ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಸಿಸಿಐ ಆಯ್ಕೆಗಾರ ಸ್ಥಾನಕ್ಕೆ ಸಂದರ್ಶನ: ಪ್ರಸಾದ್‌, ಜೋಶಿಗೆ ಕರೆ

Last Updated 3 ಮಾರ್ಚ್ 2020, 20:17 IST
ಅಕ್ಷರ ಗಾತ್ರ

ಮುಂಬೈ: ರಾಷ್ಟ್ರೀಯ ಆಯ್ಕೆ ಸಮಿತಿಗೆ ಇಬ್ಬರು ಆಯ್ಕೆಗಾರರನ್ನು ಆರಿಸಲು ನಡೆಸುವ ಸಂದರ್ಶನಕ್ಕೆ ಬಿಸಿಸಿಐನ ಕ್ರಿಕೆಟ್‌ ಸಲಹಾ ಸಮಿತಿ (ಸಿಎಸಿ) ಭಾರತ ತಂಡದ ಮಾಜಿ ವೇಗಿ ಬಿ.ಕೆ.ವೆಂಕಟೇಶ ಪ್ರಸಾದ್‌, ಸುನೀಲ್‌ ಜೋಶಿ ಸೇರಿದಂತೆ ಐವರ ಹೆಸರನ್ನು ಮಂಗಳವಾರ ಅಂತಿಮಗೊಳಿಸಿದೆ.

ಭಾರತ ತಂಡದ ಮಾಜಿ ಆಟಗಾರರಾದ ಮದನ್‌ ಲಾಲ್‌, ಆರ್‌.ಪಿ.ಸಿಂಗ್‌ ಮತ್ತು ಸುಲಕ್ಷಣಾ ನಾಯಕ್‌ ಅವರನ್ನು ಒಳಗೊಂಡ ಸಿಎಸಿ, ಸಭೆ ಸೇರಿ 44 ಮಂದಿಯ ಅರ್ಜಿಗಳನ್ನು ಪರಿಶೀಲಿಸಿತ್ತು.

ಸಿಎಸಿ, ಬುಧವಾರ ನಡೆಸುವ ಸಂದರ್ಶನಕ್ಕೆ ಭಾರತ ತಂಡದ ಮಾಜಿ ಆಟಗಾರರಾದ ಸುನೀಲ್‌ ಜೋಶಿ, ವೆಂಕಟೇಶ ಪ್ರಸಾದ್‌, ಎಲ್‌.ಶಿವರಾಮಕೃಷ್ಣನ್‌, ಹರ್ವಿಂದರ್‌ ಸಿಂಗ್‌ ಮತ್ತು ರಾಜೇಶ್‌ ಚೌಹಾಣ್‌ ಅವರನ್ನು ಕರೆಯಲಾಗಿದೆ ಎಂದು ಬಿಸಿಸಿಐನ ಮೂಲಗಳು ತಿಳಿಸಿವೆ. ಅಗರಕರ್‌ ಅವರು ಸಂದರ್ಶನಕ್ಕೆ ಅಂತಿಮಗೊಳಿಸಿದ ಪಟ್ಟಿಯಲ್ಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT