<p><strong>ಜೋಹಾನ್ಸ್ಬರ್ಗ್</strong>: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ರಚಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಯೋಬಬಲ್ನಲ್ಲಿ ನಮ್ಮ ದೇಶದ ಆಟಗಾರರು ಸುರಕ್ಷಿತ ಭಾವ ಅನುಭವಿಸಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.</p>.<p>ಬಯೋಬಬಲ್ನಲ್ಲಿ ಕೆಲವು ಆಟಗಾರರಿಗೆ ಕೋವಿಡ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯನ್ನು ಮೇ 4ರಂದು ಮುಂದೂಡಲಾಗಿತ್ತು. ಲೀಗ್ನಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾದ 11 ಮಂದಿ ಈಗಾಗಲೇ ಜೋಹಾನ್ಸ್ಬರ್ಗ್ಗೆ ತೆರಳಿದ್ದಾರೆ.</p>.<p>‘ನಮ್ಮ ಆಟಗಾರರಿಗೆ ಐಪಿಎಲ್ ಬಯೋಬಬಲ್ ಸುರಕ್ಷಿತ ಎನಿಸಿತ್ತು. ಭಾರತದಲ್ಲಿನ ಜೀವಸುರಕ್ಷಾ ವಾತಾವರಣ ಒಂದು ಉತ್ತಮ ಅನುಭವ. ಕೋವಿಡ್ ಬಿಕ್ಕಟ್ಟಿನಲ್ಲಿ ಅವರು ಅಪಾಯಕ್ಕೆ ಸಿಲುಕಲಿಲ್ಲ‘ ಎಂದು ಸುದ್ದಿಗೋಷ್ಠಿಯಲ್ಲಿ ಸ್ಮಿತ್ ನುಡಿದರು.</p>.<p>‘ಕೊರೊನಾ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವಾಗ ಅಪಾಯ ಸಾಮಾನ್ಯವಾಗಿ ಇರುತ್ತದೆ. ಇದಕ್ಕೆ ಸಂಘಟಕರನ್ನು ದೂಷಿಸುವಂತಿಲ್ಲ. ಒಂದೇ ವೇಳೆ ವೈರಸ್ ಬಯೋಬಬಲ್ ಪ್ರವೇಶಿಸಿದರೆ ಏನಾಗಲಿದೆ ಎಂದು ಹೇಳುವುದು ಕಷ್ಟ‘ ಎಂದೂ ಸ್ಮಿತ್ ಪ್ರತಿಪಾದಿಸಿದರು.</p>.<p>ಟೂರ್ನಿಯಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾದ ಎಲ್ಲ ಆಟಗಾರರಿಗೆ ಸುರಕ್ಷಿತ ಪ್ರಯಾಣ ಖಚಿತಪಡಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಸ್ಮಿತ್ ಇದೇ ವೇಳೆ ಶ್ಲಾಘಿಸಿದರು.</p>.<p>‘ನಮ್ಮ ಆಟಗಾರರ ದೃಷ್ಟಿಯಿಂದ ನಮ್ಮ ಗಡಿಗಳನ್ನು ಇನ್ನೂ ಬಂದ್ ಮಾಡಿಲ್ಲ. ಹೀಗಾಗಿ ಅವರ ಮರಳುವಿಕೆ ಸುಲಭವಾಯಿತು‘ ಎಂದು ಸ್ಮಿತ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಜೋಹಾನ್ಸ್ಬರ್ಗ್</strong>: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ ರಚಿಸಿದ್ದ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ ಬಯೋಬಬಲ್ನಲ್ಲಿ ನಮ್ಮ ದೇಶದ ಆಟಗಾರರು ಸುರಕ್ಷಿತ ಭಾವ ಅನುಭವಿಸಿದ್ದರು ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ನಿರ್ದೇಶಕ ಗ್ರೇಮ್ ಸ್ಮಿತ್ ಹೇಳಿದ್ದಾರೆ.</p>.<p>ಬಯೋಬಬಲ್ನಲ್ಲಿ ಕೆಲವು ಆಟಗಾರರಿಗೆ ಕೋವಿಡ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ, ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಟೂರ್ನಿಯನ್ನು ಮೇ 4ರಂದು ಮುಂದೂಡಲಾಗಿತ್ತು. ಲೀಗ್ನಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾದ 11 ಮಂದಿ ಈಗಾಗಲೇ ಜೋಹಾನ್ಸ್ಬರ್ಗ್ಗೆ ತೆರಳಿದ್ದಾರೆ.</p>.<p>‘ನಮ್ಮ ಆಟಗಾರರಿಗೆ ಐಪಿಎಲ್ ಬಯೋಬಬಲ್ ಸುರಕ್ಷಿತ ಎನಿಸಿತ್ತು. ಭಾರತದಲ್ಲಿನ ಜೀವಸುರಕ್ಷಾ ವಾತಾವರಣ ಒಂದು ಉತ್ತಮ ಅನುಭವ. ಕೋವಿಡ್ ಬಿಕ್ಕಟ್ಟಿನಲ್ಲಿ ಅವರು ಅಪಾಯಕ್ಕೆ ಸಿಲುಕಲಿಲ್ಲ‘ ಎಂದು ಸುದ್ದಿಗೋಷ್ಠಿಯಲ್ಲಿ ಸ್ಮಿತ್ ನುಡಿದರು.</p>.<p>‘ಕೊರೊನಾ ಸೋಂಕು ಪ್ರಕರಣಗಳು ಏರುಗತಿಯಲ್ಲಿ ಸಾಗುತ್ತಿರುವಾಗ ಅಪಾಯ ಸಾಮಾನ್ಯವಾಗಿ ಇರುತ್ತದೆ. ಇದಕ್ಕೆ ಸಂಘಟಕರನ್ನು ದೂಷಿಸುವಂತಿಲ್ಲ. ಒಂದೇ ವೇಳೆ ವೈರಸ್ ಬಯೋಬಬಲ್ ಪ್ರವೇಶಿಸಿದರೆ ಏನಾಗಲಿದೆ ಎಂದು ಹೇಳುವುದು ಕಷ್ಟ‘ ಎಂದೂ ಸ್ಮಿತ್ ಪ್ರತಿಪಾದಿಸಿದರು.</p>.<p>ಟೂರ್ನಿಯಲ್ಲಿ ಭಾಗವಹಿಸಿದ್ದ ದಕ್ಷಿಣ ಆಫ್ರಿಕಾದ ಎಲ್ಲ ಆಟಗಾರರಿಗೆ ಸುರಕ್ಷಿತ ಪ್ರಯಾಣ ಖಚಿತಪಡಿಸಿದ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯನ್ನು (ಬಿಸಿಸಿಐ) ಸ್ಮಿತ್ ಇದೇ ವೇಳೆ ಶ್ಲಾಘಿಸಿದರು.</p>.<p>‘ನಮ್ಮ ಆಟಗಾರರ ದೃಷ್ಟಿಯಿಂದ ನಮ್ಮ ಗಡಿಗಳನ್ನು ಇನ್ನೂ ಬಂದ್ ಮಾಡಿಲ್ಲ. ಹೀಗಾಗಿ ಅವರ ಮರಳುವಿಕೆ ಸುಲಭವಾಯಿತು‘ ಎಂದು ಸ್ಮಿತ್ ನುಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>