ಈ ಕುರಿತು ಮಾತನಾಡಿರುವ ಕೊಹ್ಲಿ, ‘ಮೂರು ಸಲ ನಾವು ಪ್ರಶಸ್ತಿ ಸನಿಹ ಹೋಗಿದ್ದೇವೆ. ಆದರೆ ಕೈಗೆಟುಕಿಲ್ಲ. ನಮ್ಮ ತಂಡಕ್ಕೆ ಇರುವ ಏಕೈಕ ಗುರಿ ಎಂದರೆ ಪ್ರಶಸ್ತಿ ಗೆಲ್ಲುವುದು. ಬೆಂಗಳೂರು ನೀಡಿರುವ ಪ್ರೀತಿಗೆ ಪ್ರಶಸ್ತಿ ಕಾಣಿಕೆ ನೀಡುವದು. ಆರ್ಸಿಬಿ ಫ್ರ್ಯಾಂಚೈಸ್ ತೋರಿರುವ ವಿಶ್ವಾಸ ಮತ್ತು ಕಾಳಜಿಗೆ ಸರಿಸಾಟಿಯೇ ಇಲ್ಲ ’ ಎಂದು ನುಡಿದಿದ್ದಾರೆ.