ಚಿತ್ರಾವಳಿ: ಕೊರೆಯುವ ಚಳಿ, ಮಳೆ ನಡುವೆಯೂ ಪಟ್ಟು ಸಡಿಲಿಸದ ರೈತರು
ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಹಾಗೂ ಕನಿಷ್ಠ ಬೆಂಬಲ ಬೆಲೆಗೆ (ಎಂಎಸ್ಪಿ) ಕಾನೂನಿನ ಬಲ ನೀಡಬೇಕು ಎಂಬ ಬೇಡಿಕೆ ಕುರಿತು ಪಟ್ಟು ಸಡಿಲಿಸದ ರೈತರು, ಕೊರೆಯುವ ಚಳಿ ಮತ್ತು ಮಳೆ ನಡುವೆಯೂ ಧರಣಿ ಮುಂದುವರಿಸಿದ್ದಾರೆ. ಸರ್ಕಾರ ಜೊತೆಗೆ ಸೋಮವಾರ ನಡೆದ ಏಳನೇ ಸುತ್ತಿನ ಮಾತುಕತೆಯೂ ವಿಫಲವಾಗಿದ್ದು, ಅನಿಶ್ಚಿತತೆ ಮುಂದುವರಿದಿದೆ. ಮತ್ತೊಮ್ಮೆ ರೈತ ಸಂಘಟನೆಗಳು ಹಾಗೂ ಸರ್ಕಾರದ ನಡುವೆ ಜನವರಿ 8ರಂದು ಮಾತುಕತೆ ನಿಗದಿಯಾಗಿದೆ. (ಚಿತ್ರ ಕೃಪೆ: ಪಿಟಿಐ, ಎಎಫ್ಪಿ)