<p><strong>ನವದೆಹಲಿ:</strong> ಹೋದ ತಿಂಗಳು ಕೋವಿಡ್ –19 ಸೋಂಕು ತಗುಲಿದ್ದ ಕ್ರಿಕೆಟಿಗ ಕರುಣ್ ನಾಯರ್ ಅವರು ಗುಣಮುಖರಾಗಿದ್ದಾರೆ. ಅವರು ಯುಎಇಯಲ್ಲಿ ನಡೆಯಲಿರುವ ಐಪಿಎಲ್ನಲ್ಲಿ ಆಡಲು ಸಿದ್ಧರಾಗಿದ್ಧಾರೆ.</p>.<p>ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಅವರು ಪ್ರತಿನಿಧಿಸುತ್ತಾರೆ. ಸೆಪ್ಟೆಂಬರ್ 19ರಿಂದ ಟೂರ್ನಿಯು ಆರಂಭವಾಗಲಿದೆ.</p>.<p>’ಹೋದ ತಿಂಗಳು ವೈರಸ್ ಸೋಂಕು ಇರುವುದು ತಿಳಿದಾಗ ಕರುಣ್ ನಾಯರ್ ಅವರು ಎರಡು ವಾರಗಳ ಸ್ವಯಂ ಪ್ರತ್ಯೇಕವಾಸ ವಿಧಿಸಿಕೊಂಡಿದ್ದರು. ಇದೀಗ ಅವರ ತಪಾಸಣೆಯಲ್ಲಿ ನೆಗೆಟಿವ್ ಬಂದಿದೆ‘ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಆದರೆ ಈ ಕುರಿತು ಪಂಜಾಬ್ ತಂಡದವರು ಯಾವುದೇ ಹೇಳಿಕೆ ನೀಡಿಲ್ಲ.</p>.<p>’ಆಗಸ್ಟ್ ಎಂಟರಂದು ಅವರ ಕ್ವಾರಂಟೈನ್ ಅವಧಿ ಮುಗಿದಿತ್ತು. ಆಗ ಮಾಡಿದ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದಾರೆ. ಆದರೆ ಅವರು ಇನ್ನೂ ಮೂರು ಪರೀಕ್ಷೆಗಳಿಗೆ ಒಳಪಡಬೇಕು. ತಂಡವು ಆಗಸ್ಟ್ 20ರಂದು ಯುಎಇಗೆ ಪಯಣಿಸಲಿದೆ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.</p>.<p>’ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಅಸಿಂಪ್ಟೆಮೆಟಿಕ್ ಇದ್ದರು. ಎರಡು ವಾರಗಳ ಕ್ವಾರಂಟೈನ್ ನಂತರ ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಸದ್ಯ ಅವರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಈಗ ಅವರಿಗೆ ಯಾವುದೇ ಸಮಸ್ಯೆಯಿಲ್ಲ‘ ಎಂದು ಮೂಲಗಳು ತಿಳಿಸಿವೆ.</p>.<p>28 ವರ್ಷದ ಕರುಣ್ ಅವರು ಕರ್ನಾಟಕ ರಣಜಿ ತಂಡದ ನಾಯಕರೂ ಹೌದು. 2017ರ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಕರುಣ್ ತ್ರಿಶತಕ ದಾಖಲಿಸಿದ್ದರು.2018ರಿಂದ ಅವರು ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದಾರೆ. ರಾಜ್ಯದ ಮಯಂಕ್ ಅಗರವಾಲ್, ಕೆ. ಗೌತಮ್, ಜೆ. ಸುಚಿತ್ ಕೂಡ ತಂಡದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ಹೋದ ತಿಂಗಳು ಕೋವಿಡ್ –19 ಸೋಂಕು ತಗುಲಿದ್ದ ಕ್ರಿಕೆಟಿಗ ಕರುಣ್ ನಾಯರ್ ಅವರು ಗುಣಮುಖರಾಗಿದ್ದಾರೆ. ಅವರು ಯುಎಇಯಲ್ಲಿ ನಡೆಯಲಿರುವ ಐಪಿಎಲ್ನಲ್ಲಿ ಆಡಲು ಸಿದ್ಧರಾಗಿದ್ಧಾರೆ.