<p><strong>ಬೆಂಗಳೂರು:</strong> ಕನ್ನಡಿಗ ಕೆ.ಎಲ್. ರಾಹುಲ್ ತವರಿನಂಗಳದಲ್ಲಿ ತಾಳ್ಮೆಯ ಅರ್ಧಶತಕ ಗಳಿಸಿದರು. ಆದರೆ ಭಾರತ ಎ ತಂಡವು ಬಿ ತಂಡದ ಎದುರು ಜಯಿಸಲು ಅವರ ಹೋರಾಟ ಸಾಕಾಗಲಿಲ್ಲ. ಅವರಿಗೆ ತಮ್ಮ ಸಹಆಟಗಾರರಿಂದ ತಕ್ಕ ಬೆಂಬಲವೂ ಲಭಿಸಲಿಲ್ಲ. </p>.<p>ಇದರಿಂದಾಗಿ ಭಾರತ ಎ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ 76 ರನ್ಗಳಿಂದ ಪರಾಭವಗೊಂಡಿತು. ಪಂದ್ಯದ ಕೊನೆಯ ದಿನವಾದ ಭಾನುವಾರ 275 ರನ್ಗಳ ಗುರಿ ಬೆನ್ನತ್ತಿದ್ದ ಎ ತಂಡವನ್ನು ಎಡಗೈ ವೇಗಿ ದಯಾಳ್ (50ಕ್ಕೆ3) 198 ರನ್ಗಳಿಗೆ ನಿಯಂತ್ರಿಸಿದರು. ದಯಾಳ್ ಅವರಿಗೆ ಮುಕೇಶ್ ಕುಮಾರ್ (50ಕ್ಕೆ2) ಮತ್ತು ನವದೀಪ್ ಸೈನಿ (41ಕ್ಕೆ2) ಉತ್ತಮ ಜೊತೆ ನೀಡಿದರು. </p>.<p>ಎ ತಂಡದ ಇನಿಂಗ್ಸ್ನಲ್ಲಿ ರಾಹುಲ್ (57; 121ಎ, 4X7) ಅವರು ಗರಿಷ್ಠ ವೈಯಕ್ತಿಕ ಸ್ಕೋರರ್ ಆದರು. ಅವರನ್ನು ಬಿಟ್ಟರೆ ಕೊನೆಯ ಹಂತದಲ್ಲಿ ಆಕಾಶ್ ದೀಪ್ (43; 42ಎ, 4X3, 6X4) ಅಬ್ಬರಿಸಿದರು. ಟಿ20 ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಅವರು ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. 40ನೇ ಓವರ್ನಲ್ಲಿ ರಾಹುಲ್ ಔಟಾದ ನಂತರವೂ ಆಕಾಶ್ ಭರವಸೆಯ ಆಟವಾಡಿದರು. ಅರ್ಧಶತಕದತ್ತ ಸಾಗಿದ್ದ ಅವರನ್ನು ಮುಷೀರ್ ಖಾನ್ ರನ್ಔಟ್ ಮಾಡಿದರು. ಇದರೊಂದಿಗೆ ತಂಡದ ಇನಿಂಗ್ಸ್ಗೆ ತೆರೆ ಬಿತ್ತು. </p>.<p>ಪಂದ್ಯದ ಮೊದಲ ದಿನ ಬ್ಯಾಟಿಂಗ್ ಆರಂಭಿಸಿದ್ದ ಬಿ ತಂಡವು 94 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆ ಹಂತದಲ್ಲಿ ಮುಷೀರ್ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಅವರೊಂದಿಗೆ ನವದೀಪ್ ಸೈನಿ ಕೂಡ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತ್ತು. ನವದೀಪ್ ಬೌಲಿಂಗ್ನಲ್ಲಿಯೂ ಮೆರೆದಾಡಿದ್ದರು. </p>.