ಬೃಹತ್ ಗುರಿ ಬೆನ್ನತ್ತಿದ ಜಮ್ಮು ಮತ್ತು ಕಾಶ್ಮೀರ ಆರಂಭದಲ್ಲೇ ಆಘಾತಕ್ಕೆ ಒಳಗಾಯಿತು. ತಂಡದ ಮೊತ್ತ ನಾಲ್ಕು ರನ್ ಅಗಿದ್ದಾಗ ಕಮ್ರಾನ್ ಇಕ್ಬಾಲ್ ಅವರನ್ನು ವಾಪಸ್ ಕಳುಹಿಸುವ ಮೂಲಕ ಪ್ರಸಿದ್ಧ ಕೃಷ್ಣ ಕರ್ನಾಟಕ ತಂಡದಲ್ಲಿ ಸಂಭ್ರಮ ಮೂಡಿಸಿದರು. ಇಕ್ಬಾಲ್ ಅವರ ಜೋಡಿ ಜತಿನ್ ವಾಧ್ವಾನ್ ಕೂಡ ಬೇಗನೇ ವಾಪಸಾದರು. ಜತಿನ್ ವಿಕೆಟ್ ಉರುಳಿಸಿದ ಶ್ರೇಯಸ್ ಗೋಪಾಲ್ ನಾಲ್ಕನೇ ಕ್ರಮಾಂಕದ ಶುಭಂ ಪುಂದೀರ್ ಅವರ ವಿಕೆಟ್ ಕೂಡ ಪಡೆದರು.