<p><strong>ನವದೆಹಲಿ</strong>: ಬೆಂಗಳೂರಿನ ಪುಸ್ತಕ ಮಳಿಗೆಯೊಂದರಲ್ಲಿ ವಾಚನ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಬಂದಿದ್ದರು. ಆದರೆ ಅವರು ವೇದಿಕೆಯ ಮೇಲೆ ಇರಲಿಲ್ಲ. ಜನರು ಕುಳಿತಿದ್ದ ಹಿಂದಿನ ಸಾಲಿನಲ್ಲಿ ನಿರುಮ್ಮಳವಾಗಿ ಆಸೀನರಾಗಿದ್ದರು. </p>.<p>ಇದನ್ನು ಗಮನಿಸಿದ ಆಯೋಜಕರು ಅವರನ್ನು ವೇದಿಕೆಯ ಮುಂಭಾಗದ ಸಾಲಿಗೆ ಆಹ್ವಾನಿಸಿದರು. ಆದರೆ ದ್ರಾವಿಡ್ ಅವರು ಸೌಜನ್ಯಯುತವಾಗಿ ನಿರಾಕರಿಸಿ ಹಿಂದಿನ ಆಸನದಲ್ಲಿಯೇ ಉಳಿದರು. ದ್ರಾವಿಡ್ ಅವರು ಯಾವತ್ತೂ ಆಡಂಬರದ ತಳಕು ಬಳುಕಿನಲ್ಲಿ ಗುರುತಿಸಿಕೊಂಡವರು ಅಲ್ಲ. ಅದು ಅವರ ಜಾಯಮಾನವೂ ಅಲ್ಲ. </p>.<p>ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶ ಏನೇ ಆಗಲಿ, ಭಾರತ ತಂಡದ ಮುಖ್ಯ ಕೋಚ್ ಆಗಿರುವ ದ್ರಾವಿಡ್ ಅವರ ಕ್ರಿಕೆಟ್ ಜೀವನದ ಒಂದು ಸುತ್ತು ಪೂರ್ಣವಾಗಲಿದೆ. ಈ ಪಂದ್ಯದ ನಂತರ ಅವರು ಈ ಹುದ್ದೆಯಿಂದ ನಿರ್ಗಮಿಸುವರು. </p>.<p>ಅದಕ್ಕಾಗಿಯೇ ಅವರಿಗೆ ವಿಜಯದ ವಿದಾಯ ನೀಡಬೇಕು ಎಂಬುದು ಅಭಿಮಾನಿಗಳ ಮನದಿಂಗಿತ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ #ಡೂಇಟ್ಫಾರ್ದ್ರಾವಿಡ್ ಎಂಬ ಹ್ಯಾಷ್ಟ್ಯಾಗ್ ರಚಿಸಲಾಗಿದ್ದು ಅಪಾರ ಸ್ಪಂದನೆ ವ್ಯಕ್ತವಾಗಿದೆ. ಆದರೆ ದ್ರಾವಿಡ್ ಇದನ್ನು ಒಪ್ಪುವುದಿಲ್ಲ. ತಂಡಕ್ಕಾಗಿ ಕಪ್ ಜಯಿಸಬೇಕು ಎಂಬುದು ಅವರ ದೃಢನಂಬಿಕೆ. </p>.<p>ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಪ್ರತಿಕ್ರಿಯಿಸಿರುವ ದ್ರಾವಿಡ್, ‘ಅತ್ಯುತ್ತಮ ದರ್ಜೆಯ ಕ್ರಿಕೆಟ್ ಆಡುವುದು ನಮ್ಮ ಗುರಿ. ನನ್ನ ವೈಯಕ್ತಿಕ ಸ್ವಭಾವ ಮತ್ತು ವ್ಯಕ್ತಿತ್ವಕ್ಕೆ ವಿರುದ್ಧವಾದುದನ್ನು ಬಯಸುವುದಿಲ್ಲ. ಈ ಕುರಿತು ನಾನು ಮಾತನಾಡುವುದು ಇಲ್ಲ’ ಎಂದರು. </p>.<p>‘ಯಾರೋ ಒಬ್ಬರಿಗಾಗಿ ಸಾಧಿಸುವುದು ಎಂಬ ಭಾವನೆಯ ಬಗ್ಗೆ ನನಗೆ ನಂಬಿಕೆಯಿಲ್ಲ. ನೀವು ಪರ್ವತಾರೋಹಿಗೆ ಹೋಗಿ ಮೌಂಟ್ ಎವರೆಸ್ಟ್ ಏಕೆ ಏರುತ್ತೀರಿ ಎಂದು ಕೇಳಬಹುದು. ಅದಕ್ಕೆ ಆ ವ್ಯಕ್ತಿಯು ಮೌಂಟ್ ಎವರೆಸ್ಟ್ ಅಲ್ಲಿರುವುದರಿಂದ ಏರಲು ಬಯಸುತ್ತೇನೆ ಎಂದೇ ಹೇಳುತ್ತಾರೆ. ವಿಶ್ವಕಪ್ ಇರುವುದರಿಂದ ಅದನ್ನು ಗೆಲ್ಲಲು ಬಯಸುವೆ. ಅದನ್ನು ಯಾರಿಗೋಸ್ಕರವೂ ಅಲ್ಲ’ ಎಂದು ದ್ರಾವಿಡ್ ಮಾರ್ಮಿಕವಾಗಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ</strong>: