<p><strong>ಚಾಮರಾಜನಗರ:</strong> ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018–19ನೇ ಸಾಲಿನ ಮುಂಗಾರು ಅವಧಿಯಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿಸುವ ಸಲುವಾಗಿ ನೋಂದಣಿಪ್ರಕ್ರಿಯೆಆರಂಭವಾಗಿದ್ದು, ಜನವರಿ 15ರವರೆಗೆ ನೋಂದಣಿ ನಡೆಯಲಿದೆ.</p>.<p>ಸರ್ಕಾರ, ಪ್ರತಿ ಕ್ವಿಂಟಲ್ ರಾಗಿಗೆ ₹2,897 ದರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಸಲಾಗುತ್ತಿದ್ದು, ಗರಿಷ್ಠ ಮಿತಿ 75 ಕ್ವಿಂಟಲ್. ರೈತರು ಬೆಳೆದಿರುವ ರಾಗಿಯನ್ನು ನೋಂದಣಿಕೇಂದ್ರದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿದಂತಹ ರೈತರಿಂದ ನೇರವಾಗಿ ಖರೀದಿ ಏಜೆನ್ಸಿಗಳ ಮೂಲಕ ಜಿಲ್ಲಾಡಳಿತ ಖರೀದಿಸಲಿದೆ. ಸಂಗ್ರಹಣಾ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ನೇಮಕ ಮಾಡಲಾಗಿದೆ.</p>.<p>ನೋಂದಣಿ ಮಾಡುವ ಕೇಂದ್ರದಲ್ಲಿ ರಾಗಿಯ ಮಾದರಿಯನ್ನು ಹಾಜರು ಪಡಿಸಬೇಕು.ರೈತರು ಅವರ ಸ್ವಂತ ಖರ್ಚಿನಲ್ಲಿ ಖರೀದಿ ಮತ್ತು ಸಂಗ್ರಹ ಮಾಡುವ ಸಂಗ್ರಹಣಾ ಸ್ಥಳಕ್ಕೆ ತರಬೇಕು. ರಾಗಿಯನ್ನು ಒಂದು ಬಾರಿ ಉಪಯೋಗಿಸಿ ಹಾಗೂ ಉಪಯೋಗಿಸಲು ಯೋಗ್ಯವಿರುವ (50 ಕೆ.ಜಿ ಸಾಮರ್ಥ್ಯದ) ಗೋಣಿ ಚೀಲಗಳಲ್ಲಿ ತರಬೇಕು.</p>.<p>ರಾಗಿಯ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆಯಿಂದ ಗುಣಮಟ್ಟದ ಪರೀಕ್ಷಕರನ್ನು ನೇಮಿಸಲಾಗಿದೆ. ಗುಣಮಟ್ಟ ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ದೃಢಪಟ್ಟರೆ ಮಾತ್ರ ಖರೀದಿಸಲಾಗುವುದು ಎಂದುಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.</p>.<p>ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ರೈತರು 2018–19ನೇ ಸಾಲಿನ ಕಂಪ್ಯೂಟರ್ ಪಹಣಿ ಮತ್ತು 2018ನೇ ಸಾಲಿನಲ್ಲಿ ಮುಂಗಾರಿನಲ್ಲಿ ಎಷ್ಟು ಎಕರೆಯಲ್ಲಿ ರಾಗಿ ಬೆಳೆದಿದ್ದಾರೆ ಎಂಬ ಬಗ್ಗೆ ಹಾಗೂ ರೈತರ ಮಾದರಿ ಸಹಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ದೃಢೀಕರಿಸಿರುವ ಪತ್ರಗಳನ್ನು ಕಂದಾಯ ನಿರೀಕ್ಷಕ (ಆರ್.