<p>ಆದರೆ ಮೊದಲ ಇನಿಂಗ್ಸ್ನಲ್ಲಿ ಎ ತಂಡವು 90 ರನ್ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್ನಲ್ಲಿ ರಿಷಭ್ ಪಂತ್ (61; 47ಎ ) ಮತ್ತು ಸರ್ಫರಾಜ್ ಖಾನ್ (46; 36ಎ) ಅವರ ಬ್ಯಾಟಿಂಗ್ ಬಲದಿಂದ ಬಿ ತಂಡವು 184 ರನ್ ಗಳಿಸಿತು. ಎ ತಂಡದ ವೇಗಿ ಆಕಾಶದೀಪ್ 5 ವಿಕೆಟ್ ಗಳಿಸಿದರು. </p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಭಾರತ ಬಿ: 116 ಓವರ್ಗಳಲ್ಲಿ 321. ಭಾರತ ಎ: 72.4 ಓವರ್ಗಳಲ್ಲಿ 231. ಎರಡನೇ ಇನಿಂಗ್ಸ್: ಭಾರತ ಬಿ ತಂಡ: 42 ಓವರ್ಗಳಲ್ಲಿ 184 (ಸರ್ಫರಾಜ್ ಖಾನ್ 46, ರಿಷಭ್ ಪಂತ್ 61, ನಿತೀಶ್ ರೆಡ್ಡಿ 19, ಖಲೀಲ್ ಅಹಮದ್ 69ಕ್ಕೆ3, ಆಕಾಶದೀಪ್ 56ಕ್ಕೆ5) ಭಾರತ ಎ ತಂಡ: 53 ಓವರ್ಗಳಲ್ಲಿ 198 (ಶುಭಮನ್ ಗಿಲ್ 21, ರಿಯಾನ್ ಪರಾಗ್ 31, ಕೆ.ಎಲ್. ರಾಹುಲ್ 57, ಆಕಾಶ್ ದೀಪ್ 43, ಮುಕೇಶ್ ಕುಮಾರ್ 50ಕ್ಕೆ2, ಯಶ್ ದಯಾಳ್ 50ಕ್ಕೆ3, ನವದೀಪ್ ಸೈನಿ 41ಕ್ಕೆ2) ಫಲಿತಾಂಶ: ಭಾರತ ಬಿ ತಂಡಕ್ಕೆ 76 ರನ್ಗಳ ಜಯ. ಪಂದ್ಯದ ಆಟಗಾರ: ಮುಷೀರ್ ಖಾನ್. </p>.<p> <strong>ಮಾನವ್ ಸುತಾರ್ಗೆ 7 ವಿಕೆಟ್: ಸಿ ತಂಡ ಜಯಭೇರಿ</strong> </p><p><strong>ಅನಂತಪುರ (ಪಿಟಿಐ)</strong>: ಎಡಗೈ ಸ್ಪಿನ್ನರ್ ಮಾನವ್ ಸುತಾರ್ (49ಕ್ಕೆ7) ಅವರ ಬೌಲಿಂಗ್ ನೆರವಿನಿಂದ ಭಾರತ ಸಿ ತಂಡವು ಭಾನುವಾರ ಇಲ್ಲಿ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ಡಿ ವಿರುದ್ಧ 4 ವಿಕೆಟ್ಗಳಿಂದ ಜಯಿಸಿತು. 