ಬೆಂಗಳೂರು: ಬಿಬಿಎಂಪಿ ಬಜೆಟ್ಗೆ ರಾಜ್ಯ ಸರ್ಕಾರ ಅನುಮೋದನೆ ಕೊಟ್ಟಿರುವುದು ಪಾಲಿಕೆ ಸಭೆಯಲ್ಲಿ ಸ್ವಲ್ಪ ಲವಲವಿಕೆ ಸೃಷ್ಟಿಸಿತ್ತು. ಬಿಜೆಪಿಯ ಸದಸ್ಯರು, ‘ಹಾಸಿಗೆ ಇದ್ದಷ್ಟು ಕಾಲು ಚಾಚಿ’ ಎಂದು ಕಾಲೆಳೆಯುತ್ತಲೇ ‘ಆದಾಯ ಮೂಲವನ್ನು ಗಟ್ಟಿಗೊಳಿಸಿ’ ಎಂದು ಎಚ್ಚರಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಆಗಬೇಕಾದ ಕಾಮಗಾರಿಗಳು, ಅನುದಾನದ ಕೊರತೆ ಕುರಿತು ಕೆಲವು ಸದಸ್ಯರು ಗೊಣಗಲಾರಂಭಿಸಿದರು.