೆಯ ದಿನ, ತಪ್ಪದೇ ತಮ್ಮ ತವರು ಮಿರತಿಗೆ ಭೇಟಿ ನೀಡುತ್ತಿದ್ದರು. ಆ ದಿನ ಹೊರತುಪಡಿಸಿ, ಇನ್ನು ಎಂದೂ ಕೆಲಸಕ್ಕೆ ರಜೆ ಹಾಕುತ್ತಿರಲಿಲ್ಲ.</p>.<p><strong>ಇವುಗಳನ್ನು ಓದಿ</strong></p>.<p><a href="https://cms.prajavani.net/india-news/former-president-pranab-mukherjee-and-congress-party-757513.html" itemprop="url">ಕಾಂಗ್ರೆಸ್ ಎಲೆ ಮೇಲಿನ ಜಲಬಿಂದು ಪ್ರಣವ್ </a></p>.<p><a href="https://cms.prajavani.net/india-news/former-president-pranab-mukherjee-passes-away-his-life-path-757512.html" itemprop="url">ಪ್ರಣವ್ ಸಂತಾಪ | ಅಪ್ಪಟ ಕಾಂಗ್ರೆಸ್ಸಿಗ ‘ಬಂಗಾಳಿ ಬಾಬು’ ನಡೆದು ಬಂದ ಹಾದಿ... </a></p>.<p><a href="https://cms.prajavani.net/karnataka-news/pranab-mukherjee-passed-away-karnataka-cm-bs-yediyurappa-congress-leade-siddaramaiah-hd-kumaraswamy-757530.html" itemprop="url">ಪ್ರಣವ್ ಮುಖರ್ಜಿ ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರ ಸಂತಾಪ </a></p>.<p><a href="https://cms.prajavani.net/op-ed/vyakti/profile-pranab-mukherjee-the-gentle-giant-of-indian-politics-757524.html" itemprop="url">ಭಾರತದ ಕಂಡ ಸಂಭಾವಿತ ರಾಜಕಾರಣಿ ಪ್ರಣಬ್ ಮುಖರ್ಜಿ </a></p>.<p><a href="https://cms.prajavani.net/india-news/pranab-mukherjee-death-news-pm-narendra-modi-ram-nath-kovind-rajnath-singh-and-other-dignitories-757518.html" itemprop="url">ಪ್ರಣವ್ ಮುಖರ್ಜಿ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಭಾರತದ<strong></strong>ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿದ್ದ ಪ್ರಣವ್ ಅವರ ವಿಶಿಷ್ಠ ಜೀವನದ ಕುರಿತು ಇಲ್ಲಿ ವಿವರಿಸಲಾಗಿದೆ.</p>.<p>-ಪ್ರಣಬ್ ಮುಖರ್ಜಿ, ಇತಿಹಾಸ ಮತ್ತು ರಾಜಕೀಯ ವಿಜ್ಞಾನ ಶಾಸ್ತ್ರದಲ್ಲಿ ಕಾನೂನು ವಿಷಯದಲ್ಲಿ ಉನ್ನತಪದವಿ ಪಡೆದಿದ್ದವರು. 