ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕ ವಿರುದ್ಧ ಟಿ–20 ಸರಣಿ: ಧೋನಿಗಿಲ್ಲ ಅವಕಾಶ; ಹಾರ್ದಿಕ್‌ಗೆ ಸ್ಥಾನ

Last Updated 29 ಆಗಸ್ಟ್ 2019, 18:44 IST
ಅಕ್ಷರ ಗಾತ್ರ

ನವದೆಹಲಿ: ಅನುಭವಿ ಆಟಗಾರ ಮಹೇಂದ್ರ ಸಿಂಗ್‌ ಧೋನಿ ಅವರನ್ನು, ಪ್ರವಾಸಿ ದಕ್ಷಿಣ ಆಫ್ರಿಕ ವಿರುದ್ಧ ಮೂರು ಪಂದ್ಯಗಳ ಟಿ–20 ಸರಣಿಗೆ ಆಯ್ಕೆಗಾರರು ಪಗರಿಗಣಿಸಿಲ್ಲ. ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಪುನರಾಗಮನ ಮಾಡಿದ್ದು, 15 ಮಂದಿಯ ತಂಡದಲ್ಲಿ ಆಗಿರುವ ಬದಲಾವಣೆ ಇದೊಂದೇ.

ಆಟದಿಂದ ಎರಡು ತಿಂಗಳು ದೂರವಿದ್ದು, ಸೇನೆಯ ಪ್ಯಾರಾಶೂಟ್‌ ರೆಜಿಮೆಂಟ್‌ನಲ್ಲಿ 15 ದಿನ ಕೆಲಸ ಮಾಡಿದ್ದ ಧೋನಿ, ಸದ್ಯ ಅಮೆರಿಕದಲ್ಲಿ ಕಳೆಯುತ್ತಿದ್ದಾರೆ.

ದಕ್ಷಿಣ ಆಫ್ರಿಕ ವಿರುದ್ಧ ಈ ಸರಣಿಗೆ ಲಭ್ಯತೆ ಬಗ್ಗೆ ಆಯ್ಕೆಗಾರರು ಧೋನಿ ಅವರ ಜೊತೆ ಮಾತನಾಡಿದ್ದಾರೆಯೇ ಎಂಬುದು ಗೊತ್ತಾಗಿಲ್ಲ.

ಪಾಂಡ್ಯ ಸೋದರರಲ್ಲಿ ಕಿರಿಯವರಾದ ಹಾರ್ದಿಕ್‌ ಅವರಿಗೆ ಸತತ ಪಂದ್ಯಗಳ ಒತ್ತಡದ ನಂತರ ವಿಶ್ರಾಂತಿ ನೀಡಲಾಗಿತ್ತು. ಉಳಿದಂತೆ, ಅಮೆರಿಕ ಮತ್ತು ಕೆರೀಬಿಯನ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆದ ಟಿ–20 ಪಂದ್ಯಗಳಲ್ಲಿ ಆಡಿದ ತಂಡವನ್ನೇ ಉಳಿಸಿಕೊಳ್ಳಲಾಗಿದೆ.ವೇಗದ ಬೌಲರ್‌ ಭುವನೇಶ್ವರ ಕುಮಾರ್‌ ಅವರಿಗೆ ಸತತ ಪಂದ್ಯಗಳ ನಂತರ ವಿಶ್ರಾಂತಿ ನೀಡಲಾಗಿದೆ.

ತಂಡದಿಂದ ಕೈಬಿಟ್ಟಿರುವ ಆಟಗಾರ ಇವರೊಬ್ಬರೇ. ಸೆ. 15, 18 ಮತ್ತು 22ರಂದು ಮೂರು ಪಂದ್ಯಗಳು ನಿಗದಿಯಾಗಿವೆ.

ತಂಡ ಇಂತಿದೆ: ವಿರಾಟ್‌ ಕೊಹ್ಲಿ (ನಾಯಕ), ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಶಿಖರ್ ಧವನ್‌, ಶ್ರೇಯಸ್‌ ಅಯ್ಯರ್‌, ಮನೀಷ್‌ ಪಾಂಡೆ, ರಿಷಬ್‌ ಪಂತ್‌ (ವಿಕೆಟ್‌ ಕೀಪರ್‌), ರವೀಂದ್ರ ಜಡೇಜ, ಕೃನಾಲ್ ಪಾಂಡ್ಯ, ವಾಷಿಂಗ್ಟನ್‌ ಸುಂದರ್‌, ರಾಹುಲ್‌ ಚಾಹರ್‌, ಖಲೀಲ್‌ ಅಹ್ಮದ್, ದೀಪಕ್‌ ಚಾಹರ್‌, ನವದೀಪ್‌ ಸೈನಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT