'ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರಕ್ಕೆ ಸ್ಪರ್ಧಿಸಲು ಹೆದರಿ ತುಮಕೂರು ಕ್ಷೇತ್ರಕ್ಕೆ ಸ್ಪರ್ಧಿಸಲು ಬರುತ್ತಿದ್ದಾರೆ ಎಂದು ಬಿಜೆಪಿಯವರು ಹೇಳಿಕೆ ನೀಡುತ್ತಿದ್ದಾರೆ. ಆದರೆ, ದೇವೇಗೌಡರ ತಮ್ಮ ರಾಜಕೀಯ ಜೀವನದಲ್ಲಿ ಎಂದೂ, ಯಾರಿಗೂ ಹೆದರಿದವರಲ್ಲ. ಅವರದು ರಾಕ್ಷಸ ಫ್ಯಾಮಿಲಿ. ರಾಜಕೀಯ ಜೀವನದಲ್ಲಿ ಅನುಭವಿಸಿದ ಪೆಟ್ಟುಗಳಿಗೆ ಬೇರೆಯವರಾಗಿದ್ದರೆ ಮನೆ ಸೇರಿರುತ್ತಿದ್ದರು. ಆದರೆ, ದೇವೇಗೌಡರದ್ದು ಅಂತಹ ಜಾಯಮಾನವಲ್ಲ. 87 ವಯಸ್ಸಿನಲ್ಲೂ ರಾಜಕೀಯ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ' ಎಂದು ಹೇಳಿದರು.