ಬಲಗೈ ಬ್ಯಾಟ್ಸ್ಮನ್ ಶ್ರೇಯಸ್ 180 ಎಸೆತಗಳನ್ನು ತಾಳ್ಮೆಯಿಂದ ಎದುರಿಸಿ 58 ರನ್ ಗಳಿಸಿದರು. ಜೆ, ಸುಚಿತ್ (ಬ್ಯಾಟಿಂಗ್ 27 ), ಬಿ.ಆರ್. ಶರತ್ (16) ಮತ್ತು ಅಭಿಷೇಕ ರೆಡ್ಡಿ (32) ರನ್ ಹಾಕಿ ಮುನ್ನಡೆಗೆ ಕಾರಣರಾದರು. ಶುಕ್ರವಾರ ಪಂದ್ಯದ ಕೊನೆಯ ದಿನವಾಗಿದ್ದು ಪಂದ್ಯ ಡ್ರಾ ಆದರೆ, ಇನಿಂಗ್ಸ್ ಮುನ್ನಡೆ ಪಡೆದ ತಂಡಕ್ಕೆ ಮೂರು ಅಂಕಗಳು ಲಭಿಸುತ್ತವೆ.