ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಪಿ ಪ್ರಕರಣ ಚೆನ್ನಾಗಿ ನಿಭಾಯಿಸಬೇಕಿತ್ತು: ಆ್ಯಂಡ್ರ್ಯೂ ಸ್ಟಾರ್ಸ್

Last Updated 5 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಲಂಡನ್: ತಾವು ನಾಯಕರಾಗಿದ್ದ ಸಂದರ್ಭದಲ್ಲಿ ಕೆವಿನ್ ಪೀಟರ್ಸನ್ ಪ್ರಕರಣವನ್ನು ಸೂಕ್ತವಾಗಿ ನಿಭಾಯಿಸಲಿಲ್ಲ ಎಂದು ಇಂಗ್ಲೆಂಡ್‌ ತಂಡದ ಹಿರಿಯ ಕ್ರಿಕೆಟಿಗ ಆ್ಯಂಡ್ರ್ಯೂ ಸ್ಟಾರ್ಸ್ ಹೇಳಿದ್ದಾರೆ.

ಕೆಲವು ವರ್ಷಗಳ ಹಿಂದೆ ಇಂಗ್ಲೆಂಡ್ ತಂಡದಲ್ಲಿ ಆಡುತ್ತಿದ್ದ ಕೆವಿನ್ ಪೀಟರ್ಸನ್ ಅವರು ಐಪಿಎಲ್‌ ಗೆ ಆಡಲು ತೆರಳಿದಾಗ ನಾಯಕರಾಗಿದ್ದ ಸ್ಟಾರ್ಸ್‌ ಆಕ್ಷೇಪ ವ್ಯಕ್ತಪಡಿಸಿದ್ದರು. ಆ ಘಟನೆಯನ್ನು ಭಾನುವಾರ ಸ್ಕೈಸ್ಪೋರ್ಟ್ಸ್‌ ಪಾಡ್‌ಕಾಸ್ಟ್‌ನಲ್ಲಿ ಸ್ಟ್ರಾಸ್ ನೆನಪಿಸಿಕೊಂಡಿದ್ದಾರೆ.

‘ಹಣದ ಸುರಿಮಳೆಯಾಗುವ ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್‌ಗಾಗಿ ಟೆಸ್ಟ್ ಸರಣಿಯಲ್ಲಿ ಆಡುವುದನ್ನು ಕಡೆಗಣಿಸಬಾರದು. ಕೆಪಿ ಬಗ್ಗೆ ನನಗೆ ಯಾವಾಗಲೂ ಮೃದು ಧೋರಣೆಯಿದೆ. ಅವರು ಮತ್ತು ನಾನು ಅಂದು ಇನ್ನಷ್ಟು ಉತ್ತಮವಾಗಿ ಆ ಸಂದರ್ಭವನ್ನು ನಿರ್ವಹಿಸಬೇಕಿತ್ತು’ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT