<p><strong>ಕರಾಚಿ:</strong> ವಿದೇಶಿ ಆಟಗಾರರು ವಾಪಸ್ ಆಗಿದ್ದರೂ, ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿಯನ್ನು ಪುನರಾರಂಭಿಸಲು ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಸಿದ್ಧತೆ ನಡೆಸಿದೆ.</p><p>ಭಾರತ – ಪಾಕಿಸ್ತಾನ ಉಲ್ಬಣಿಸಿದ್ದ ಸಂಘರ್ಷಕ್ಕೆ 'ಕದನ ವಿರಾಮ' ಘೋಷಣೆಯಾಗುತ್ತಿದ್ದಂತೆ, ಟೂರ್ನಿಯನ್ನು ಮೇ 16ರಿಂದ ಮತ್ತೆ ಆರಂಭಿಸಲು ಹಾಗೂ ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೂ ಮುನ್ನ ಮುಗಿಸಲು ಪಿಸಿಬಿ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.</p><p>ಬಾಕಿ ಪಂದ್ಯಗಳನ್ನು ರಾವಲ್ಪಿಂಡಿ ಮತ್ತು ಲಾಹೋರ್ನಲ್ಲೇ ಆಯೋಜಿಸಲು ಉದ್ದೇಶಿಸಲಾಗಿದೆ.</p><p>'ಫೈನಲ್ ಸೇರಿದಂತೆ ಎಂಟು ಪಂದ್ಯಗಳು ಬಾಕಿ ಇವೆ. ವಿದೇಶಿ ಆಟಗಾರರು ವಾಪಸ್ ಬಂದರೂ, ಬಾರದಿದ್ದರೂ ಮೇ 15–16ರ ಹೊತ್ತಿಗೆ ಪುನರಾರಂಭಿಸಿ, ಟೂರ್ನಿಯನ್ನು ಮುಕ್ತಾಯ ಮಾಡುವ ಯೋಜನೆಯಲ್ಲಿದ್ದೇವೆ' ಎಂದು ಹೇಳಿವೆ.</p><p>ಕೆಲ ವಿದೇಶಿ ಆಟಗಾರರು ದುಬೈನಿಂದ ತಮ್ಮ ತವರಿಗೆ ಹೊರಟಿದ್ದಾರೆ. ಇನ್ನೂ ಕೆಲವರು ಅಲ್ಲೇ ಉಳಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.</p><p>'ಬಾಕಿ ಪಂದ್ಯಗಳ ಸಲುವಾಗಿ ವಾಪಸ್ ಬರುವಂತೆ ವಿದೇಶಿ ಆಟಗಾರರಿಗೆ ತಿಳಿಸುವಂತೆ ಫ್ರಾಂಚೈಸ್ಗಳಿಗೆ ಸೂಚಿಸಲಾಗಿದೆ. ಅಂತಿಮ ನಿರ್ಧಾರ ಆಟಗಾರರು ಮತ್ತು ಅವರ ಮಂಡಳಿಗಳಿಗೆ ಬಿಟ್ಟದ್ದು' ಎಂದೂ ಸ್ಪಷ್ಟಪಡಿಸಿದ್ದಾರೆ.</p><p>'ಪಿಸಿಬಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಸಂಪರ್ಕದಲ್ಲಿದೆ. ಎರಡೂ ಮಂಡಳಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ' ಎನ್ನಲಾಗಿದೆ.</p><p>ಬಾಂಗ್ಲಾ ವಿರುದ್ಧದ ಸರಣಿಯ ಮೂರು ಪಂದ್ಯಗಳು ರಾವಲ್ಪಿಂಡಿ, ಫೈಸಲಾಬಾದ್ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ.</p>.