<p><strong>ಬೆಂಗಳೂರು</strong>: ರಚಿತಾ ಹತ್ವಾರ್ ಅರ್ಧ ಶತಕ ಹೊಡೆದ ಬಳಿಕ ಬೌಲರ್ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಣಿ ಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 12 ರನ್ಗಳಿಂದ ಸೋಲಿಸಿತು.</p>.<p>ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಆಡಿದ ಮೈಸೂರು ತಂಡ 20 ಓವರುಗಳಲ್ಲಿ 6 ವಿಕೆಟ್ಗೆ 110 ರನ್ ಗಳಿಸಿತು. ರಚಿತಾ 43 ಎಸೆತಗಳಲ್ಲಿ 1 ಸಿಕ್ಸರ್, 9 ಬೌಂಡರಿಗಳಿದ್ದ 57 ರನ್ ಹೊಡೆದರು. ತಂಡ ಬೌಲರ್ಗಳು ನಂತರ ಕಲ್ಯಾಣ ಬೆಂಗಳೂರು ಬ್ಲಾಸ್ಟರ್ಸ್ ತಂಡ 9 ವಿಕೆಟ್ಗೆ 98 ರನ್ಗಳಿಗೆ ಕಟ್ಟಿಹಾಕಿದರು. ಕೆ.ಕೆ.ಕಶ್ವಿ (42 ಎಸೆತಗಳಲ್ಲಿ 48) ಅವರ ಹೋರಾಟ ಫಲಪ್ರದವಾಗಲಿಲ್ಲ.</p>.<p>ದಿನದ ಎರಡನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ಇನ್ನೊಂದು ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಶಿವಮೊಗ್ಗ ಲಯನೆಸ್ ತಂಡವನ್ನು ಸೋಲಿಸಿತು. ಇಂಚರಾ ಸಿ.ಯು 46 ಎಸೆತಗಳಲ್ಲಿ ಅಜೇಯ 51 ರನ್ ಹೊಡೆದು ತಂಡ 15 ಎಸೆತಗಳಿರುವಂತೆ ಗುರಿತಲುಪಲು ನೆರವಾದರು.</p>.<p><strong>ಸಂಕ್ಷಿಪ್ತ ಸ್ಕೋರು</strong></p><p><strong>ಮೈಸೂರು ವಾರಿಯರ್ಸ್:</strong> 20 ಓವರುಗಳಲ್ಲಿ 6 ವಿಕೆಟ್ಗೆ 110 (ರಚಿತಾ ಹತ್ವಾರ್ 57, ಸಿಲ್ಕಿನ್ ಜೀತುಭಾಯಿ ಪಟೇಲ್ 23; ಪುಷ್ಪಾ ಕಿರೆಸೂರ್ 21ಕ್ಕೆ3)</p><p><strong>ಕಲ್ಯಾಣ ಬೆಂಗಳೂರು ಬ್ಲಾಸ್ಟರ್ಸ್</strong>: 20 ಓವರುಗಳಲ್ಲಿ 9 ವಿಕೆಟ್ಗೆ 98 (ಕಂದಿಕೊಪ್ಪ ಕಶ್ವಿ 48; ಅಹ್ಲಮ್ ಎಫ್. ಸೈಯದ್ 10ಕ್ಕೆ2, ವಂದಿತಾ ಕೃಷ್ಣರಾವ್ 21ಕ್ಕೆ2, ದೀಕ್ಷಾ ಜೆ. 17ಕ್ಕೆ3)</p>.<p><strong>ಶಿವಮೊಗ್ಗ ಲಯನೆಸ್</strong>: 20 ಓವರುಗಳಲ್ಲಿ 6 ವಿಕೆಟ್ಗೆ 113 (ರೋಶಿನಿ ಕಿರಣ್ 31, ಲಾವಣ್ಯ ಚಲನಾ 39; ಲಿಯಾಂಕಾ ಶೆಟ್ಟಿ 22ಕ್ಕೆ2)</p><p><strong>ಮಂಗಳೂರು ಡ್ರ್ಯಾಗನ್ಸ್</strong>: 17.3 ಓವರುಗಳಲ್ಲಿ 4 ವಿಕೆಟ್ಗೆ 114 (ಇಂಚರಾ ಸಿ.ಯು. ಔಟಾಗದೇ 51, ಪ್ರತ್ಯುಷಾ ಕುಮಾರ್ 37).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ರಚಿತಾ ಹತ್ವಾರ್ ಅರ್ಧ ಶತಕ ಹೊಡೆದ ಬಳಿಕ ಬೌಲರ್ಗಳ ಸಾಂಘಿಕ ಪ್ರದರ್ಶನದ ನೆರವಿನಿಂದ ಮೈಸೂರು ವಾರಿಯರ್ಸ್ ತಂಡವು ಮಹಾರಾಣಿ ಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ಕಲ್ಯಾಣಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು 12 ರನ್ಗಳಿಂದ ಸೋಲಿಸಿತು.</p>.<p>ಆಲೂರಿನ ಕೆಎಸ್ಸಿಎ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಆಡಿದ ಮೈಸೂರು ತಂಡ 20 ಓವರುಗಳಲ್ಲಿ 6 ವಿಕೆಟ್ಗೆ 110 ರನ್ ಗಳಿಸಿತು. ರಚಿತಾ 43 ಎಸೆತಗಳಲ್ಲಿ 1 ಸಿಕ್ಸರ್, 9 ಬೌಂಡರಿಗಳಿದ್ದ 57 ರನ್ ಹೊಡೆದರು. ತಂಡ ಬೌಲರ್ಗಳು ನಂತರ ಕಲ್ಯಾಣ ಬೆಂಗಳೂರು ಬ್ಲಾಸ್ಟರ್ಸ್ ತಂಡ 9 ವಿಕೆಟ್ಗೆ 98 ರನ್ಗಳಿಗೆ ಕಟ್ಟಿಹಾಕಿದರು. ಕೆ.ಕೆ.ಕಶ್ವಿ (42 ಎಸೆತಗಳಲ್ಲಿ 48) ಅವರ ಹೋರಾಟ ಫಲಪ್ರದವಾಗಲಿಲ್ಲ.</p>.<p>ದಿನದ ಎರಡನೇ ಪಂದ್ಯದಲ್ಲಿ ಮಂಗಳೂರು ಡ್ರಾಗನ್ಸ್ ಇನ್ನೊಂದು ಪಂದ್ಯದಲ್ಲಿ ಆರು ವಿಕೆಟ್ಗಳಿಂದ ಶಿವಮೊಗ್ಗ ಲಯನೆಸ್ ತಂಡವನ್ನು ಸೋಲಿಸಿತು. ಇಂಚರಾ ಸಿ.ಯು 46 ಎಸೆತಗಳಲ್ಲಿ ಅಜೇಯ 51 ರನ್ ಹೊಡೆದು ತಂಡ 15 ಎಸೆತಗಳಿರುವಂತೆ ಗುರಿತಲುಪಲು ನೆರವಾದರು.</p>.<p><strong>ಸಂಕ್ಷಿಪ್ತ ಸ್ಕೋರು</strong></p><p><strong>ಮೈಸೂರು ವಾರಿಯರ್ಸ್:</strong> 20 ಓವರುಗಳಲ್ಲಿ 6 ವಿಕೆಟ್ಗೆ 110 (ರಚಿತಾ ಹತ್ವಾರ್ 57, ಸಿಲ್ಕಿನ್ ಜೀತುಭಾಯಿ ಪಟೇಲ್ 23; ಪುಷ್ಪಾ ಕಿರೆಸೂರ್ 21ಕ್ಕೆ3)</p><p><strong>ಕಲ್ಯಾಣ ಬೆಂಗಳೂರು ಬ್ಲಾಸ್ಟರ್ಸ್</strong>: 20 ಓವರುಗಳಲ್ಲಿ 9 ವಿಕೆಟ್ಗೆ 98 (ಕಂದಿಕೊಪ್ಪ ಕಶ್ವಿ 48; ಅಹ್ಲಮ್ ಎಫ್. ಸೈಯದ್ 10ಕ್ಕೆ2, ವಂದಿತಾ ಕೃಷ್ಣರಾವ್ 21ಕ್ಕೆ2, ದೀಕ್ಷಾ ಜೆ. 17ಕ್ಕೆ3)</p>.<p><strong>ಶಿವಮೊಗ್ಗ ಲಯನೆಸ್</strong>: 20 ಓವರುಗಳಲ್ಲಿ 6 ವಿಕೆಟ್ಗೆ 113 (ರೋಶಿನಿ ಕಿರಣ್ 31, ಲಾವಣ್ಯ ಚಲನಾ 39; ಲಿಯಾಂಕಾ ಶೆಟ್ಟಿ 22ಕ್ಕೆ2)</p><p><strong>ಮಂಗಳೂರು ಡ್ರ್ಯಾಗನ್ಸ್</strong>: 17.3 ಓವರುಗಳಲ್ಲಿ 4 ವಿಕೆಟ್ಗೆ 114 (ಇಂಚರಾ ಸಿ.ಯು. ಔಟಾಗದೇ 51, ಪ್ರತ್ಯುಷಾ ಕುಮಾರ್ 37).</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>