ಹೋಟೆಲ್ನಲ್ಲೇ ಉಳಿದ ಕಿವೀಸ್ ತಂಡ: ಮಳೆಯ ಕಾರಣಕ್ಕೆ ಆಟ ಆರಂಭವಾಗುವ ಅನುಮಾನದಿಂದ ಕಿವೀಸ್ ತಂಡದ ಆಟಗಾರರು ಬೆಳಿಗ್ಗೆ ಕ್ರೀಡಾಂಗಣಕ್ಕೆ ಬರದೇ ಹೋಟೆಲ್ನಲ್ಲೇ ಉಳಿದರು.
ಮೈದಾನದಲ್ಲಿನ ತೇವಾಂಶ ಆರದ ಕಾರಣ ನಾಲ್ಕು ದಿನಗಳ ಈ ಪಂದ್ಯದ ಮೊದಲ ದಿನದಾಟವೂ ಬಲಿಯಾಗಿತ್ತು. ಎರಡನೇ ದಿನ ಪಂದ್ಯ ಆರಂಭಗೊಂಡರೂ, ಆಗಾಗ ಮಳೆ ಕಾಡಿದ್ದರಿಂದ 66 ಓವರ್ಗಳಷ್ಟೇ ಪಂದ್ಯ ನಡೆದಿತ್ತು.
ಟಾಸ್ ಸೋತು ಬ್ಯಾಟಿಂಗ್ ನಡೆಸುತ್ತಿರುವ ಭಾರತ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 66 ಓವರ್ ಅಂತ್ಯಕ್ಕೆ 6ವಿಕೆಟ್ ಕಳೆದುಕೊಂಡು 229 ರನ್ ಗಳಿಸಿ ಆಡುತ್ತಿದೆ. ವಿಕೆಟ್ ಕೀಪರ್ ಕೆ.ಎಸ್.ಭರತ್(74) ಹಾಗೂ ರಾಹುಲ್ ಚಾಹರ್ (4) ಕ್ರೀಸ್ನಲ್ಲಿದ್ದಾರೆ.