ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಜೀವನ (ಹಿಂದಿನ ಅಂಕಣಗಳು)

ADVERTISEMENT

ಭವದ ಭವ್ಯವು ದಿವದ ದಿವ್ಯಕ್ಕೆ ಸಮನಹುದೆ?

ಭಾಷೆ ತಿಳಿಯದ ಊರಿನಲ್ಲಿ, ಹೆಜ್ಜೆ ಗೊತ್ತಿರದ ಬಯಲಾಟದ ಹಾದಿಯಲ್ಲಿ ನನ್ನನ್ನು ಕೈಹಿಡಿದು ನಡೆಸಿದ್ದು ‘ಹಸಿವೆ’ಯೇ ಹೊರತು ಮತ್ತೊಂದಲ್ಲ. ಹಸಿವೆ ಮರೆತು ಬದುಕಿದ ದಿನಗಳದೆಷ್ಟೊ! ಮರೆಯುವುದಕ್ಕಾದರೂ ಹಸಿವೆ ಬೇಕಲ್ಲ !
Last Updated 12 ಅಕ್ಟೋಬರ್ 2013, 19:30 IST
ಭವದ ಭವ್ಯವು ದಿವದ ದಿವ್ಯಕ್ಕೆ ಸಮನಹುದೆ?

ಏಕತಾಳದಲ್ಲಿ ಶಾಲೆಯ ಗಂಟೆಯೂ ಚೆಂಡೆಯ ನುಡಿತವೂ

ರಾತ್ರಿ ಮನೆ ಬಿಟ್ಟಿರಲಾರೆವು, ನಿದ್ದೆಯನ್ನು ಜೈಸಲಾರೆವು ಎನ್ನುವವರು ಯಕ್ಷಗಾನ ಕಲಾವಿದರಾಗಲಾರರು. ಒಳ್ಳೆಯ ಯಕ್ಷಗಾನ ಪ್ರೇಕ್ಷಕನಾಗುವವನೂ ನಿದ್ದೆಯನ್ನು ತೊರೆಯಬೇಕಾಗುತ್ತದೆ. ಈಗ ಬೆಳಿಗ್ಗೆ, ಮಧ್ಯಾಹ್ನ, ಸಂಜೆ ಎಲ್ಲ ಸಮಯಗಳಲ್ಲಿ ಕಾಲಮಿತಿಯ ಯಕ್ಷಗಾನ ಪ್ರದರ್ಶನಗಳು ಆಯೋಜನೆಗೊಳ್ಳಲಾರಂಭಿಸಿದ ಮೇಲೆ ನಿದ್ದೆ ಬಿಡಲೇಬೇಕೆಂಬ ಕಡ್ಡಾಯ ತಪ್ಪಿದೆ.
Last Updated 5 ಅಕ್ಟೋಬರ್ 2013, 19:30 IST
ಏಕತಾಳದಲ್ಲಿ ಶಾಲೆಯ ಗಂಟೆಯೂ ಚೆಂಡೆಯ ನುಡಿತವೂ

ಕನ್ನಡದ ಕಡಲತಡಿಯಿಂದ ಸಾವಂತವಾಡಿಯವರೆಗೂ

ಯಕ್ಷಗಾನವನ್ನು ದಶಾವತಾರ ಕಲೆ ಎಂದೂ ಗುರುತಿಸುತ್ತಾರೆ. ಆದರೆ, ಇದೇ ಹೆಸರಿನ ಮತ್ತೊಂದು ಕಲೆ ಮಹಾರಾಷ್ಟ್ರದಲ್ಲಿ ಇದೆಯೆಂದು ಗೊತ್ತಾದುದು ೮೦ರ ದಶಕದಲ್ಲಿ. ವಿಜಯಕುಮಾರ್ ಫಾತೆರ್ಪಕರ್ ಎಂಬ ಸಹೃದಯಿ ವ್ಯಕ್ತಿ ಯಕ್ಷಗಾನ ಮತ್ತು ಶಿವರಾಮ ಕಾರಂತರ ಮೇಲಿನ ಅಭಿಮಾನದಿಂದ ದೂರದ ಸಾವಂತವಾಡಿಯಿಂದ ಉಡುಪಿಗೆ ಬಂದಿದ್ದರು.
Last Updated 28 ಸೆಪ್ಟೆಂಬರ್ 2013, 19:59 IST
ಕನ್ನಡದ ಕಡಲತಡಿಯಿಂದ ಸಾವಂತವಾಡಿಯವರೆಗೂ

