ದುಬೈ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ, ಶ್ರೀಲಂಕಾ ಆಟಗಾರರ ಪಾಲಿಗೆ ಮಹತ್ವದ್ದಾಗಿದೆ. ಏಕೆಂದರೆ ಈ ಪುಟ್ಟ ದ್ವೀಪರಾಷ್ಟ್ರವು ಕಳೆದ ಕೆಲ ಸಮಯಗಳಿಂದ ರಾಜಕೀಯ ಬಿಕ್ಕಟ್ಟು ಮತ್ತು ಆರ್ಥಿಕ ಸಂಕಷ್ಟದಿಂದ ನಲುಗಿದೆ. ಏಷ್ಯಾ ಕಪ್ ಗೆದ್ದು ತನ್ನ ದೇಶದ ಜನರ ನೋವನ್ನು ಅಲ್ಪ ಮರೆಸುವ ಅವಕಾಶ ದಸುನ್ ಶನಕ ಬಳಗಕ್ಕೆ ದೊರೆತಿದೆ.