ಐ) ಅವರಿಂದ ಅನುಮೋದನೆಗೆ ಒಳಗೊಂಡ ದಾಖಲೆಗಳನ್ನು ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸಲ್ಲಿಸಬೇಕು.</p>.<p>ರೈತರ ಆಧಾರ್ ದೃಢೀಕೃತ ಸಂಖ್ಯೆಯ ನೋಂದಾವಣೆ ಕಡ್ಡಾಯವಾಗಿದ್ದು, ಹಾಗೂ ಅಂತಹ ರೈತರಿಂದ ಮಾತ್ರ ಕನಿಷ್ಠಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿಸಲಾಗುತ್ತದೆ. ಹಣವನ್ನು ರೈತರ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ನೇರವಾಗಿ ಜಮೆ ಮಾಡಲಾಗುತ್ತದೆ. ರೈತರು ಬ್ಯಾಂಕ್ ಖಾತೆಯ ವಿವರ ಐ.ಎಫ್.ಎಸ್.ಸಿ ಕೋಡ್ ಸೇರಿದಂತೆ ಇತರೆ ವಿವರಗಳನ್ನು ದೃಢೀಕರಿಸಿ ನೀಡಬೇಕು.</p>.<p>ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರು, ತಹಶೀಲ್ದಾರರು, ಉಗ್ರಾಣ ವ್ಯವಸ್ಥಾಪಕರ ಗಮನಕ್ಕೆ ತರಬಹುದು. ದೂರುಗಳನ್ನು ದೂರವಾಣಿ ಸಂಖ್ಯೆ 08226-224660, ಮೊಬೈಲ್ 9737875870 ಮತ್ತು 7760967049ಗೆಕರೆಮಾಡಿ ನೀಡಬಹುದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p class="Briefhead"><strong>5 ಖರೀದಿ ಕೇಂದ್ರಗಳು</strong><br />ಖರೀದಿ ಕೇಂದ್ರಗಳನ್ನು ಚಾಮರಾಜನಗರ ಮತ್ತು ಕೊಳ್ಳೇಗಾಲದ ರಾಜ್ಯ ಉಗ್ರಾಣ ನಿಗಮ, ಗುಂಡ್ಲುಪೇಟೆ, ಸಂತೇಮರಹಳ್ಳಿ ಮತ್ತು ಹನೂರಿನ ಎ.ಪಿ.ಎಂ.ಸಿ ಅವರಣದಲ್ಲಿ ತೆರೆಯಲಾಗಿದೆ. ರೈತರು ಈ ಕೇಂದ್ರಗಳಲ್ಲೇ ಜನವರಿ 15ರವರೆಗೆ ನೋಂದಣಿ ಮಾಡಬೇಕು.ಜನವರಿ 16 ರಿಂದ ಮಾರ್ಚ್ 31ರ ವರೆಗೆ ನೋಂದಾಯಿಸಿದ ರೈತರಿಂದ ರಾಗಿಯನ್ನು ಖರೀದಿಸಲಾಗುತ್ತದೆ.</p>.