ಕೋವಿಡ್–19ರ ಕಾರಣದಿಂದಾಗಿ ದೇಶಿ ಕ್ರಿಕೆಟ್ ಟೂರ್ನಿಗಳ ಆರಂಭಕ್ಕೆ ತಿಂಗಳುಗಳ ಕಾಲ ಅಡ್ಡಿಯಾಗಿತ್ತು. ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಮೂಲಕ ದೇಶಿ ಕ್ರಿಕೆಟ್ ಋತು ಈಗ ಆರಂಭಗೊಂಡಿದೆ. ಹೀಗಾಗಿ ರಣಜಿ ಟೂರ್ನಿ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ನಿರೀಕ್ಷೆ ಇತ್ತು. ಆದರೆ ಅಧ್ಯಕ್ಷ ಸೌರವ್ ಗಂಗೂಲಿ ಹೊರತುಪಡಿಸಿದರೆ ಉಳಿದ ಯಾರಿಂದಲೂ ಟೂರ್ನಿ ಆರಂಭಿಸಲು ಪೂರಕವಾದ ಅಭಿಪ್ರಾಯ ಬರಲಿಲ್ಲ.