ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಯೋಜನೆಯಲ್ಲಿ ದುಡಿದ ಕಾರ್ಮಿಕರೊಂದಿಗೆ ಮಧ್ಯಾಹ್ನದ ಭೋಜನ ಸ್ವೀಕರಿಸಿ, ಅವರಿಗೆ ಹೂಮಳೆಗರೆದು ಪ್ರಧಾನಿ ನರೇಂದ್ರ ಮೋದಿ ಗೌರವ ಸಮರ್ಪಿಸಿದ್ದಾರೆ.ಕಾಶಿ ಕಾರಿಡಾರ್ ಉದ್ಘಾಟನೆ ಸೇರಿದಂತೆ ಹಲವು ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಮೋದಿ ಸೋಮವಾರ ಎರಡು ದಿನಗಳ ವಾರಾಣಸಿ ಪ್ರವಾಸ ಕೈಗೊಂಡಿದ್ದಾರೆ.ಸೋಮವಾರ ಬೆಳಗ್ಗೆ ಅವರು ಕಾಶಿ ಕಾರಿಡಾರ್ ಯೋಜನೆಗೆ ವಿಧ್ಯುಕ್ತ ಚಾಲನೆ ನೀಡಿದರು.ನಂತರ ಕಾರಿಡಾರ್ನಾದ್ಯಂತ ಸಂಚರಿಸಿದ ನರೇಂದ್ರ ಮೋದಿ ಅವರು, ಯೋಜನೆಯ ಕಾರ್ಮಿಕರೊಂದಿಗೆ ಕುಳಿತು ಮಧ್ಯಾಹ್ನದ ಭೋಜನ ಸ್ವೀಕರಿಸಿದರು. ಭೋಜನ ಸೇವಿಸುವ ವೇಳೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೂ ಮೋದಿ ಅವರೊಂದಿಗೆ ಇದ್ದರು. ನಂತರ ಕಾರ್ಮಿಕರಿಗೆ ಹೂಮಳೆಗರೆದ ಮೋದಿ, ಅವರಿಗೆ ಗೌರವ ಸಮರ್ಪಣೆ ಮಾಡಿದರು.ಮೋದಿ ಅವರ ವಾರಾಣಸಿ ಕಾರ್ಯಕ್ರಮ ಇಡೀ ದೇಶದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ.