‘ನಾನು ಕೋಲ್ಕತ್ತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೆ. ಹೊಸ ವಾತಾವರಣಕ್ಕೆ ಹೊಂದಿಕೊಳ್ಳಲು, ಹೊಸ ಗೆಳೆಯರನ್ನು ಮಾಡಿಕೊಳ್ಳಲು ಸಾಕಷ್ಟು ಸಮಯ ಹಿಡಿಯಿತು. ಯಾರೂ ಬಲವಂತ ಮಾಡದಿದ್ದರೂ ನಾನು ಓದಿನಲ್ಲಿ ಬಹುಬೇಗ ಕುದುರಿಕೊಂಡೆ’ ಎಂದು ಅಭಿಜ್ಞಾನ ಹೇಳುತ್ತಾನೆ. ಲೀಲಾವತಿಬಾಯಿ ಪೋದ್ದಾರ್ ಶಾಲೆಯ ವಿದ್ಯಾರ್ಥಿಯಾದ ಈತ, ತನ್ನ ಯಶಸ್ಸಿನಲ್ಲಿ ಅಮ್ಮನ ಪಾತ್ರ ಹಿರಿದಾಗಿದೆ ಎಂದು ಹೇಳಲು ಮರೆಯುವುದಿಲ್ಲ.