1963ರಲ್ಲಿ ಪಶ್ಚಿಮ ಬಂಗಾಳದ ದಕ್ಷಿಣ 247 ಪರಗಣಗಳಲ್ಲಿನ ವಿದ್ಯಾನಗರ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸಮಾಡಿದ್ದಾರೆ.</p>.<p>-ಬಂಗಾಲಿ ಭಾಷೆಯ ಮಾಸಪತ್ರಿಕೆ, ವಾರಪತ್ರಿಕೆಯಲ್ಲಿ ಸಂಪಾದಕರೂ ಆಗಿದ್ದರು.</p>.<p>-1969ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರ ಸಲಹೆಯೊಂದಿಗೆ ರಾಜ್ಯಸಭೆ ಸದಸ್ಯರಾಗಿ ರಾಜಕೀಯ ಪ್ರವೇಶ.</p>.<p>-ನಾಲ್ಕು ಅವಧಿಗೆ ರಾಜ್ಯಸಭಾ ಸದಸ್ಯರಾಗಿದ್ದ ಅವರು ರಕ್ಷಣೆ, ವಾಣಜ್ಯ, ವಿದೇಶಾಂಗ ಮತ್ತು ಹಣಕಾಸು – ಪ್ರಮುಖ ನಾಲ್ಕು ಸಚಿವಾಲಯಗಳನ್ನು ನಿರ್ವಹಿಸಿದ ಏಕೈಕ ಸಚಿವ.</p>.<p>-ಹಣಕಾಸು ಸಚಿವರಾಗಿ ಹೆಚ್ಚು ಹೆಸರು ಮಾಡಿದವರು. ಏಳು ಬಜೆಟ್ ಮಂಡಿಸಿದ ಏಕೈಕ ಹಣಕಾಸು ಸಚಿವ ಎಂಬ ಖ್ಯಾತಿಯೂ ಇವರಿಗಿದೆ. 1984 ರಲ್ಲಿ, ಯೂರೋಮನಿ ನಿಯತಕಾಲಿಕೆಯು ಮುಖರ್ಜಿ ಅವರನ್ನು ವಿಶ್ವದ ಅತ್ಯುತ್ತಮ ಹಣಕಾಸು ಸಚಿವ ಎಂದು ಆಯ್ಕೆ ಮಾಡಿತ್ತು.</p>.<p><strong>ಇದನ್ನೂ ಓದಿ:</strong><a href="https://www.prajavani.net/photo/pranab-mukherjee-great-politician-and-leader-of-india-rare-images-757556.html" itemprop="url" target="_blank">Photos: ಭಾರತ ರತ್ನ ಪ್ರಣವ್ ಮುಖರ್ಜಿ ಅಪರೂಪದ ಚಿತ್ರಗಳು</a></p>.<p>-ಇಂದಿರಾಗಾಂಧಿ ಹತ್ಯೆ ನಂತರ, ಪ್ರಣಬ್ ಅವರಿಗೆ ಪ್ರಧಾನಿ ಹುದ್ದೆ ಕೈತಪ್ಪಿತ್ತು. ಆಗ ರಾಜೀವ್ಗಾಂಧಿ ಪ್ರಧಾನಿಯಾದರು. ಪ್ರಣಬ್ ಮುಖರ್ಜಿ ಕಾಂಗ್ರೆಸ್ ತ್ಯಜಿಸಿ, ರಾಷ್ಟ್ರೀಯ ಸಮಾಜವಾದಿ ಪಕ್ಷ ಸ್ಥಾಪಿಸಿದ್ದರು. 1989ರಲ್ಲಿ ರಾಜೀವ್ ಗಾಂಧಿ ಜತೆ, ತಮ್ಮ ಪಕ್ಷವನ್ನು ವಿಲೀನವಾಗಿಸಿದರು.</p>.<p>-ಭಾರತದ 13 ನೇ ರಾಷ್ಟ್ರಪತಿಯಾಗಿ ನೇಮಕಗೊಂಡ ನಂತರ ಪ್ರಣಬ್ ಮುಖರ್ಜಿ ಅವರು ಉಗ್ರ ಅಫ್ಜಲ್ ಗುರು ಮತ್ತು ಅಜ್ಮಲ್ ಕಸಬ್ ಸೇರಿದಂತೆ ಏಳು ಕೈದಿಗಳ ಕ್ಷಮಾದಾನದ ಅರ್ಜಿಗಳನ್ನು ತಿರಸ್ಕರಿಸಿದ್ದಾರೆ.</p>.<p>-ಸೆಪ್ಟೆಂಬರ್ 5, 2015ರ ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ನವದೆಹಲಿಯ ಪ್ರೆಸಿಡೆಂಟ್ ಎಸ್ಟೇಟ್ನಲ್ಲಿರುವ ಸರ್ಕಾರಿ ಮಾಧ್ಯಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಭಾರತದ ರಾಜಕೀಯ, ಇತಿಹಾಸ ಕುರಿತು ಪಾಠ ಮೂಲಕ ಇತಿಹಾಸ ನಿರ್ಮಿಸಿದರು.</p>.