ಮೇ 16 ಅಥವಾ 17ರಿಂದ ಐಪಿಎಲ್: ಫೈನಲ್ ಪಂದ್ಯ ಕೋಲ್ಕತ್ತದಿಂದ ಸ್ಥಳಾಂತರ? .India Pakistan Tensions: ಪಿಎಸ್ಎಲ್ ಆತಿಥ್ಯಕ್ಕೆ ದುಬೈ ನಕಾರ ಸಾಧ್ಯತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕರಾಚಿ:</strong> ವಿದೇಶಿ ಆಟಗಾರರು ವಾಪಸ್ ಆಗಿದ್ದರೂ, ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿ ಆರಂಭಕ್ಕೂ ಮುನ್ನ ಪಾಕಿಸ್ತಾನ ಸೂಪರ್ ಲೀಗ್ (ಪಿಎಸ್ಎಲ್) ಟೂರ್ನಿಯನ್ನು ಪುನರಾರಂಭಿಸಲು ಪಾಕ್ ಕ್ರಿಕೆಟ್ ಮಂಡಳಿ (ಪಿಸಿಬಿ) ಸಿದ್ಧತೆ ನಡೆಸಿದೆ.</p><p>ಭಾರತ – ಪಾಕಿಸ್ತಾನ ಉಲ್ಬಣಿಸಿದ್ದ ಸಂಘರ್ಷಕ್ಕೆ 'ಕದನ ವಿರಾಮ' ಘೋಷಣೆಯಾಗುತ್ತಿದ್ದಂತೆ, ಟೂರ್ನಿಯನ್ನು ಮೇ 16ರಿಂದ ಮತ್ತೆ ಆರಂಭಿಸಲು ಹಾಗೂ ಬಾಂಗ್ಲಾದೇಶ ವಿರುದ್ಧದ ಟಿ20 ಕ್ರಿಕೆಟ್ ಸರಣಿಗೂ ಮುನ್ನ ಮುಗಿಸಲು ಪಿಸಿಬಿ ಯೋಜಿಸಿದೆ ಎಂದು ಮೂಲಗಳು ತಿಳಿಸಿವೆ.</p><p>ಬಾಕಿ ಪಂದ್ಯಗಳನ್ನು ರಾವಲ್ಪಿಂಡಿ ಮತ್ತು ಲಾಹೋರ್ನಲ್ಲೇ ಆಯೋಜಿಸಲು ಉದ್ದೇಶಿಸಲಾಗಿದೆ.</p><p>'ಫೈನಲ್ ಸೇರಿದಂತೆ ಎಂಟು ಪಂದ್ಯಗಳು ಬಾಕಿ ಇವೆ. ವಿದೇಶಿ ಆಟಗಾರರು ವಾಪಸ್ ಬಂದರೂ, ಬಾರದಿದ್ದರೂ ಮೇ 15–16ರ ಹೊತ್ತಿಗೆ ಪುನರಾರಂಭಿಸಿ, ಟೂರ್ನಿಯನ್ನು ಮುಕ್ತಾಯ ಮಾಡುವ ಯೋಜನೆಯಲ್ಲಿದ್ದೇವೆ' ಎಂದು ಹೇಳಿವೆ.</p><p>ಕೆಲ ವಿದೇಶಿ ಆಟಗಾರರು ದುಬೈನಿಂದ ತಮ್ಮ ತವರಿಗೆ ಹೊರಟಿದ್ದಾರೆ. ಇನ್ನೂ ಕೆಲವರು ಅಲ್ಲೇ ಉಳಿದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.</p><p>'ಬಾಕಿ ಪಂದ್ಯಗಳ ಸಲುವಾಗಿ ವಾಪಸ್ ಬರುವಂತೆ ವಿದೇಶಿ ಆಟಗಾರರಿಗೆ ತಿಳಿಸುವಂತೆ ಫ್ರಾಂಚೈಸ್ಗಳಿಗೆ ಸೂಚಿಸಲಾಗಿದೆ. ಅಂತಿಮ ನಿರ್ಧಾರ ಆಟಗಾರರು ಮತ್ತು ಅವರ ಮಂಡಳಿಗಳಿಗೆ ಬಿಟ್ಟದ್ದು' ಎಂದೂ ಸ್ಪಷ್ಟಪಡಿಸಿದ್ದಾರೆ.</p><p>'ಪಿಸಿಬಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯೊಂದಿಗೆ ಸಂಪರ್ಕದಲ್ಲಿದೆ. ಎರಡೂ ಮಂಡಳಿಗಳು ಪರಿಸ್ಥಿತಿಯನ್ನು ಅವಲೋಕಿಸುತ್ತಿವೆ' ಎನ್ನಲಾಗಿದೆ.</p><p>ಬಾಂಗ್ಲಾ ವಿರುದ್ಧದ ಸರಣಿಯ ಮೂರು ಪಂದ್ಯಗಳು ರಾವಲ್ಪಿಂಡಿ, ಫೈಸಲಾಬಾದ್ ಮತ್ತು ಲಾಹೋರ್ನಲ್ಲಿ ನಿಗದಿಯಾಗಿವೆ.</p>.ಮೇ 16 ಅಥವಾ 17ರಿಂದ ಐಪಿಎಲ್: ಫೈನಲ್ ಪಂದ್ಯ ಕೋಲ್ಕತ್ತದಿಂದ ಸ್ಥಳಾಂತರ? .India Pakistan Tensions: ಪಿಎಸ್ಎಲ್ ಆತಿಥ್ಯಕ್ಕೆ ದುಬೈ ನಕಾರ ಸಾಧ್ಯತೆ.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>