ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಮುಖ್ಯ ಕ್ಯೂರೇಟರ್ ಎಲ್. ಪ್ರಶಾಂತ್ ರಾವ್ ಅವರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಗೆ(ಎನ್ಸಿಎ) ನೇಮಕ ಮಾಡಲಾಗಿದೆ.
ರಾವ್ ಅವರಿಗೆ ಕ್ಯೂರೇಟರ್ ಆಗಿ 11 ವರ್ಷಗಳಿಂದ ಕಾರ್ಯನಿರ್ವಹಿಸಿದ ಅನುಭವ ಇದೆ. ಅಲ್ಲದೇ 2019ರಿಂದ ಬಿಸಿಸಿಐ ಎಲೀಟ್ ಪ್ಯಾನೆಲ್ ಕ್ಯೂರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಅವರು ಎನ್ಸಿಎನಲ್ಲಿ ಮುಖ್ಯ ಕ್ಯೂರೇಟರ್ ಆಗಿ ಕಾರ್ಯನಿರ್ವಹಿಸುವರು.
‘ಬಹಳ ಸಂತಸವಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ಯೂರೇಟರ್ ಆಗಿ ಕಾರ್ಯನಿರ್ವಹಿಸಿದ್ದು ಒಳ್ಳೆಯ ಅನುಭವ. ಹೊಸ ಜವಾಬ್ದಾರಿ ನಿಭಾಯಿಸಲು ಉತ್ಸುಕನಾಗಿರುವೆ’ ಎಂದು ರಾವ್ ‘ಪ್ರಜಾವಾಣಿ’ಗೆ ಹೇಳಿದ್ದಾರೆ.