ಹೋದ ಶನಿವಾರ ಅಡಿಲೇಡ್ನಲ್ಲಿ ಮುಕ್ತಾಯವಾದ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡವು ಎಂಟು ವಿಕೆಟ್ಗಳಿಂದ ಸೋತಿತ್ತು. ಅಲ್ಲದೇ ಎರಡನೇ ಇನಿಂಗ್ಸ್ನಲ್ಲಿ ತಂಡವು ಕೇವಲ 36 ರನ್ ಗಳಿಸಿ ಕನಿಷ್ಠ ಮೊತ್ತದ ’ದಾಖಲೆ‘ ಮಾಡಿತ್ತು. ಅದರಿಂದಾಗಿ ಅವರು ಪಿತೃತ್ವ ರಜೆಯನ್ನು ರದ್ದು ಮಾಡಿ ಮುಂದಿನ ಪಂದ್ಯಗಳಲ್ಲಿ ಆಡಬೇಕು ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಒತ್ತಾಯಿಸಿದ್ದರು.