ಕೊನೆಯವರೆಗೂ ಆಡಿದ ಗೌತಮ್, 110ನೇ ಓವರ್ನ ನಾಲ್ಕನೇ ಎಸೆತದಲ್ಲಿ ಅನುಭವಿ ಸ್ಪಿನ್ನರ್ ಆರ್. ಅಶ್ವಿನ್ಗೆ ವಿಕೆಟ್ ಒಪ್ಪಿಸುವುದರೊಂದಿಗೆ ಕರ್ನಾಟಕ ತಂಡ ಆಲೌಟ್ ಆಯಿತು. ತಮಿಳುನಾಡು ಪರ ಆರ್.ಅಶ್ವಿನ್ ನಾಲ್ಕು ವಿಕೆಟ್ ಪಡೆದರೆ,ಮಣಿಮಾರನ್ ಸಿದ್ದಾರ್ಥ್ ಹಾಗೂ ಕೃಷ್ಣಮೂರ್ತಿ ವಿಘ್ನೇಶ್ ತಲಾ ಎರಡು ವಿಕೆಟ್ ಕಬಳಿಸಿದರು. ಇನ್ನೊಂದು ವಿಕೆಟ್ ಬಾಬಾ ಅಪರಾಜಿತ್ ಪಾಲಾಯಿತು.