ಭಾವದಲ್ಲಿ ಸಂವಹನಿಸುವ ಕಲಾಚೇತನರು

ನಾನಾ ಮನಸ್ಥಿತಿಯಲ್ಲಿ ಚದುರಿದ ಮಕ್ಕಳ ಕ್ರಿಯಾಶೀಲತೆಯನ್ನು ಯಕ್ಷಗಾನವೆಂಬ ಒಂದೇ ಪಾತ್ರದಲ್ಲಿ ಹರಿಯಬಿಟ್ಟಾಗ ಅದು ಅರಳುವ ರೀತಿಗೆ ಬೆರಗುಪಡುತ್ತಿರುವಾಗಲೇ ಅಲ್ಲಿಯೇ ಎಂಟು ದಿನ ಯಕ್ಷಗಾನ ಕಾರ್ಯಾಗಾರವನ್ನು ನಡೆಸುವ ಅವಕಾಶವೂ ಸಿಕ್ಕಿತು.
Last Updated 21 ಸೆಪ್ಟೆಂಬರ್ 2013, 19:59 IST
ಭಾವದಲ್ಲಿ ಸಂವಹನಿಸುವ ಕಲಾಚೇತನರು

ಯಕ್ಷರ ಲೋಕಕ್ಕೆ ಆಕಾಶಮಾರ್ಗದಲ್ಲಿ ಬಂದಿಳಿದ ಯಕ್ಷಿಣಿ!

ಯಕ್ಷಗಾನವನ್ನು ಕಲಿಯಲೇಬೇಕೆಂಬ ದೃಢನಿರ್ಧಾರದೊಂದಿಗೆ ಬಂದಂತಿದ್ದ ಜರ್ಮನಿಯ ಹುಡುಗಿ ಕ್ಯಾಥರಿನ್ ಬೈಂಡರ್ ಸಂವಹನಕ್ಕೆ ಅಗತ್ಯವಿರುವ ಕನ್ನಡ ಭಾಷೆಯನ್ನೂ ಆರೇ ತಿಂಗಳಿನಲ್ಲಿ ಕಲಿತು ಮತ್ತೆ ಯಕ್ಷಗಾನ ಕೇಂದ್ರದ ಕದ ತಟ್ಟಿದಳು. ಪಾಶ್ಚಾತ್ಯರು ಪೌರಾತ್ಯ ಭಾಷೆ- ಸಂಸ್ಕೃತಿಗಳನ್ನು ಕಲಿಯುವುದರಲ್ಲಿ ಯಾವತ್ತೂ ಮುಂದು.
Last Updated 14 ಸೆಪ್ಟೆಂಬರ್ 2013, 19:59 IST
ಯಕ್ಷರ ಲೋಕಕ್ಕೆ ಆಕಾಶಮಾರ್ಗದಲ್ಲಿ ಬಂದಿಳಿದ ಯಕ್ಷಿಣಿ!

ಕಲಾರಾಘವನ ನಿರೀಕ್ಷೆಯಲ್ಲಿ ಲೌಕಿಕ ಶಬರಿ

ಗುರುಗಳಾದ ಗುಂಡಿಬೈಲು ನಾರಾಯಣ ಶೆಟ್ಟರ ಮನೆಯ ಚಾವಡಿಯಲ್ಲಿ ಕಣ್ಣು ತಿಕ್ಕುತ್ತ ಎದ್ದಾಗ ಮೂಡಣ ಘಟ್ಟದ ಮರೆಯಲ್ಲಿ ಸೂರ್ಯನೂ ಮೆಲ್ಲನೆ ಮೂಡುತ್ತಿದ್ದ. ಊಟ- ಉಪಾಹಾರಕ್ಕಂತೂ ಅಲ್ಲಿ ತತ್ವಾರವಿಲ್ಲದ ಕಾರಣ ೭೦ರ ದಶಕದಲ್ಲಿ ಅಲ್ಲಿಯೇ ಗಟ್ಟಿ ಬಿಡಾರ ಹೂಡಿದ್ದೆ.
Last Updated 7 ಸೆಪ್ಟೆಂಬರ್ 2013, 19:59 IST
ಕಲಾರಾಘವನ ನಿರೀಕ್ಷೆಯಲ್ಲಿ ಲೌಕಿಕ ಶಬರಿ

ಸಂಪ್ರದಾಯದ ಬೆಳಕಿನಲ್ಲಿ ಹೊಳೆದ ಹೊಸ ಹಾದಿ

ಬಡಗುತಿಟ್ಟಿನ ಯಕ್ಷಗಾನದಲ್ಲಿ ಕೃಷ್ಣನ ಪಾತ್ರವನ್ನು ಕೇದಿಗೆ- ಮುಂದಲೆಯ ಪುಂಡುವೇಷಕ್ಕಿಂತ ಭಿನ್ನವಾಗಿ ಸೀರೆ ಉಡಿಸಿ ಭಿನ್ನ ರೀತಿಯಲ್ಲಿ ಏಕೆ ಮಾಡುತ್ತಾರೆ ಎಂಬ ಬಗ್ಗೆ ಅನೇಕರು ವಿವೇಚನೆ ನಡೆಸಿರಬಹುದು. ನಾನು ಕೂಡ ‘ಹಾಗೇಕೆ?’ ಎಂದು ಕೇಳಿದಾಗ ಕಾರಂತರು ಕಿರುನಗೆಬೀರಿದರು. ಆ ಪ್ರಶ್ನೆಯೇ ಅವರಿಗೆ ಸಂತೋಷಕೊಟ್ಟಿರಬೇಕು. “ನಾನು ಇಂಥ ವಿಷಯಗಳ ಬಗ್ಗೆ ಅಲ್ಲಲ್ಲಿ ಬರೆದಿದ್ದೆ.
Last Updated 31 ಆಗಸ್ಟ್ 2013, 19:59 IST
ಸಂಪ್ರದಾಯದ ಬೆಳಕಿನಲ್ಲಿ ಹೊಳೆದ ಹೊಸ ಹಾದಿ
ADVERTISEMENT

ಗಾಂಧರ್ವ ವೇದಿಗಳ ನಡುವೆ ಯಕ್ಷರ ಗಾನ

ಮೇರಾ ಜನ್ಮ್ ಸಾರ್ಥಕ್ ಹುವಾ. ಐಸಾ ಕಲಾ ಪ್ರಕಾರ್ ಕೋ ಮೈ ನೆ ಅಭಿ ತಕ್ ನ ದೇಖಾ, ಆಪ್ ಲೋಗ್ ಮುಜೆ ರಾಮಾಯಣ್ ಕಾಲ್ ತಕ್ ಲೇ ಕೆ ಗಯೇ. ಜಟಾಯು ಜೈ ಸಾ ಪರಿಸ್ಥಿತಿ ಕಿಸೀ ಕೋ ಭೀ ನಹೀ ಆನಾ ಚಾಹೀಯೆ, ಮೈ ಎ ಶೋ ಕೋ ಕಭೀ ಭೀ ನಹೀ ಭೂಲೂಂಗ.
Last Updated 24 ಆಗಸ್ಟ್ 2013, 19:59 IST
ಗಾಂಧರ್ವ ವೇದಿಗಳ ನಡುವೆ ಯಕ್ಷರ ಗಾನ

ಪುರಾಣತನ್ಮಯ ಪಾತ್ರದೊಳಗೆ ಲೌಕಿಕ ಜಾಗೃತಿಯ ಗುಪ್ತಗಾಮಿನಿ

ಮೆಲ್ಲನೆ ಬಾಗಿಲು ತಟ್ಟಿದೆ. ತೆರೆದುಕೊಂಡಿತು. ಒಳಗೆ ಅಡಿಯಿಟ್ಟೆ. ಶಿವರಾಮ ಕಾರಂತರು ಬಂದವರೇ, “ಏನು ಬಂದದ್ದು...” ಎಂದು ವಿಚಾರಿಸಿದರು.
Last Updated 17 ಆಗಸ್ಟ್ 2013, 19:59 IST
ಪುರಾಣತನ್ಮಯ ಪಾತ್ರದೊಳಗೆ ಲೌಕಿಕ ಜಾಗೃತಿಯ ಗುಪ್ತಗಾಮಿನಿ

ಕಡಲಿನಲ್ಲಿ ಕಲೆತುಬಿಡಲಿ ಹಲವುಶೈಲಿ ಸರಿತೆಗಳು!

`ನನ್ನ ದುಡ್ಡಿನ ಪರ್ಸ್ ಕಳೆದು ಹೋಯಿತು' ಎಂದು ಹುಡುಗಿ ಅಳಲಾರಂಭಿಸಿದಾಗ ಮಾಯಾ ರಾವ್ ಅಮ್ಮನಂತೆ ಅವಳ ತಲೆ ನೇವರಿಸಿ ಸಮಾಧಾನ ಹೇಳಿದರು. 1981ರ ಒಂದು ದಿನವದು. ದೂರದ ಜರ್ಮನಿಯಲ್ಲಿ ಇಳಿದಾಗಿದೆ.
Last Updated 10 ಆಗಸ್ಟ್ 2013, 19:59 IST
ಕಡಲಿನಲ್ಲಿ ಕಲೆತುಬಿಡಲಿ ಹಲವುಶೈಲಿ ಸರಿತೆಗಳು!
ADVERTISEMENT