ದೇವನಹಳ್ಳಿ: ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ಅವರ ಬೆಂಗಾವಲು ಕಾರು ಶನಿವಾರ ದೇವನಹಳ್ಳಿಯ ಸಾವಕನ ಹಳ್ಳಿ ಗೇಟ್ ಬಳಿ ಅಪಘಾತಕ್ಕೀಡಾಗಿದೆ.
ಸಚಿವರ ಬೆಂಗಾವಲು ಕಾರು ಬೈಕ್ ಮತ್ತು ಇನ್ನೋವಾ ಕಾರಿಗೆ ಗುದ್ದಿದ್ದು, ಅಪಘಾತ ಸಂಭವಿಸಿದರೂ ಸಚಿವರು ಕಾರು ನಿಲ್ಲಿಸಲಿಲ್ಲ.
ಬೈಕ್ ಸವಾರ ಮತ್ತು ಇನ್ನೋವಾ ಕಾರಿನಲ್ಲಿದ್ದ ಮೂವರಿಗೆ ಗಾಯಗಳಾಗಿವೆ.
ಅಪಘಾತ ಸಂಭವಿಸಿದರೂ ಮಾನವೀಯತೆ ಮರೆತು ಅಲ್ಲಿಂದ ಹೊರಟು ಹೋದ ಸಚಿವರ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.