ಕರ್ನಾಟಕ ವಿದ್ಯಾವರ್ಧಕ ಸಂಘದಲ್ಲೇ ಆಯೋಜಿಸಲಾಗಿದ್ದ ದಸರಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ಇಲ್ಲಿನ ಪ್ರತಿ ಕಾರ್ಯಕ್ರಮಕ್ಕೂ ಮೊದಲು ಹಾಡಲಾಗುವ ‘ವಂದೇ ಮಾತರಂ’ ಹಾಗೂ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಗೀತೆಗಳ ಕುರಿತು ನನಗೆ ಗೌರವವಿದೆ. ಆದರೆ, ‘ಜಯ ಭಾರತ ಜನನಿಯ ತನುಜಾತೆ’ ಗೀತೆಯನ್ನು ಸರ್ಕಾರ ನಾಡಗೀತೆಯನ್ನಾಗಿ ಆಯ್ಕೆ ಮಾಡಿದ ಮೇಲೆ ಅದನ್ನು ಗೌರವಿಸಬೇಕಾದ್ದು ಪ್ರತಿಯೊಬ್ಬರ ಕರ್ತವ್ಯ. ಆದರೆ, ಅದು ಇಲ್ಲಿ ಪಾಲನೆಯಾಗುತ್ತಿಲ್ಲ. ಹಾಗಿದ್ದರೆ ಸರ್ಕಾರವನ್ನೇ ಹೆದರಿಸಿಕೊಂಡವರು ಯಾರಾದರೂ ಇಲ್ಲಿ ಇದ್ದಾರೆಯೇ? ಎಂಬ ಸಂಶಯ ಮೂಡುತ್ತಿದೆ’ ಎಂದಾಗ ವೇದಿಕೆ ಮೇಲಿದ್ದ ಸಂಘದ ಪದಾಧಿಕಾರಿಗಳು ಪರಸ್ಪರರ ಮುಖ ನೋಡಿಕೊಂಡು ಸುಮ್ಮನಾದರು.