232 ರನ್ಗಳ ಗುರಿ ಬೆನ್ನಟ್ಟಿದ ಸಿ ತಂಡವು 61 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿ ಗೆದ್ದಿತು. ನಾಯಕ ಋತುರಾಜ್ ಗಾಯಕವಾಡ (46 ರನ್) ಹಾಗೂ ಆರ್ಯನ್ ಜುಯಾಲ್ (47 ರನ್) ತಂಡದ ಜಯವನ್ನು ಸುಗಮಗೊಳಿಸಿದರು. </p><p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಭಾರತ ಡಿ: 48.3 ಓವರ್ಗಳಲ್ಲಿ 164. ಭಾರತ ಸಿ: 62.2 ಓವರ್ಗಳಲ್ಲಿ 168. ಎರಡನೇ ಇನಿಂಗ್ಸ್: ಭಾರತ ಡಿ: 58.1 ಓವರ್ಗಳಲ್ಲಿ 236 (ಶ್ರೇಯಸ್ ಅಯ್ಯರ್ 54 ದೇವದತ್ತ ಪಡಿಕ್ಕಲ್ 56 ರಿಕಿ ಭುಯ್ 44 ಅಕ್ಷರ್ ಪಟೇಲ್ 28 ವೈಶಾಖ ವಿಜಯಕುಮಾರ್ 61ಕ್ಕೆ2 ಮಾನವ್ ಸುತಾರ್ 49ಕ್ಕೆ7) ಭಾರತ ಸಿ: 61 ಓವರ್ಗಳಲ್ಲಿ 6ಕ್ಕೆ233 (ಋತುರಾಜ್ ಗಾಯಕವಾಡ 46 ಸಾಯಿ ಸುದರ್ಶನ್ 22 ಆರ್ಯನ್ ಜುಯಾಲ್ 47 ರಜತ್ ಪಾಟೀದಾರ್ 44 ಅಭಿಷೇಕ್ ಪೊರೆಲ್ ಔಟಾಗದೆ 35 ಸಾರಾಂಶ್ ಜೈನ್ 92ಕ್ಕೆ4) ಫಲಿತಾಂಶ: ಭಾರತ ಸಿ ತಂಡಕ್ಕೆ 4 ವಿಕೆಟ್ಗಳ ಜಯ. ಪಂದ್ಯದ ಆಟಗಾರ: ಮಾನವ್ ಸುತಾರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಕನ್ನಡಿಗ ಕೆ.ಎಲ್. ರಾಹುಲ್ ತವರಿನಂಗಳದಲ್ಲಿ ತಾಳ್ಮೆಯ ಅರ್ಧಶತಕ ಗಳಿಸಿದರು. ಆದರೆ ಭಾರತ ಎ ತಂಡವು ಬಿ ತಂಡದ ಎದುರು ಜಯಿಸಲು ಅವರ ಹೋರಾಟ ಸಾಕಾಗಲಿಲ್ಲ. ಅವರಿಗೆ ತಮ್ಮ ಸಹಆಟಗಾರರಿಂದ ತಕ್ಕ ಬೆಂಬಲವೂ ಲಭಿಸಲಿಲ್ಲ. </p>.<p>ಇದರಿಂದಾಗಿ ಭಾರತ ಎ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ದುಲೀಪ್ ಟ್ರೋಫಿ ಟೂರ್ನಿಯ ಮೊದಲ ಪಂದ್ಯದಲ್ಲಿ 76 ರನ್ಗಳಿಂದ ಪರಾಭವಗೊಂಡಿತು. ಪಂದ್ಯದ ಕೊನೆಯ ದಿನವಾದ ಭಾನುವಾರ 275 ರನ್ಗಳ ಗುರಿ ಬೆನ್ನತ್ತಿದ್ದ ಎ ತಂಡವನ್ನು ಎಡಗೈ ವೇಗಿ ದಯಾಳ್ (50ಕ್ಕೆ3) 198 ರನ್ಗಳಿಗೆ ನಿಯಂತ್ರಿಸಿದರು. ದಯಾಳ್ ಅವರಿಗೆ ಮುಕೇಶ್ ಕುಮಾರ್ (50ಕ್ಕೆ2) ಮತ್ತು ನವದೀಪ್ ಸೈನಿ (41ಕ್ಕೆ2) ಉತ್ತಮ ಜೊತೆ ನೀಡಿದರು. </p>.