<p><strong>ಬೆಂಗಳೂರು: </strong>ರಾಜಕೀಯ,ಸಿನಿಮಾರಂಗದ ಕೆಲವರ ಎದೆ ನಡುಗಿಸುತ್ತಿರುವ #MeToo ಅಭಿಯಾನದ ಅಬ್ಬರ ಇದೀಗ ಕ್ರಿಕೆಟ್ ಅಂಗಳಕ್ಕೂ ಹಬ್ಬಿದೆ.ಕೇಂದ್ರ ಸಚಿವ ಎಂ.ಜೆ. ಅಕ್ಬರ್, ಅಲೋಕ್ ನಾಥ್,ನಾನಾ ಪಾಟೇಕರ್, ಸಾಜಿದ್ ಖಾನ್, ಕೈಲಾಸ್ ಖೇರ್, ಅದಿತಿ ಮಿತ್ತಲ್ ನಂತರ ಇದೀಗ ಬಿಸಿಸಿಐ ಸಿಇಒರಾಹುಲ್ ಜೋಹ್ರಿ ಸರದಿ.</p>.<p>2016ರಿಂದ ಬಿಸಿಸಿಐನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ವಿರುದ್ಧ ಲೇಖಕಿ ಹರ್ನಿದ್ಕೌರ್ ಟ್ವಿಟರ್ನಲ್ಲಿ ಕಿರುಕುಳದ ಆರೋಪ ಮಾಡಿದ್ದಾರೆ. ಜೋಹ್ರಿ ಅವರು ಮಾಡಿದ್ದಾರೆ ಎನ್ನಲಾದ ಇಮೇಲ್ಗಳ ಸ್ಕ್ರೀನ್ ಶಾಟ್ಗಳನ್ನು ಹರಿಬಿಟ್ಟಿರುವ ಕೌರ್, ಇದೀಗ ನಿಮ್ಮ ಸರದಿ ಎಂದು ಕುಟುಕಿದ್ದಾರೆ.</p>.<p>@ಪೆಡೆಸ್ಟ್ರಿಯನ್ಪೊಯೆಟ್ ಎಂಬ ಖಾತೆಯ ಮೂಲಕ ಕೆಲವು ಸ್ಕ್ರೀನ್ ಶಾಟ್ಗಳನ್ನು ಪ್ರಕಟಿಸಿರುವ ಕೌರ್,‘ಮಾಧ್ಯಮಗಳಿಗೆ ಕೆಲವು ಇಮೇಲ್ಗಳನ್ನು ಕಳುಹಿಸಲಾಗಿದೆ. ಸಂತ್ರಸ್ತರು ಎಲ್ಲರ ಹೆಸರುಗಳನ್ನು ಬಹಿರಂಗಪಡಿಸದಂತೆ ಹೇಳಿದ್ದಾರೆ. ರಾಹುಲ್ ಜೋಹ್ರಿ ಇದೀಗ ನಿಮ್ಮ ಸಮಯ’ ಎಂದು ಬರೆದಿದ್ದಾರೆ.</p>.<p>ಲಭ್ಯವಿರುವ ಸ್ಕ್ರೀನ್ಶಾಟ್ಗಳ ಪ್ರಕಾರ, ಜೋಹ್ರಿ ಅವರು ಸಂತ್ರಸ್ತರಿಗೆ ಉದ್ಯೋಗ ಕೊಡಿಸುವ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು: </strong>ರಾಜಕೀಯ,ಸಿನಿಮಾರಂಗದ ಕೆಲವರ ಎದೆ ನಡುಗಿಸುತ್ತಿರುವ #MeToo ಅಭಿಯಾನದ ಅಬ್ಬರ ಇದೀಗ ಕ್ರಿಕೆಟ್ ಅಂಗಳಕ್ಕೂ ಹಬ್ಬಿದೆ.ಕೇಂದ್ರ ಸಚಿವ ಎಂ.ಜೆ. ಅಕ್ಬರ್, ಅಲೋಕ್ ನಾಥ್,ನಾನಾ ಪಾಟೇಕರ್, ಸಾಜಿದ್ ಖಾನ್, ಕೈಲಾಸ್ ಖೇರ್, ಅದಿತಿ ಮಿತ್ತಲ್ ನಂತರ ಇದೀಗ ಬಿಸಿಸಿಐ ಸಿಇಒರಾಹುಲ್ ಜೋಹ್ರಿ ಸರದಿ.</p>.<p>2016ರಿಂದ ಬಿಸಿಸಿಐನ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ರಾಹುಲ್ ವಿರುದ್ಧ ಲೇಖಕಿ ಹರ್ನಿದ್ಕೌರ್ ಟ್ವಿಟರ್ನಲ್ಲಿ ಕಿರುಕುಳದ ಆರೋಪ ಮಾಡಿದ್ದಾರೆ. ಜೋಹ್ರಿ ಅವರು ಮಾಡಿದ್ದಾರೆ ಎನ್ನಲಾದ ಇಮೇಲ್ಗಳ ಸ್ಕ್ರೀನ್ ಶಾಟ್ಗಳನ್ನು ಹರಿಬಿಟ್ಟಿರುವ ಕೌರ್, ಇದೀಗ ನಿಮ್ಮ ಸರದಿ ಎಂದು ಕುಟುಕಿದ್ದಾರೆ.</p>.<p>@ಪೆಡೆಸ್ಟ್ರಿಯನ್ಪೊಯೆಟ್ ಎಂಬ ಖಾತೆಯ ಮೂಲಕ ಕೆಲವು ಸ್ಕ್ರೀನ್ ಶಾಟ್ಗಳನ್ನು ಪ್ರಕಟಿಸಿರುವ ಕೌರ್,‘ಮಾಧ್ಯಮಗಳಿಗೆ ಕೆಲವು ಇಮೇಲ್ಗಳನ್ನು ಕಳುಹಿಸಲಾಗಿದೆ. ಸಂತ್ರಸ್ತರು ಎಲ್ಲರ ಹೆಸರುಗಳನ್ನು ಬಹಿರಂಗಪಡಿಸದಂತೆ ಹೇಳಿದ್ದಾರೆ. ರಾಹುಲ್ ಜೋಹ್ರಿ ಇದೀಗ ನಿಮ್ಮ ಸಮಯ’ ಎಂದು ಬರೆದಿದ್ದಾರೆ.</p>.<p>ಲಭ್ಯವಿರುವ ಸ್ಕ್ರೀನ್ಶಾಟ್ಗಳ ಪ್ರಕಾರ, ಜೋಹ್ರಿ ಅವರು ಸಂತ್ರಸ್ತರಿಗೆ ಉದ್ಯೋಗ ಕೊಡಿಸುವ ಆಮಿಷ ಒಡ್ಡಿದ್ದಾರೆ ಎನ್ನಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>