<p><strong>ಅಂಕಿ ಅಂಶ</strong><br />* ₹2,897 –ಪ್ರತಿ ಕ್ವಿಂಟಲ್ ರಾಗಿಗೆ ಸರ್ಕಾರ ನಿಗದಿಪಡಿಸಿರುವ ದರ<br />* 75 ಕ್ವಿಂಟಲ್ –ಗರಿಷ್ಠ ಖರೀದಿ ಮಿತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಾಮರಾಜನಗರ:</strong> ಜಿಲ್ಲೆಯಲ್ಲಿ ಕನಿಷ್ಠ ಬೆಂಬಲಬೆಲೆ ಯೋಜನೆಯಡಿ 2018–19ನೇ ಸಾಲಿನ ಮುಂಗಾರು ಅವಧಿಯಲ್ಲಿ ರೈತರಿಂದ ನೇರವಾಗಿ ರಾಗಿ ಖರೀದಿಸುವ ಸಲುವಾಗಿ ನೋಂದಣಿಪ್ರಕ್ರಿಯೆಆರಂಭವಾಗಿದ್ದು, ಜನವರಿ 15ರವರೆಗೆ ನೋಂದಣಿ ನಡೆಯಲಿದೆ.</p>.<p>ಸರ್ಕಾರ, ಪ್ರತಿ ಕ್ವಿಂಟಲ್ ರಾಗಿಗೆ ₹2,897 ದರ ನಿಗದಿ ಪಡಿಸಿದೆ. ಸಣ್ಣ ಮತ್ತು ಅತಿ ಸಣ್ಣ ರೈತರಿಂದ ಮಾತ್ರ ರಾಗಿ ಖರೀದಿಸಲಾಗುತ್ತಿದ್ದು, ಗರಿಷ್ಠ ಮಿತಿ 75 ಕ್ವಿಂಟಲ್. ರೈತರು ಬೆಳೆದಿರುವ ರಾಗಿಯನ್ನು ನೋಂದಣಿಕೇಂದ್ರದಲ್ಲಿ ಆನ್ಲೈನ್ ಮೂಲಕ ನೋಂದಣಿ ಮಾಡಿದಂತಹ ರೈತರಿಂದ ನೇರವಾಗಿ ಖರೀದಿ ಏಜೆನ್ಸಿಗಳ ಮೂಲಕ ಜಿಲ್ಲಾಡಳಿತ ಖರೀದಿಸಲಿದೆ. ಸಂಗ್ರಹಣಾ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಉಗ್ರಾಣ ನಿಗಮವನ್ನು ನೇಮಕ ಮಾಡಲಾಗಿದೆ.</p>.<p>ನೋಂದಣಿ ಮಾಡುವ ಕೇಂದ್ರದಲ್ಲಿ ರಾಗಿಯ ಮಾದರಿಯನ್ನು ಹಾಜರು ಪಡಿಸಬೇಕು.ರೈತರು ಅವರ ಸ್ವಂತ ಖರ್ಚಿನಲ್ಲಿ ಖರೀದಿ ಮತ್ತು ಸಂಗ್ರಹ ಮಾಡುವ ಸಂಗ್ರಹಣಾ ಸ್ಥಳಕ್ಕೆ ತರಬೇಕು. ರಾಗಿಯನ್ನು ಒಂದು ಬಾರಿ ಉಪಯೋಗಿಸಿ ಹಾಗೂ ಉಪಯೋಗಿಸಲು ಯೋಗ್ಯವಿರುವ (50 ಕೆ.ಜಿ ಸಾಮರ್ಥ್ಯದ) ಗೋಣಿ ಚೀಲಗಳಲ್ಲಿ ತರಬೇಕು.</p>.<p>ರಾಗಿಯ ಗುಣಮಟ್ಟ ಪರಿಶೀಲಿಸಲು ಕೃಷಿ ಇಲಾಖೆಯಿಂದ ಗುಣಮಟ್ಟದ ಪರೀಕ್ಷಕರನ್ನು ನೇಮಿಸಲಾಗಿದೆ. ಗುಣಮಟ್ಟ ಪರಿಶೀಲಿಸಿ ಉತ್ತಮ ಗುಣಮಟ್ಟವೆಂದು ದೃಢಪಟ್ಟರೆ ಮಾತ್ರ ಖರೀದಿಸಲಾಗುವುದು ಎಂದುಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ತಿಳಿಸಿದ್ದಾರೆ.</p>.<p>ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ರೈತರು 2018–19ನೇ ಸಾಲಿನ ಕಂಪ್ಯೂಟರ್ ಪಹಣಿ ಮತ್ತು 2018ನೇ ಸಾಲಿನಲ್ಲಿ ಮುಂಗಾರಿನಲ್ಲಿ ಎಷ್ಟು ಎಕರೆಯಲ್ಲಿ ರಾಗಿ ಬೆಳೆದಿದ್ದಾರೆ ಎಂಬ ಬಗ್ಗೆ ಹಾಗೂ ರೈತರ ಮಾದರಿ ಸಹಿಯನ್ನು ಗ್ರಾಮ ಲೆಕ್ಕಾಧಿಕಾರಿಗಳು ದೃಢೀಕರಿಸಿರುವ ಪತ್ರಗಳನ್ನು ಕಂದಾಯ ನಿರೀಕ್ಷಕ (ಆರ್.