<p><strong>ತುಮಕೂರು: </strong>‘ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸರಿಯಾಗಿ ಹರಿಯದೇ ಇರಲು ಎಚ್.ಡಿ.ರೇವಣ್ಣನೇ ಕಾರಣ’ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ನಾನು ಹಾಸನ ಜಿಲ್ಲೆಯ ಉಸ್ತುವರಿ ಸಚಿವನಾಗಿದ್ದ ವೇಳೆ, ಸಚಿವ ಎಚ್.ಡಿ.ರೇವಣ್ಣ ಹೇಮಾವತಿ ನೀರನ್ನು ತುಮಕೂರಿಗೆ ಬಿಡಬಾರದು ಎಂದು ಹೇಳುವ ಮೂಲಕ ಅಧಿಕಾರಿಗಳ ಮೇಲೆ ದರ್ಪ ಮಾಡುತ್ತಿದ್ದರು' ಎಂದು ಆರೋಪ ಮಾಡಿದರು.</p>.<p>‘ರೇವಣ್ಣ ನಡೆಯಿಂದ ಜಿಲ್ಲೆಗೆ ಹೇಮಾವತಿ ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ನೀರು ಬಿಟ್ಟಿದ್ದಕ್ಕೆ ದಾಖಲೆ ಇರುತ್ತಿತ್ತು. ಆದರೆ, ನೀರು ಏಕೆ ತುಮಕೂರಿಗೆ ಹರಿದಿಲ್ಲ ಎಂಬ ಬಗ್ಗೆ ಯಾವುದೇ ದಾಖಲಾತಿ ಇರುತ್ತಿರಲಿಲ್ಲ’ ಎಂದು ಹೇಳಿದರು.</p>.<p>'ತುಮಕೂರಿಗೆ ಬರುವ ನೀರನ್ನು ಮಧ್ಯೆದಲ್ಲೇ ತಡೆದು ಹಾಸನದ ನಾನಾ ಭಾಗಗಳಿಗೆ ಹರಿಸಿ, ದುರ್ಬಳಕೆ ಮಾಡಲಾಗುತ್ತಿತ್ತು. ಇದನ್ನು ರೇವಣ್ಣ ವ್ಯವಸ್ಥಿತವಾಗಿ ನಡೆಸುತ್ತಿದ್ದರು. ಈ ಬಗ್ಗೆ ನೇರವಾಗಿ ರೇವಣ್ಣ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದರು' ಎಂದು ರೇವಣ್ಣರ ಮೇಲೆ ನೇರವಾಗಿ ಆರೋಪ ಮಾಡಿದರು.</p>.<p><strong>ದೇವೇಗೌಡರಿಗೆ ಅಧಿಕಾರದ ದುರಾಸೆ</strong></p>.<p>'ದೇವೇಗೌಡ ಅವರು ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ತಮ್ಮ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಗೆ ಬಿಟ್ಟುಕೊಟ್ಟು ತುಮಕೂರಿಗೆ ಏಕೆ ಬಂದರು. ಅವರಿಗೆ ಇನ್ನೂ ಕುಟುಂಬ ರಾಜಕಾರಣದ ದುರಾಸೆ ಇದೆ. ಈ ನಡೆ ಅವರ ಅಧಿಕಾರದ ಆಸೆ, ದುರಾಸೆಯನ್ನು ತೋರಿಸುತ್ತಿದೆ' ಎಂದು ಟೀಕಿಸಿದರು.</p>.<p>ಏ.16ರಂದು ಅಮಿತ್ ಶಾ ರೋಡ್ ಶೋ: 'ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಪರ ರಾಷ್ಟ್ರ ಹಾಗೂ ರಾಜ್ಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಬಿಜೆಪಿ ಪಕ್ಷ ಅವರ ಜೊತೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಏ.16 ರಂದು ತುಮಕೂರಿಗೆ ಬಂದು ರೋಡ್ ಶೋ ಮೂಲಕ ಪ್ರಚಾರ ಮಾಡಲಿದ್ದಾರೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತುಮಕೂರು: </strong>‘ತುಮಕೂರು ಜಿಲ್ಲೆಗೆ ಹೇಮಾವತಿ ನೀರು ಸರಿಯಾಗಿ ಹರಿಯದೇ ಇರಲು ಎಚ್.