ಇಸ್ಲಾಮಾಬಾದ್: ಭಾರತ –ಪಾಕಿಸ್ತಾನ ನಡುವೆ ಸಂಬಂಧ ವೃದ್ಧಿಸುವ ನಿಟ್ಟಿನಲ್ಲಿ ಎರಡೂ ದೇಶಗಳಸಾಮಾಜಿಕ ಕಾರ್ಯಕರ್ತರು ಎರಡು ದಿನಗಳ ಸಂವಾದದಲ್ಲಿ ಭಾಗವಹಿಸಿ ವಿಚಾರ, ವಿನಿಮಯ ಮಾಡಿಕೊಂಡಿದ್ದಾರೆ.
ಪುಲ್ವಾಮಾದಲ್ಲಿ ಉಗ್ರರ ದಾಳಿಯ ನಂತರ ಉಭಯ ದೇಶಗಳ ಸಂಬಂಧ ಹದಗೆಟ್ಟಿತ್ತು. ಆ ಬಳಿಕ ನೆರೆ ದೇಶಗಳ ನಡುವೆ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ನಡೆದ ಮೊದಲ ಪ್ರಯತ್ನ ಇದು ಎನ್ನಲಾಗಿದೆ. ಇಸ್ಲಾಮಾಬಾದ್ನ ಪ್ರಾದೇಶಿಕ ಶಾಂತಿ ಸಂಸ್ಥೆ ಈ ಸಂವಾದ ಆಯೋಜಿಸಿತ್ತು. ಭಾರತದ ಆರು ಪ್ರತಿನಿಧಿಗಳು ಭಾಗವಹಿಸಿದ್ದರು.
ಭದ್ರತೆ, ವ್ಯಾಪಾರ ಮತ್ತು ಸೇರಿದಂತೆ ವಿವಿಧ ವಿಚಾರಗಳ ಕುರಿತು ಚರ್ಚೆಯಾಯಿತು ಎಂದು ಆಯೋಜಕರು ತಿಳಿಸಿದ್ದಾರೆ.