<p><strong>ಪುಣೆ:</strong> ‘ಇಂಗ್ಲೆಂಡ್ ಗೊ ಬ್ಯಾಕ್’ ಘೋಷಣೆಗಳನ್ನು ಕೂಗುತ್ತ ಸೋಮವಾರ ಇಲ್ಲಿನ ಗಹುಂಜೆ ಪ್ರದೇಶದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನುಗ್ಗಿ ಪ್ರತಿಭಟಿಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಛತ್ರಪತಿ ಶಿವಾಜಿ ಅವರು ಬಳಸುತ್ತಿದ್ದ ಖಡ್ಗವನ್ನು ಆ ದೇಶ ಇಟ್ಟುಕೊಂಡಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.</p>.<p>ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳು, ಮಾರ್ಚ್ 23, 26 ಮತ್ತು 28ರಂದು ಇಲ್ಲಿ ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿವೆ.</p>.<p>ಈ ಐವರು ಕೊಲ್ಹಾಪುರ ಮೂಲದ ಸಂಘಟನೆಯೊಂದರ ಸದಸ್ಯರು. ಶಿವಾಜಿ ಮಹಾರಾಜ ಅವರು ಬಳಸುತ್ತಿದ್ದರೆನ್ನಲಾದ ಭವಾನಿ ಖಡ್ಗವನ್ನು, ವೇಲ್ಸ್ನ ರಾಜಕುಮಾರ ಪ್ರಿನ್ಸ್ ಅವರಿಗೆ ಶಿವಾಜಿ ವಂಶಸ್ಥರಾದ ಕೊಲ್ಹಾಪುರದ ನಾಲ್ಕನೇ ಶಿವಾಜಿ ಅವರು ಉಡುಗೊರೆಯಾಗಿ ನೀಡಿದ್ದರು. ಈ ಖಡ್ಗವನ್ನು ದೇಶಕ್ಕೆ ಮರಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.</p>.<p>‘ಐವರು ಆರೋಪಿಗಳು ಸೋಮವಾರ ಮಧ್ಯಾಹ್ನ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದಾರೆ. ತಾವು ಶಿವಾಜಿ ಭಕ್ತರೆಂದು ಅವರು ನಮಗೆ ತಿಳಿಸಿದ್ದಾರೆ. 1875ರಲ್ಲಿ ವೇಲ್ಸ್ನ ರಾಜಕುಮಾರ ಅವರು ಬಲವಂತವಾಗಿ ಆ ಖಡ್ಗವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಅವರ ವಾದವಾಗಿದೆ’ ಎಂದು ತಲೆಗಾಂವ್ ದಭಾಡೆ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದರು.</p>.<p>ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಐವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಪುಣೆ:</strong> ‘ಇಂಗ್ಲೆಂಡ್ ಗೊ ಬ್ಯಾಕ್’ ಘೋಷಣೆಗಳನ್ನು ಕೂಗುತ್ತ ಸೋಮವಾರ ಇಲ್ಲಿನ ಗಹುಂಜೆ ಪ್ರದೇಶದಲ್ಲಿರುವ ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣದಲ್ಲಿ ನುಗ್ಗಿ ಪ್ರತಿಭಟಿಸಿದ್ದ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಛತ್ರಪತಿ ಶಿವಾಜಿ ಅವರು ಬಳಸುತ್ತಿದ್ದ ಖಡ್ಗವನ್ನು ಆ ದೇಶ ಇಟ್ಟುಕೊಂಡಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿತ್ತು.</p>.<p>ಭಾರತ ಮತ್ತು ಇಂಗ್ಲೆಂಡ್ ಕ್ರಿಕೆಟ್ ತಂಡಗಳು, ಮಾರ್ಚ್ 23, 26 ಮತ್ತು 28ರಂದು ಇಲ್ಲಿ ಮೂರು ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಲಿವೆ.</p>.<p>ಈ ಐವರು ಕೊಲ್ಹಾಪುರ ಮೂಲದ ಸಂಘಟನೆಯೊಂದರ ಸದಸ್ಯರು. ಶಿವಾಜಿ ಮಹಾರಾಜ ಅವರು ಬಳಸುತ್ತಿದ್ದರೆನ್ನಲಾದ ಭವಾನಿ ಖಡ್ಗವನ್ನು, ವೇಲ್ಸ್ನ ರಾಜಕುಮಾರ ಪ್ರಿನ್ಸ್ ಅವರಿಗೆ ಶಿವಾಜಿ ವಂಶಸ್ಥರಾದ ಕೊಲ್ಹಾಪುರದ ನಾಲ್ಕನೇ ಶಿವಾಜಿ ಅವರು ಉಡುಗೊರೆಯಾಗಿ ನೀಡಿದ್ದರು. ಈ ಖಡ್ಗವನ್ನು ದೇಶಕ್ಕೆ ಮರಳಿಸಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ ಎಂದು ಅಧಿಕಾರಿಯೊಬ್ಬರು ಮಂಗಳವಾರ ತಿಳಿಸಿದರು.</p>.<p>‘ಐವರು ಆರೋಪಿಗಳು ಸೋಮವಾರ ಮಧ್ಯಾಹ್ನ ಧ್ವಜಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತ ಕ್ರೀಡಾಂಗಣಕ್ಕೆ ಪ್ರವೇಶಿಸಿದ್ದಾರೆ. ತಾವು ಶಿವಾಜಿ ಭಕ್ತರೆಂದು ಅವರು ನಮಗೆ ತಿಳಿಸಿದ್ದಾರೆ. 1875ರಲ್ಲಿ ವೇಲ್ಸ್ನ ರಾಜಕುಮಾರ ಅವರು ಬಲವಂತವಾಗಿ ಆ ಖಡ್ಗವನ್ನು ತೆಗೆದುಕೊಂಡು ಹೋಗಿದ್ದಾರೆ ಎಂಬುದು ಅವರ ವಾದವಾಗಿದೆ’ ಎಂದು ತಲೆಗಾಂವ್ ದಭಾಡೆ ಪೊಲೀಸ್ ಠಾಣೆ ಅಧಿಕಾರಿ ತಿಳಿಸಿದರು.</p>.<p>ಕ್ರೀಡಾಂಗಣಕ್ಕೆ ಅತಿಕ್ರಮ ಪ್ರವೇಶ ವಿರುದ್ಧ ಭಾರತೀಯ ದಂಡ ಸಂಹಿತೆಯಡಿ ಐವರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>