<p>ಸೃಜನಶೀಲ ವ್ಯಕ್ತಿಯ ಕೈಗೆ ಏನೇ ಸಿಕ್ಕರೂ ಅದು ವ್ಯರ್ಥವಾಗುವುದಿಲ್ಲ. ಏಕೆಂದರೆ ಆತ ಕಸದಿಂದಲೂ ರಸ ತೆಗೆಯುವ ಚತುರ. ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಬಸವರಾಜ್ ಅಂತಹ ಒಬ್ಬ ಚತುರ ಕಲಾವಿದ.</p>.<p>ಬಿಡುವಿನ ವೇಳೆಯಲ್ಲಿ ದ್ವಿಚಕ್ರವಾಹನಗಳ ಬಿಡಿ ಭಾಗಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸುತ್ತಾರೆ. ಗುಜರಿ ಅಂಗಡಿಗಳಲ್ಲಿ ಅಲೆದು ವಾಹನಗಳ ಬಿಡಿ ಭಾಗಗಳನ್ನು ಸಂಗ್ರಹಿಸುವುದು ಇವರ ಆಸಕ್ತಿಗಳಲ್ಲೊಂದು. ಹೀಗೆ ಖರೀದಿಸಿ ತಂದ ಬಿಡಿ ಭಾಗಗಳನ್ನು ಕಲಾತ್ಮಕ ವಿನ್ಯಾಸಕ್ಕೊಳಪಡಿಸಿ ವಿಶಿಷ್ಟ ಕಲಾಕೃತಿಗಳನ್ನಾಗಿಸುತ್ತಾರೆ.</p>.<p>ಈ ಗುಜರಿ ಕಲಾಕೃತಿಗಳನ್ನು ಪ್ರತ್ಯಕ್ಷ ನಿಂತು ನೋಡಿದರೆ ಕುತೂಹಲ ಗರಿಗೆದರುತ್ತದೆ. ಆಮೆ, ಸೈಕಲ್, ಟ್ರ್ಯಾಕ್ಟರ್, ರೈಲ್ವೆ ಎಂಜಿನ್, ಹಕ್ಕಿ, ಕೀಟ ಹೀಗೆ ವಿಭಿನ್ನ ಮಾದರಿಯ ಕಲಾಕೃತಿಗಳು ಇವರ ಗ್ಯಾರೇಜಿನಲ್ಲಿ ಅರಳಿ ನಿಂತಿವೆ. ಕಲಾಸಕ್ತರು ಒಳ್ಳೆಯ ಬೆಲೆಗೆ ಕಲಾಕೃತಿಗಳನ್ನು ಖರೀದಿಸುವುದೂ ಉಂಟು.</p>.<p>ಬಸವರಾಜ್ ಅವರು ಒಂದೇ ಬಗೆ ಕಲಾಕೃತಿಗಳನ್ನು ರೂಪಿಸುವುದಿಲ್ಲ. ಒಮ್ಮೆ ಮಾಡಿದ ಮಾದರಿಯನ್ನು ಮತ್ತೆ ಮಾಡುವುದಿಲ್ಲ. ಪ್ರವಾಸಿ ತಾಣಗಳು ಮತ್ತು ಪಾರ್ಕ್ಗಳಲ್ಲಿ ವಿಭಿನ್ನ, ವಿಶೇಷವೆನ್ನಿಸುವ ಗುಜರಿ ಕಲಾಕೃತಿಗಳನ್ನು ನಿರ್ಮಿಸಬೇಕು ಎನ್ನುವುದು ಅವರ ಮಹದಾಸೆ.</p>.<p>*</p>.<p><strong>ಬಸವರಾಜ್ </strong><br /> <strong>ಸಂಪರ್ಕಕ್ಕೆ: 99801 78013.