ಕಳೆದ ಬಾರಿ ಸಿಎಸ್ಕೆ ಬ್ಯಾಟರ್ಗಳಿಗೆ ವರುಣ್ ಚಕ್ರವರ್ತಿ ಬಹುತೇಕ ಎಲ್ಲ ಪಂದ್ಯಗಳಲ್ಲೂ ತೊಡಕಾಗಿದ್ದರು. ಅವರ ದಾಳಿಯನ್ನು ಎದುರಿಸಲು ಋತುರಾಜ್ ಗಾಯಕವಾಡ್, ಫಫ್ ಡು ಪ್ಲೆಸಿ, ಅಂಬಟಿ ರಾಯುಡು ಮತ್ತು ಧೋನಿ ಪರದಾಡಿದ್ದರು. ಈ ಬಾರಿ ಅವರಿಗೆ ಚೆನ್ನೈ ಆಟಗಾರರು ಯಾವ ರೀತಿ ಉತ್ತರ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.