ಐ) ಅವರಿಂದ ಅನುಮೋದನೆಗೆ ಒಳಗೊಂಡ ದಾಖಲೆಗಳನ್ನು ಖರೀದಿ ಕೇಂದ್ರದ ಅಧಿಕಾರಿಗಳಿಗೆ ಸಲ್ಲಿಸಬೇಕು.</p>.<p>ರೈತರ ಆಧಾರ್ ದೃಢೀಕೃತ ಸಂಖ್ಯೆಯ ನೋಂದಾವಣೆ ಕಡ್ಡಾಯವಾಗಿದ್ದು, ಹಾಗೂ ಅಂತಹ ರೈತರಿಂದ ಮಾತ್ರ ಕನಿಷ್ಠಬೆಂಬಲಬೆಲೆ ಯೋಜನೆಯಡಿ ರಾಗಿ ಖರೀದಿಸಲಾಗುತ್ತದೆ. ಹಣವನ್ನು ರೈತರ ಬ್ಯಾಂಕ್ ಖಾತೆಗೆ ಆನ್ಲೈನ್ ಮೂಲಕ ನೇರವಾಗಿ ಜಮೆ ಮಾಡಲಾಗುತ್ತದೆ. ರೈತರು ಬ್ಯಾಂಕ್ ಖಾತೆಯ ವಿವರ ಐ.ಎಫ್.ಎಸ್.ಸಿ ಕೋಡ್ ಸೇರಿದಂತೆ ಇತರೆ ವಿವರಗಳನ್ನು ದೃಢೀಕರಿಸಿ ನೀಡಬೇಕು.</p>.<p>ಯಾವುದೇ ದೂರುಗಳಿದ್ದಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕರು, ತಹಶೀಲ್ದಾರರು, ಉಗ್ರಾಣ ವ್ಯವಸ್ಥಾಪಕರ ಗಮನಕ್ಕೆ ತರಬಹುದು. ದೂರುಗಳನ್ನು ದೂರವಾಣಿ ಸಂಖ್ಯೆ 08226-224660, ಮೊಬೈಲ್ 9737875870 ಮತ್ತು 7760967049ಗೆಕರೆಮಾಡಿ ನೀಡಬಹುದು ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.</p>.<p class="Briefhead"><strong>5 ಖರೀದಿ ಕೇಂದ್ರಗಳು</strong><br />ಖರೀದಿ ಕೇಂದ್ರಗಳನ್ನು ಚಾಮರಾಜನಗರ ಮತ್ತು ಕೊಳ್ಳೇಗಾಲದ ರಾಜ್ಯ ಉಗ್ರಾಣ ನಿಗಮ, ಗುಂಡ್ಲುಪೇಟೆ, ಸಂತೇಮರಹಳ್ಳಿ ಮತ್ತು ಹನೂರಿನ ಎ.ಪಿ.ಎಂ.ಸಿ ಅವರಣದಲ್ಲಿ ತೆರೆಯಲಾಗಿದೆ. ರೈತರು ಈ ಕೇಂದ್ರಗಳಲ್ಲೇ ಜನವರಿ 15ರವರೆಗೆ ನೋಂದಣಿ ಮಾಡಬೇಕು.ಜನವರಿ 16 ರಿಂದ ಮಾರ್ಚ್ 31ರ ವರೆಗೆ ನೋಂದಾಯಿಸಿದ ರೈತರಿಂದ ರಾಗಿಯನ್ನು ಖರೀದಿಸಲಾಗುತ್ತದೆ.</p>.<p><strong>ಅಂಕಿ ಅಂಶ</strong><br />* ₹2,897 –ಪ್ರತಿ ಕ್ವಿಂಟಲ್ ರಾಗಿಗೆ ಸರ್ಕಾರ ನಿಗದಿಪಡಿಸಿರುವ ದರ<br />* 75 ಕ್ವಿಂಟಲ್ –ಗರಿಷ್ಠ ಖರೀದಿ ಮಿತಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>