<p>ಎ ತಂಡದ ಇನಿಂಗ್ಸ್ನಲ್ಲಿ ರಾಹುಲ್ (57; 121ಎ, 4X7) ಅವರು ಗರಿಷ್ಠ ವೈಯಕ್ತಿಕ ಸ್ಕೋರರ್ ಆದರು. ಅವರನ್ನು ಬಿಟ್ಟರೆ ಕೊನೆಯ ಹಂತದಲ್ಲಿ ಆಕಾಶ್ ದೀಪ್ (43; 42ಎ, 4X3, 6X4) ಅಬ್ಬರಿಸಿದರು. ಟಿ20 ಕ್ರಿಕೆಟ್ ಮಾದರಿಯಲ್ಲಿ ಬ್ಯಾಟ್ ಬೀಸಿದ ಅವರು ಮೈದಾನದಲ್ಲಿದ್ದ ಪ್ರೇಕ್ಷಕರನ್ನು ರಂಜಿಸಿದರು. 40ನೇ ಓವರ್ನಲ್ಲಿ ರಾಹುಲ್ ಔಟಾದ ನಂತರವೂ ಆಕಾಶ್ ಭರವಸೆಯ ಆಟವಾಡಿದರು. ಅರ್ಧಶತಕದತ್ತ ಸಾಗಿದ್ದ ಅವರನ್ನು ಮುಷೀರ್ ಖಾನ್ ರನ್ಔಟ್ ಮಾಡಿದರು. ಇದರೊಂದಿಗೆ ತಂಡದ ಇನಿಂಗ್ಸ್ಗೆ ತೆರೆ ಬಿತ್ತು. </p>.<p>ಪಂದ್ಯದ ಮೊದಲ ದಿನ ಬ್ಯಾಟಿಂಗ್ ಆರಂಭಿಸಿದ್ದ ಬಿ ತಂಡವು 94 ರನ್ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಆ ಹಂತದಲ್ಲಿ ಮುಷೀರ್ ಶತಕ ಬಾರಿಸಿ ತಂಡಕ್ಕೆ ಆಸರೆಯಾಗಿದ್ದರು. ಅವರೊಂದಿಗೆ ನವದೀಪ್ ಸೈನಿ ಕೂಡ ಬ್ಯಾಟಿಂಗ್ನಲ್ಲಿ ಮಿಂಚಿದ್ದರು. ಇದರಿಂದಾಗಿ ತಂಡವು ಉತ್ತಮ ಮೊತ್ತ ಗಳಿಸಿತ್ತು. ನವದೀಪ್ ಬೌಲಿಂಗ್ನಲ್ಲಿಯೂ ಮೆರೆದಾಡಿದ್ದರು. </p>.<p>ಆದರೆ ಮೊದಲ ಇನಿಂಗ್ಸ್ನಲ್ಲಿ ಎ ತಂಡವು 90 ರನ್ಗಳ ಹಿನ್ನಡೆ ಅನುಭವಿಸಿತು. ಎರಡನೇ ಇನಿಂಗ್ಸ್ನಲ್ಲಿ ರಿಷಭ್ ಪಂತ್ (61; 47ಎ ) ಮತ್ತು ಸರ್ಫರಾಜ್ ಖಾನ್ (46; 36ಎ) ಅವರ ಬ್ಯಾಟಿಂಗ್ ಬಲದಿಂದ ಬಿ ತಂಡವು 184 ರನ್ ಗಳಿಸಿತು. ಎ ತಂಡದ ವೇಗಿ ಆಕಾಶದೀಪ್ 5 ವಿಕೆಟ್ ಗಳಿಸಿದರು. </p>.<p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಭಾರತ ಬಿ: 116 ಓವರ್ಗಳಲ್ಲಿ 321. ಭಾರತ ಎ: 72.4 ಓವರ್ಗಳಲ್ಲಿ 231. ಎರಡನೇ ಇನಿಂಗ್ಸ್: ಭಾರತ ಬಿ ತಂಡ: 42 ಓವರ್ಗಳಲ್ಲಿ 184 (ಸರ್ಫರಾಜ್ ಖಾನ್ 46, ರಿಷಭ್ ಪಂತ್ 61, ನಿತೀಶ್ ರೆಡ್ಡಿ 19, ಖಲೀಲ್ ಅಹಮದ್ 69ಕ್ಕೆ3, ಆಕಾಶದೀಪ್ 56ಕ್ಕೆ5) ಭಾರತ ಎ ತಂಡ: 53 ಓವರ್ಗಳಲ್ಲಿ 198 (ಶುಭಮನ್ ಗಿಲ್ 21, ರಿಯಾನ್ ಪರಾಗ್ 31, ಕೆ.