<p>-ಪ್ರಣಬ್ ಮುಖರ್ಜಿಯವರಿಗೆ 40 ವರ್ಷಗಳಿಂದ ನಿತ್ಯ ಡೈರಿ ಬರೆಯುವ ಹವ್ಯಾಸ. ಆ ಡೈರಿಯಲ್ಲಿರುವ ಮಾಹಿತಿಗಳನ್ನು ಪುಸ್ತಕ ರೂಪದಲ್ಲಿ ತರುವ ಕುರಿತು ಅನೇಕ ಬಾರಿ ಚರ್ಚೆ ನಡೆದಿತ್ತು. ಪುತ್ರಿ ಶರ್ಮಿಷ್ಠ ಮುಖರ್ಜಿ ಅವರು ಪುಸ್ತಕ ಪ್ರಕಟಿಸುತ್ತಾರೆಂದು ಹೇಳಲಾಗುತ್ತಿತ್ತು.</p>.<p>-ನಿತ್ಯ ಹದಿನೆಂಟು ಗಂಟೆ ಕೆಲಸ ಮಾಡುತ್ತಿದ್ದರು ಪ್ರಣಬ್ ಮುಖರ್ಜಿ. ದುರ್ಗಾಪೂಜೆಯ ದಿನ, ತಪ್ಪದೇ ತಮ್ಮ ತವರು ಮಿರತಿಗೆ ಭೇಟಿ ನೀಡುತ್ತಿದ್ದರು. ಆ ದಿನ ಹೊರತುಪಡಿಸಿ, ಇನ್ನು ಎಂದೂ ಕೆಲಸಕ್ಕೆ ರಜೆ ಹಾಕುತ್ತಿರಲಿಲ್ಲ.</p>.<p><strong>ಇವುಗಳನ್ನು ಓದಿ</strong></p>.<p><a href="https://cms.prajavani.net/india-news/former-president-pranab-mukherjee-and-congress-party-757513.html" itemprop="url">ಕಾಂಗ್ರೆಸ್ ಎಲೆ ಮೇಲಿನ ಜಲಬಿಂದು ಪ್ರಣವ್ </a></p>.<p><a href="https://cms.prajavani.net/india-news/former-president-pranab-mukherjee-passes-away-his-life-path-757512.html" itemprop="url">ಪ್ರಣವ್ ಸಂತಾಪ | ಅಪ್ಪಟ ಕಾಂಗ್ರೆಸ್ಸಿಗ ‘ಬಂಗಾಳಿ ಬಾಬು’ ನಡೆದು ಬಂದ ಹಾದಿ... </a></p>.<p><a href="https://cms.prajavani.net/karnataka-news/pranab-mukherjee-passed-away-karnataka-cm-bs-yediyurappa-congress-leade-siddaramaiah-hd-kumaraswamy-757530.html" itemprop="url">ಪ್ರಣವ್ ಮುಖರ್ಜಿ ನಿಧನಕ್ಕೆ ಯಡಿಯೂರಪ್ಪ, ಸಿದ್ದರಾಮಯ್ಯ ಸೇರಿ ರಾಜ್ಯ ನಾಯಕರ ಸಂತಾಪ </a></p>.<p><a href="https://cms.prajavani.net/op-ed/vyakti/profile-pranab-mukherjee-the-gentle-giant-of-indian-politics-757524.html" itemprop="url">ಭಾರತದ ಕಂಡ ಸಂಭಾವಿತ ರಾಜಕಾರಣಿ ಪ್ರಣಬ್ ಮುಖರ್ಜಿ </a></p>.<p><a href="https://cms.prajavani.net/india-news/pranab-mukherjee-death-news-pm-narendra-modi-ram-nath-kovind-rajnath-singh-and-other-dignitories-757518.html" itemprop="url">ಪ್ರಣವ್ ಮುಖರ್ಜಿ ನಿಧನ: ರಾಷ್ಟ್ರಪತಿ, ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ</a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>