ಡಿ.ರೇವಣ್ಣನೇ ಕಾರಣ’ ಎಂದು ಶಾಸಕ ಅರವಿಂದ ಲಿಂಬಾವಳಿ ಆರೋಪಿಸಿದರು.</p>.<p>ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ,‘ ನಾನು ಹಾಸನ ಜಿಲ್ಲೆಯ ಉಸ್ತುವರಿ ಸಚಿವನಾಗಿದ್ದ ವೇಳೆ, ಸಚಿವ ಎಚ್.ಡಿ.ರೇವಣ್ಣ ಹೇಮಾವತಿ ನೀರನ್ನು ತುಮಕೂರಿಗೆ ಬಿಡಬಾರದು ಎಂದು ಹೇಳುವ ಮೂಲಕ ಅಧಿಕಾರಿಗಳ ಮೇಲೆ ದರ್ಪ ಮಾಡುತ್ತಿದ್ದರು' ಎಂದು ಆರೋಪ ಮಾಡಿದರು.</p>.<p>‘ರೇವಣ್ಣ ನಡೆಯಿಂದ ಜಿಲ್ಲೆಗೆ ಹೇಮಾವತಿ ನೀರು ಸರಿಯಾಗಿ ಹರಿಯುತ್ತಿರಲಿಲ್ಲ. ನೀರು ಬಿಟ್ಟಿದ್ದಕ್ಕೆ ದಾಖಲೆ ಇರುತ್ತಿತ್ತು. ಆದರೆ, ನೀರು ಏಕೆ ತುಮಕೂರಿಗೆ ಹರಿದಿಲ್ಲ ಎಂಬ ಬಗ್ಗೆ ಯಾವುದೇ ದಾಖಲಾತಿ ಇರುತ್ತಿರಲಿಲ್ಲ’ ಎಂದು ಹೇಳಿದರು.</p>.<p>'ತುಮಕೂರಿಗೆ ಬರುವ ನೀರನ್ನು ಮಧ್ಯೆದಲ್ಲೇ ತಡೆದು ಹಾಸನದ ನಾನಾ ಭಾಗಗಳಿಗೆ ಹರಿಸಿ, ದುರ್ಬಳಕೆ ಮಾಡಲಾಗುತ್ತಿತ್ತು. ಇದನ್ನು ರೇವಣ್ಣ ವ್ಯವಸ್ಥಿತವಾಗಿ ನಡೆಸುತ್ತಿದ್ದರು. ಈ ಬಗ್ಗೆ ನೇರವಾಗಿ ರೇವಣ್ಣ ಅಧಿಕಾರಿಗಳ ಮೇಲೆ ಒತ್ತಡ ಹಾಕುತ್ತಿದ್ದರು' ಎಂದು ರೇವಣ್ಣರ ಮೇಲೆ ನೇರವಾಗಿ ಆರೋಪ ಮಾಡಿದರು.</p>.<p><strong>ದೇವೇಗೌಡರಿಗೆ ಅಧಿಕಾರದ ದುರಾಸೆ</strong></p>.<p>'ದೇವೇಗೌಡ ಅವರು ಹಾಸನ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳನ್ನು ತಮ್ಮ ಮೊಮ್ಮಕ್ಕಳಾದ ಪ್ರಜ್ವಲ್ ಮತ್ತು ನಿಖಿಲ್ ಗೆ ಬಿಟ್ಟುಕೊಟ್ಟು ತುಮಕೂರಿಗೆ ಏಕೆ ಬಂದರು. ಅವರಿಗೆ ಇನ್ನೂ ಕುಟುಂಬ ರಾಜಕಾರಣದ ದುರಾಸೆ ಇದೆ. ಈ ನಡೆ ಅವರ ಅಧಿಕಾರದ ಆಸೆ, ದುರಾಸೆಯನ್ನು ತೋರಿಸುತ್ತಿದೆ' ಎಂದು ಟೀಕಿಸಿದರು.</p>.<p>ಏ.16ರಂದು ಅಮಿತ್ ಶಾ ರೋಡ್ ಶೋ: 'ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜ್ ಪರ ರಾಷ್ಟ್ರ ಹಾಗೂ ರಾಜ್ಯ ನಾಯಕರು ಪ್ರಚಾರಕ್ಕೆ ಬರುತ್ತಾರೆ. ಬಿಜೆಪಿ ಪಕ್ಷ ಅವರ ಜೊತೆಯಿದೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಏ.16 ರಂದು ತುಮಕೂರಿಗೆ ಬಂದು ರೋಡ್ ಶೋ ಮೂಲಕ ಪ್ರಚಾರ ಮಾಡಲಿದ್ದಾರೆ' ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>