ಇದಕ್ಕೆ ಸಂಬಂಧಿಸಿದಂತೆ ಭಾರತದ ಮಾಜಿ ಕ್ರಿಕೆಟಿಗನ ಹೇಳಿಕೆಯನ್ನು ಉಲ್ಲೇಖಿಸಲಾಗಿದೆ. 'ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಅವರು (ಕೊಹ್ಲಿ) ಆಡಿದ ರೀತಿಯನ್ನು ಗಮನಿಸಿ. ಹೇಗೆ ಆಡಬೇಕೆಂಬುದು ಗೊತ್ತಿರಲಿಲ್ಲ. ವಿರಾಟ್ ಕೊಹ್ಲಿ ಅತ್ಯಂತ ಕಠಿಣ ಸಮಯ ಎದುರಿಸುತ್ತಿದ್ದಾರೆ ಎಂಬಂತೆ ಭಾಸವಾಗುತ್ತಿದೆ. ಐಪಿಎಲ್ ಮುಗಿಯುವ ಮೊದಲೇ ಅವರನ್ನು ತೆಗೆದು ಹಾಕುವ ಸಾಧ್ಯತೆಗಳಿವೆ. ಈ ಹಿಂದೆಯು ಇತರ ತಂಡಗಳಿಗೆ ಇಂತಹ ಅನುಭವವಾಗಿದೆ. ಕೆಕೆಆರ್ನಲ್ಲಿ ದಿನೇಶ್ ಕಾರ್ತಿಕ್, ಹೈದರಾಬಾದ್ನಲ್ಲಿ ಡೇವಿಡ್ ವಾರ್ನರ್. ಆದ್ದರಿಂದ ಆರ್ಸಿಬಿಯಲ್ಲೂ ಇದು ಸಂಭವಿಸಬಹುದು. ನಿನ್ನೆಯ ಪಂದ್ಯ ನೋಡಿ ನನ್ನಲ್ಲಿ ಅಂತಹ ಭಾವನೆ ಉಂಟಾಗಿದೆ. ಇನ್ನೊಂದು ಕೆಟ್ಟ ಪಂದ್ಯ ಆಡಿದರೆ ಆರ್ಸಿಬಿ ನಾಯಕತ್ವದಲ್ಲಿ ಬದಲಾವಣೆಯನ್ನು ಕಾಣಬಹುದಾಗಿದೆ' ಎಂದು ಅನಾಮಧೇಯ ಮಾಜಿ ನಾಯಕರ ಹೇಳಿಕೆಯನ್ನು ಐಎಎನ್ಎಸ್ ಉಲ್ಲೇಖಿಸಿದೆ.