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸೃಜನಶೀಲ ವ್ಯಕ್ತಿಯ ಕೈಗೆ ಏನೇ ಸಿಕ್ಕರೂ ಅದು ವ್ಯರ್ಥವಾಗುವುದಿಲ್ಲ. ಏಕೆಂದರೆ ಆತ ಕಸದಿಂದಲೂ ರಸ ತೆಗೆಯುವ ಚತುರ. ಬಾಗಲಕೋಟೆ ಜಿಲ್ಲೆಯ ಇಳಕಲ್ಲಿನ ಬಸವರಾಜ್ ಅಂತಹ ಒಬ್ಬ ಚತುರ ಕಲಾವಿದ.</p>.<p>ಬಿಡುವಿನ ವೇಳೆಯಲ್ಲಿ ದ್ವಿಚಕ್ರವಾಹನಗಳ ಬಿಡಿ ಭಾಗಗಳನ್ನು ಬಳಸಿ ಕಲಾಕೃತಿಗಳನ್ನು ರಚಿಸುತ್ತಾರೆ. ಗುಜರಿ ಅಂಗಡಿಗಳಲ್ಲಿ ಅಲೆದು ವಾಹನಗಳ ಬಿಡಿ ಭಾಗಗಳನ್ನು ಸಂಗ್ರಹಿಸುವುದು ಇವರ ಆಸಕ್ತಿಗಳಲ್ಲೊಂದು. ಹೀಗೆ ಖರೀದಿಸಿ ತಂದ ಬಿಡಿ ಭಾಗಗಳನ್ನು ಕಲಾತ್ಮಕ ವಿನ್ಯಾಸಕ್ಕೊಳಪಡಿಸಿ ವಿಶಿಷ್ಟ ಕಲಾಕೃತಿಗಳನ್ನಾಗಿಸುತ್ತಾರೆ.</p>.<p>ಈ ಗುಜರಿ ಕಲಾಕೃತಿಗಳನ್ನು ಪ್ರತ್ಯಕ್ಷ ನಿಂತು ನೋಡಿದರೆ ಕುತೂಹಲ ಗರಿಗೆದರುತ್ತದೆ. ಆಮೆ, ಸೈಕಲ್, ಟ್ರ್ಯಾಕ್ಟರ್, ರೈಲ್ವೆ ಎಂಜಿನ್, ಹಕ್ಕಿ, ಕೀಟ ಹೀಗೆ ವಿಭಿನ್ನ ಮಾದರಿಯ ಕಲಾಕೃತಿಗಳು ಇವರ ಗ್ಯಾರೇಜಿನಲ್ಲಿ ಅರಳಿ ನಿಂತಿವೆ. ಕಲಾಸಕ್ತರು ಒಳ್ಳೆಯ ಬೆಲೆಗೆ ಕಲಾಕೃತಿಗಳನ್ನು ಖರೀದಿಸುವುದೂ ಉಂಟು.</p>.<p>ಬಸವರಾಜ್ ಅವರು ಒಂದೇ ಬಗೆ ಕಲಾಕೃತಿಗಳನ್ನು ರೂಪಿಸುವುದಿಲ್ಲ. ಒಮ್ಮೆ ಮಾಡಿದ ಮಾದರಿಯನ್ನು ಮತ್ತೆ ಮಾಡುವುದಿಲ್ಲ. ಪ್ರವಾಸಿ ತಾಣಗಳು ಮತ್ತು ಪಾರ್ಕ್ಗಳಲ್ಲಿ ವಿಭಿನ್ನ, ವಿಶೇಷವೆನ್ನಿಸುವ ಗುಜರಿ ಕಲಾಕೃತಿಗಳನ್ನು ನಿರ್ಮಿಸಬೇಕು ಎನ್ನುವುದು ಅವರ ಮಹದಾಸೆ.</p>.<p>*</p>.<p><strong>ಬಸವರಾಜ್ </strong><br /> <strong>ಸಂಪರ್ಕಕ್ಕೆ: 99801 78013.</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>