ಎಲ್. ರಾಹುಲ್ 57, ಆಕಾಶ್ ದೀಪ್ 43, ಮುಕೇಶ್ ಕುಮಾರ್ 50ಕ್ಕೆ2, ಯಶ್ ದಯಾಳ್ 50ಕ್ಕೆ3, ನವದೀಪ್ ಸೈನಿ 41ಕ್ಕೆ2) ಫಲಿತಾಂಶ: ಭಾರತ ಬಿ ತಂಡಕ್ಕೆ 76 ರನ್ಗಳ ಜಯ. ಪಂದ್ಯದ ಆಟಗಾರ: ಮುಷೀರ್ ಖಾನ್. </p>.<p> <strong>ಮಾನವ್ ಸುತಾರ್ಗೆ 7 ವಿಕೆಟ್: ಸಿ ತಂಡ ಜಯಭೇರಿ</strong> </p><p><strong>ಅನಂತಪುರ (ಪಿಟಿಐ)</strong>: ಎಡಗೈ ಸ್ಪಿನ್ನರ್ ಮಾನವ್ ಸುತಾರ್ (49ಕ್ಕೆ7) ಅವರ ಬೌಲಿಂಗ್ ನೆರವಿನಿಂದ ಭಾರತ ಸಿ ತಂಡವು ಭಾನುವಾರ ಇಲ್ಲಿ ನಡೆದ ದುಲೀಪ್ ಟ್ರೋಫಿ ಪಂದ್ಯದಲ್ಲಿ ಭಾರತ ಡಿ ವಿರುದ್ಧ 4 ವಿಕೆಟ್ಗಳಿಂದ ಜಯಿಸಿತು. 232 ರನ್ಗಳ ಗುರಿ ಬೆನ್ನಟ್ಟಿದ ಸಿ ತಂಡವು 61 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 233 ರನ್ ಗಳಿಸಿ ಗೆದ್ದಿತು. ನಾಯಕ ಋತುರಾಜ್ ಗಾಯಕವಾಡ (46 ರನ್) ಹಾಗೂ ಆರ್ಯನ್ ಜುಯಾಲ್ (47 ರನ್) ತಂಡದ ಜಯವನ್ನು ಸುಗಮಗೊಳಿಸಿದರು. </p><p><strong>ಸಂಕ್ಷಿಪ್ತ ಸ್ಕೋರು:</strong> ಮೊದಲ ಇನಿಂಗ್ಸ್: ಭಾರತ ಡಿ: 48.3 ಓವರ್ಗಳಲ್ಲಿ 164. ಭಾರತ ಸಿ: 62.2 ಓವರ್ಗಳಲ್ಲಿ 168. ಎರಡನೇ ಇನಿಂಗ್ಸ್: ಭಾರತ ಡಿ: 58.1 ಓವರ್ಗಳಲ್ಲಿ 236 (ಶ್ರೇಯಸ್ ಅಯ್ಯರ್ 54 ದೇವದತ್ತ ಪಡಿಕ್ಕಲ್ 56 ರಿಕಿ ಭುಯ್ 44 ಅಕ್ಷರ್ ಪಟೇಲ್ 28 ವೈಶಾಖ ವಿಜಯಕುಮಾರ್ 61ಕ್ಕೆ2 ಮಾನವ್ ಸುತಾರ್ 49ಕ್ಕೆ7) ಭಾರತ ಸಿ: 61 ಓವರ್ಗಳಲ್ಲಿ 6ಕ್ಕೆ233 (ಋತುರಾಜ್ ಗಾಯಕವಾಡ 46 ಸಾಯಿ ಸುದರ್ಶನ್ 22 ಆರ್ಯನ್ ಜುಯಾಲ್ 47 ರಜತ್ ಪಾಟೀದಾರ್ 44 ಅಭಿಷೇಕ್ ಪೊರೆಲ್ ಔಟಾಗದೆ 35 ಸಾರಾಂಶ್ ಜೈನ್ 92ಕ್ಕೆ4) ಫಲಿತಾಂಶ: ಭಾರತ ಸಿ ತಂಡಕ್ಕೆ 4 ವಿಕೆಟ್ಗಳ ಜಯ. ಪಂದ್ಯದ ಆಟಗಾರ: ಮಾನವ್ ಸುತಾರ್. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>