ಕರಾಚಿ: ‘ಭಾರತ ಮತ್ತು ಪಾಕಿಸ್ತಾನ ನಡುವೆ ಮೂರು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ನಡೆಸಿ ಅದರಿಂದ ಬರುವ ಆದಾಯವನ್ನು ಎರಡೂ ದೇಶಗಳ ಕೋವಿಡ್–19 ಪರಿಹಾರ ನಿಧಿಗೆ ಸಮನಾಗಿ ನೀಡಬೇಕೆಂದು ಶೋಯಬ್ ಅಖ್ತರ್ ನೀಡಿದ್ದ ಸಲಹೆಗೆ ಭಾರತದ ಹಿರಿಯ ಆಟಗಾರ ಕಪಿಲ್ ದೇವ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದನ್ನು ಕೇಳಿ ಅಚ್ಚರಿಯ ಜೊತೆಗೆ ಬೇಸರವೂ ಆಯಿತು’ ಎಂದು ಪಾಕಿಸ್ತಾನದ ಹಿರಿಯ ಕ್ರಿಕೆಟಿಗ ಶಾಹಿದ್ ಅಫ್ರಿದಿ ನುಡಿದಿದ್ದಾರೆ.