<p><strong>ಬೆಂಗಳೂರು</strong>: ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಮುನ್ನಡೆಯನ್ನೂ ಸಾಧಿಸಿತು. </p>.<p>ಪಂದ್ಯದ ಕೊನೆಯ ದಿನವಾದ ಮಂಗಳವಾರ ಕರ್ನಾಟಕ ತಂಡವು 382 ರನ್ಗಳ ಗುರಿ ಬೆನ್ನಟ್ಟಿತು. ತಂಡದ ಆರಂಭಿಕ ಬ್ಯಾಟರ್ ಮೆಕ್ನಿಲ್ ನರೋನಾ (103; 162ಎ, 4X6, 6X4) ಮತ್ತು ಪ್ರಖರ್ ಚತುರ್ವೇದಿ (54; 62ಎ, 4X7, 6X1) ಅರ್ಧಶತಕ ಗಳಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿದರು. ಇದರಿಂದಾಗಿ ಎದುರಾಳಿ ಬೌಲರ್ಗಳ ಪ್ರಯತ್ನಕ್ಕೆ ಫಲ ಸಿಗಲಿಲ್ಲ. </p>.<p>ಪ್ರಖರ್ ಔಟಾದ ನಂತರ ಕೆ.ಪಿ. ಕಾರ್ತಿಕೇಯ (1ರನ್) ಬೇಗನೆ ನಿರ್ಗಮಿಸಿದರು. ನಾಯಕ ಅನೀಶ್ವರ್ ಗೌತಮ್ (23 ರನ್) ಅವರು ಉತ್ತಮವಾಗಿ ಆಡಿದರು. ತಂಡವು55 ಓವರ್ಗಳಲ್ಲಿ 4 ವಿಕೆಟ್ಗಳಿಗೆ 241 ರನ್ ಗಳಿಸಿದ ಸಂದರ್ಭದಲ್ಲಿ ದಿನದಾಟಕ್ಕೆ ತೆರೆಬಿತ್ತು. </p>.<p>10 ಅಂಕ: ಈ ಬಾರಿಯ ಟೂರ್ನಿಯಲ್ಲಿ ಹೊಸ ಅಂಕ ನೀಡಿಕೆ ಪದ್ಧತಿ ಜಾರಿಯಾಗಿದೆ. ಅದರ ಅನ್ವಯ ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ 10 ಮತ್ತು ಕೇರಳ ತಂಡಕ್ಕೆ 8 ಪಾಯಿಂಟ್ ಲಭಿಸಿವೆ. </p>.<p>ಮೊದಲ ಇನಿಂಗ್ಸ್ ಆದರದಲ್ಲಿ ಕರ್ನಾಟಕಕ್ಕೆ 3 ಮ್ಯಾಚ್ ಪಾಯಿಂಟ್ಸ್ ದೊರೆತಿವೆ. ಕೇರಳಕ್ಕೆ 1 ಅಂಕ ಸಿಕ್ಕಿದೆ. ಉಭಯ ತಂಡಗಳು ತಲಾ 3 ಬ್ಯಾಟಿಂಗ್ ಪಾಯಿಂಟ್ ಪಡೆದಿವೆ ಮತ್ತು ತಲಾ 4 ಬೌಲಿಂಗ್ ಪಾಯಿಂಟ್ ಗಳಿಸಿವೆ. </p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಕೇರಳ: 72.5 ಓವರ್ಗಳಲ್ಲಿ 327. ಕರ್ನಾಟಕ: 88.3 ಓವರ್ಗಳಲ್ಲಿ 340. ಎರಡನೇ ಇನಿಂಗ್ಸ್: ಕೇರಳ: 110.3 ಓವರ್ಗಳಲ್ಲಿ 8ಕ್ಕೆ395. ಕರ್ನಾಟಕ: 55 ಓವರ್ಗಳಲ್ಲಿ 4ಕ್ಕೆ241 (ಮೆಕ್ನಿಲ್ ನರೋನಾ 103, ಪ್ರಖರ್ ಚತುರ್ವೇದಿ 54, ಹರ್ಷಿಲ್ ಧರ್ಮಾನಿ 31, ಅನೀಶ್ವರ್ ಗೌತಮ್ 26,ಎಂ.ಯು. ಹರಿಕೃಷ್ಣನ್ 75ಕ್ಕೆ1, ಎಂ. ಕಿರಣ ಸಾಗರ್ 50ಕ್ಕೆ1) ಫಲಿತಾಂಶ: ಪಂದ್ಯ ಡ್ರಾ. ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಕರ್ನಾಟಕ ತಂಡವು ಕರ್ನಲ್ ಸಿ.