ಬೆಂಗಳೂರಿನ ಪುಸ್ತಕ ಮಳಿಗೆಯೊಂದರಲ್ಲಿ ವಾಚನ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಕಾರ್ಯಕ್ರಮಕ್ಕೆ ಕ್ರಿಕೆಟ್ ದಂತಕತೆ ರಾಹುಲ್ ದ್ರಾವಿಡ್ ಬಂದಿದ್ದರು. ಆದರೆ ಅವರು ವೇದಿಕೆಯ ಮೇಲೆ ಇರಲಿಲ್ಲ. ಜನರು ಕುಳಿತಿದ್ದ ಹಿಂದಿನ ಸಾಲಿನಲ್ಲಿ ನಿರುಮ್ಮಳವಾಗಿ ಆಸೀನರಾಗಿದ್ದರು. </p>.<p>ಇದನ್ನು ಗಮನಿಸಿದ ಆಯೋಜಕರು ಅವರನ್ನು ವೇದಿಕೆಯ ಮುಂಭಾಗದ ಸಾಲಿಗೆ ಆಹ್ವಾನಿಸಿದರು. ಆದರೆ ದ್ರಾವಿಡ್ ಅವರು ಸೌಜನ್ಯಯುತವಾಗಿ ನಿರಾಕರಿಸಿ ಹಿಂದಿನ ಆಸನದಲ್ಲಿಯೇ ಉಳಿದರು. ದ್ರಾವಿಡ್ ಅವರು ಯಾವತ್ತೂ ಆಡಂಬರದ ತಳಕು ಬಳುಕಿನಲ್ಲಿ ಗುರುತಿಸಿಕೊಂಡವರು ಅಲ್ಲ. ಅದು ಅವರ ಜಾಯಮಾನವೂ ಅಲ್ಲ. </p>.<p>ಶನಿವಾರ ನಡೆಯಲಿರುವ ಟಿ20 ವಿಶ್ವಕಪ್ ಫೈನಲ್ ಪಂದ್ಯದ ಫಲಿತಾಂಶ ಏನೇ ಆಗಲಿ, ಭಾರತ ತಂಡದ ಮುಖ್ಯ ಕೋಚ್ ಆಗಿರುವ ದ್ರಾವಿಡ್ ಅವರ ಕ್ರಿಕೆಟ್ ಜೀವನದ ಒಂದು ಸುತ್ತು ಪೂರ್ಣವಾಗಲಿದೆ. ಈ ಪಂದ್ಯದ ನಂತರ ಅವರು ಈ ಹುದ್ದೆಯಿಂದ ನಿರ್ಗಮಿಸುವರು. </p>.<p>ಅದಕ್ಕಾಗಿಯೇ ಅವರಿಗೆ ವಿಜಯದ ವಿದಾಯ ನೀಡಬೇಕು ಎಂಬುದು ಅಭಿಮಾನಿಗಳ ಮನದಿಂಗಿತ. ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ #ಡೂಇಟ್ಫಾರ್ದ್ರಾವಿಡ್ ಎಂಬ ಹ್ಯಾಷ್ಟ್ಯಾಗ್ ರಚಿಸಲಾಗಿದ್ದು ಅಪಾರ ಸ್ಪಂದನೆ ವ್ಯಕ್ತವಾಗಿದೆ. ಆದರೆ ದ್ರಾವಿಡ್ ಇದನ್ನು ಒಪ್ಪುವುದಿಲ್ಲ. ತಂಡಕ್ಕಾಗಿ ಕಪ್ ಜಯಿಸಬೇಕು ಎಂಬುದು ಅವರ ದೃಢನಂಬಿಕೆ. </p>.<p>ಈ ಬಗ್ಗೆ ಸ್ಟಾರ್ ಸ್ಪೋರ್ಟ್ಸ್ ವಾಹಿನಿಗೆ ಪ್ರತಿಕ್ರಿಯಿಸಿರುವ ದ್ರಾವಿಡ್, ‘ಅತ್ಯುತ್ತಮ ದರ್ಜೆಯ ಕ್ರಿಕೆಟ್ ಆಡುವುದು ನಮ್ಮ ಗುರಿ. ನನ್ನ ವೈಯಕ್ತಿಕ ಸ್ವಭಾವ ಮತ್ತು ವ್ಯಕ್ತಿತ್ವಕ್ಕೆ ವಿರುದ್ಧವಾದುದನ್ನು ಬಯಸುವುದಿಲ್ಲ. ಈ ಕುರಿತು ನಾನು ಮಾತನಾಡುವುದು ಇಲ್ಲ’ ಎಂದರು. </p>.<p>‘ಯಾರೋ ಒಬ್ಬರಿಗಾಗಿ ಸಾಧಿಸುವುದು ಎಂಬ ಭಾವನೆಯ ಬಗ್ಗೆ ನನಗೆ ನಂಬಿಕೆಯಿಲ್ಲ. ನೀವು ಪರ್ವತಾರೋಹಿಗೆ ಹೋಗಿ ಮೌಂಟ್ ಎವರೆಸ್ಟ್ ಏಕೆ ಏರುತ್ತೀರಿ ಎಂದು ಕೇಳಬಹುದು. ಅದಕ್ಕೆ ಆ ವ್ಯಕ್ತಿಯು ಮೌಂಟ್ ಎವರೆಸ್ಟ್ ಅಲ್ಲಿರುವುದರಿಂದ ಏರಲು ಬಯಸುತ್ತೇನೆ ಎಂದೇ ಹೇಳುತ್ತಾರೆ. ವಿಶ್ವಕಪ್ ಇರುವುದರಿಂದ ಅದನ್ನು ಗೆಲ್ಲಲು ಬಯಸುವೆ. ಅದನ್ನು ಯಾರಿಗೋಸ್ಕರವೂ ಅಲ್ಲ’ ಎಂದು ದ್ರಾವಿಡ್ ಮಾರ್ಮಿಕವಾಗಿ ಹೇಳಿದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>