ಬಿಆರ್ಟಿಎಸ್ ತಂಡದ ಆರಂಭಿಕ ಬ್ಯಾಟ್ಸ್ಮನ್ಗಳಾದ ಸಂತೋಷ ಕಲಾನ್ ಮತ್ತು ನಂದನ್ ಕ್ರಮವಾಗಿ 0, 1 ರನ್ಗೆ ವಿಕೆಟ್ ಒಪ್ಪಿಸಿದರು. ಮಧ್ಯಮ ಕ್ರಮಾಂಕದಲ್ಲಿ ಸಂಜು (31), ಚಂದ್ರಶೇಖರ (40) ಜೊತೆಯಾಟವಾಡಿ ಅಲ್ಪ ಮೊತ್ತಕ್ಕೆ ಕುಸಿತದ ಭೀತಿಯಲ್ಲಿದ್ದ ತಂಡವನ್ನು ಪಾರು ಮಾಡಿದರು. ಶಿರಸಿ ತಂಡ ಕೂಡ ಆರಂಭದಲ್ಲಿ ಕಂಡಿದ್ದ ಹಿನ್ನಡೆಯಿಂದಾಗಿಸೋಲಿನ ಆತಂಕಕ್ಕೆ ಸಿಲುಕಿತ್ತು. ಈ ತಂಡದ ಸೈಯದ್, ಹುಸೇನ್ ಮಂಗಳಗೇರಿ, ಮಿಥುನ್, ಗಣೇಶ್ ಮತ್ತು ರಘು ಎರಡಂಕಿಯ ಮೊತ್ತಕ್ಕೆ ವಿಕೆಟ್ಗೆ ಒಪ್ಪಿಸಿದರು. ಇದರಿಂದಾಗಿ ಶಿರಸಿ ಕೇವಲ 13 ರನ್ ಗಳಿಸುವಷ್ಟರಲ್ಲಿ ಪ್ರಮುಖ ಐದು ವಿಕೆಟ್ಗಳನ್ನು ಕಳೆದುಕೊಂಡಿತ್ತು. ಮಧ್ಯಮ ಕ್ರಮಾಂಕದಲ್ಲಿ ಅಕ್ರಮ್ (67, 32ಎಸೆತ, 4ಬೌಂಡರಿ, 6 ಸಿಕ್ಸರ್) ಅರ್ಧ ಶತಕಸಿಡಿಸಿ ಗೆಲುವಿನ ರೂವಾರಿಯಾದರು.