ಕೆ. ನಾಯ್ಡು ಟ್ರೋಫಿ 23 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಕೇರಳ ಎದುರಿನ ಪಂದ್ಯವನ್ನು ಡ್ರಾ ಮಾಡಿಕೊಂಡಿತು. ಕರ್ನಾಟಕ ತಂಡವು ಮೊದಲ ಇನಿಂಗ್ಸ್ ಮುನ್ನಡೆಯನ್ನೂ ಸಾಧಿಸಿತು. </p>.<p>ಪಂದ್ಯದ ಕೊನೆಯ ದಿನವಾದ ಮಂಗಳವಾರ ಕರ್ನಾಟಕ ತಂಡವು 382 ರನ್ಗಳ ಗುರಿ ಬೆನ್ನಟ್ಟಿತು. ತಂಡದ ಆರಂಭಿಕ ಬ್ಯಾಟರ್ ಮೆಕ್ನಿಲ್ ನರೋನಾ (103; 162ಎ, 4X6, 6X4) ಮತ್ತು ಪ್ರಖರ್ ಚತುರ್ವೇದಿ (54; 62ಎ, 4X7, 6X1) ಅರ್ಧಶತಕ ಗಳಿಸಿದರು. ಮೊದಲ ವಿಕೆಟ್ ಜೊತೆಯಾಟದಲ್ಲಿ 90 ರನ್ ಸೇರಿಸಿದರು. ಇದರಿಂದಾಗಿ ಎದುರಾಳಿ ಬೌಲರ್ಗಳ ಪ್ರಯತ್ನಕ್ಕೆ ಫಲ ಸಿಗಲಿಲ್ಲ. </p>.<p>ಪ್ರಖರ್ ಔಟಾದ ನಂತರ ಕೆ.ಪಿ. ಕಾರ್ತಿಕೇಯ (1ರನ್) ಬೇಗನೆ ನಿರ್ಗಮಿಸಿದರು. ನಾಯಕ ಅನೀಶ್ವರ್ ಗೌತಮ್ (23 ರನ್) ಅವರು ಉತ್ತಮವಾಗಿ ಆಡಿದರು. ತಂಡವು55 ಓವರ್ಗಳಲ್ಲಿ 4 ವಿಕೆಟ್ಗಳಿಗೆ 241 ರನ್ ಗಳಿಸಿದ ಸಂದರ್ಭದಲ್ಲಿ ದಿನದಾಟಕ್ಕೆ ತೆರೆಬಿತ್ತು. </p>.<p>10 ಅಂಕ: ಈ ಬಾರಿಯ ಟೂರ್ನಿಯಲ್ಲಿ ಹೊಸ ಅಂಕ ನೀಡಿಕೆ ಪದ್ಧತಿ ಜಾರಿಯಾಗಿದೆ. ಅದರ ಅನ್ವಯ ಈ ಪಂದ್ಯದಲ್ಲಿ ಕರ್ನಾಟಕ ತಂಡಕ್ಕೆ 10 ಮತ್ತು ಕೇರಳ ತಂಡಕ್ಕೆ 8 ಪಾಯಿಂಟ್ ಲಭಿಸಿವೆ. </p>.<p>ಮೊದಲ ಇನಿಂಗ್ಸ್ ಆದರದಲ್ಲಿ ಕರ್ನಾಟಕಕ್ಕೆ 3 ಮ್ಯಾಚ್ ಪಾಯಿಂಟ್ಸ್ ದೊರೆತಿವೆ. ಕೇರಳಕ್ಕೆ 1 ಅಂಕ ಸಿಕ್ಕಿದೆ. ಉಭಯ ತಂಡಗಳು ತಲಾ 3 ಬ್ಯಾಟಿಂಗ್ ಪಾಯಿಂಟ್ ಪಡೆದಿವೆ ಮತ್ತು ತಲಾ 4 ಬೌಲಿಂಗ್ ಪಾಯಿಂಟ್ ಗಳಿಸಿವೆ. </p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಕೇರಳ: 72.5 ಓವರ್ಗಳಲ್ಲಿ 327. ಕರ್ನಾಟಕ: 88.3 ಓವರ್ಗಳಲ್ಲಿ 340. ಎರಡನೇ ಇನಿಂಗ್ಸ್: ಕೇರಳ: 110.3 ಓವರ್ಗಳಲ್ಲಿ 8ಕ್ಕೆ395. ಕರ್ನಾಟಕ: 55 ಓವರ್ಗಳಲ್ಲಿ 4ಕ್ಕೆ241 (ಮೆಕ್ನಿಲ್ ನರೋನಾ 103, ಪ್ರಖರ್ ಚತುರ್ವೇದಿ 54, ಹರ್ಷಿಲ್ ಧರ್ಮಾನಿ 31, ಅನೀಶ್ವರ್ ಗೌತಮ್ 26,ಎಂ.ಯು. ಹರಿಕೃಷ್ಣನ್ 75ಕ್ಕೆ1, ಎಂ. ಕಿರಣ ಸಾಗರ್ 50ಕ್ಕೆ1) ಫಲಿತಾಂಶ: ಪಂದ್ಯ ಡ್ರಾ. ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>