</p>.<p>ಕೆ.ಎಲ್.ರಾಹುಲ್ ನಾಯಕತ್ವದ ಕಿಂಗ್ಸ್ ಇಲೆವನ್ ಪಂಜಾಬ್ ತಂಡವನ್ನು ಅವರು ಪ್ರತಿನಿಧಿಸುತ್ತಾರೆ. ಸೆಪ್ಟೆಂಬರ್ 19ರಿಂದ ಟೂರ್ನಿಯು ಆರಂಭವಾಗಲಿದೆ.</p>.<p>’ಹೋದ ತಿಂಗಳು ವೈರಸ್ ಸೋಂಕು ಇರುವುದು ತಿಳಿದಾಗ ಕರುಣ್ ನಾಯರ್ ಅವರು ಎರಡು ವಾರಗಳ ಸ್ವಯಂ ಪ್ರತ್ಯೇಕವಾಸ ವಿಧಿಸಿಕೊಂಡಿದ್ದರು. ಇದೀಗ ಅವರ ತಪಾಸಣೆಯಲ್ಲಿ ನೆಗೆಟಿವ್ ಬಂದಿದೆ‘ ಎಂದು ಇಎಸ್ಪಿಎನ್ ಕ್ರಿಕ್ಇನ್ಫೋ ವರದಿ ಮಾಡಿದೆ. ಆದರೆ ಈ ಕುರಿತು ಪಂಜಾಬ್ ತಂಡದವರು ಯಾವುದೇ ಹೇಳಿಕೆ ನೀಡಿಲ್ಲ.</p>.<p>’ಆಗಸ್ಟ್ ಎಂಟರಂದು ಅವರ ಕ್ವಾರಂಟೈನ್ ಅವಧಿ ಮುಗಿದಿತ್ತು. ಆಗ ಮಾಡಿದ ಪರೀಕ್ಷೆಯಲ್ಲಿ ನೆಗೆಟಿವ್ ಆಗಿದ್ದಾರೆ. ಆದರೆ ಅವರು ಇನ್ನೂ ಮೂರು ಪರೀಕ್ಷೆಗಳಿಗೆ ಒಳಪಡಬೇಕು. ತಂಡವು ಆಗಸ್ಟ್ 20ರಂದು ಯುಎಇಗೆ ಪಯಣಿಸಲಿದೆ‘ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.</p>.<p>’ಅವರು ಈಗ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಅಸಿಂಪ್ಟೆಮೆಟಿಕ್ ಇದ್ದರು. ಎರಡು ವಾರಗಳ ಕ್ವಾರಂಟೈನ್ ನಂತರ ಅವರ ಪರೀಕ್ಷಾ ವರದಿಯಲ್ಲಿ ನೆಗೆಟಿವ್ ಎಂದು ಬಂದಿತ್ತು. ಸದ್ಯ ಅವರು ತರಬೇತಿಯಲ್ಲಿ ಭಾಗವಹಿಸುತ್ತಿದ್ದಾರೆ. ಈಗ ಅವರಿಗೆ ಯಾವುದೇ ಸಮಸ್ಯೆಯಿಲ್ಲ‘ ಎಂದು ಮೂಲಗಳು ತಿಳಿಸಿವೆ.</p>.<p>28 ವರ್ಷದ ಕರುಣ್ ಅವರು ಕರ್ನಾಟಕ ರಣಜಿ ತಂಡದ ನಾಯಕರೂ ಹೌದು. 2017ರ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದಲ್ಲಿ ಕರುಣ್ ತ್ರಿಶತಕ ದಾಖಲಿಸಿದ್ದರು.2018ರಿಂದ ಅವರು ಕಿಂಗ್ಸ್ ಇಲೆವನ್ ಪಂಜಾಬ್ ತಂಡದಲ್ಲಿದ್ದಾರೆ. ರಾಜ್ಯದ ಮಯಂಕ್ ಅಗರವಾಲ್, ಕೆ. ಗೌತಮ್, ಜೆ. ಸುಚಿತ್ ಕೂಡ ತಂಡದಲ್ಲಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>