‘ಭಾರತದಲ್ಲಿ ಗೆಲುವು ಸಾಧಿಸುವುದು ವಿಶೇಷ ಸಾಧನೆಯಾಗಲಿದ್ದು ಅದು ಆಸ್ಟ್ರೇಲಿಯಾದ ಕೀರ್ತಿ ಕಿರೀಟಕ್ಕೆ ಅನರ್ಘ್ಯ ರತ್ನವಾಗುತ್ತದೆ. ಭಾರತದಲ್ಲಿರುವ ವಿಭಿನ್ನ ವಾತಾವರಣಕ್ಕೆ ಹೊಂದಿಕೊಂಡು ಆಡುವುದು ಬಹಳ ಕಷ್ಟ. ಆ ವಾತಾವರಣ ಮತ್ತು ಸವಾಲುಗಳೇ ಭಾರತೀಯ ಆಟಗಾರರನ್ನು ಶಕ್ತಿಯುತ ಮಾಡಿವೆ’ ಎಂದು ವೇಗಿ ಮಿಚೆಲ್ ಸ್ಟಾರ್ಕ್ ಹೇಳಿದ್ದಾರೆ. ಅವರು ಗಾಯಗೊಂಡಿರುವುದರಿಂದ ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ.