<p><strong>ನವದೆಹಲಿ:</strong> ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಸೋಲಾಗಿರುವ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಇದು ಭಾರತಕ್ಕೆ ತಾತ್ಕಾಲಿಕ ಹಂತವಷ್ಟೇ. ಶೀಘ್ರದಲ್ಲೇ ಇದು ಬದಲಾಗಲಿದೆ ಎಂದು ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.</p>.<p>ವಿರಾಟ್ ಕೊಹ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ತಂಡದ ನಾಯಕತ್ವದಿಂದ ಹಿಂದೆ ಸರಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ 0–3 ಅಂತರದಿಂದ ಸೋಲನುಭವಿಸಿತ್ತು. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಿದ್ದರು.</p>.<p>ಅದಕ್ಕೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿಯೂ ಭಾರತಕ್ಕೆ 1–2ರ ಅಂತರದಲ್ಲಿ ಸೋಲಾಗಿತ್ತು.</p>.<p><a href="https://www.prajavani.net/sports/cricket/south-africa-vs-india-cricket-score-south-africa-won-by-4-runs-904496.html" itemprop="url">IND vs SA: 3–0 ಯಿಂದ ಸರಣಿ ಗೆದ್ದ ದಕ್ಷಿಣ ಆಫ್ರಿಕಾ, ದೀಪಕ್ ವೀರೋಚಿತ ಆಟ ವ್ಯರ್ಥ </a></p>.<p>‘ಒಂದು ಸರಣಿಯನ್ನು ಸೋತ ಕೂಡಲೇ ಜನ ಟೀಕೆ ಮಾಡಲು ಆರಂಭಿಸುತ್ತಾರೆ. ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವುದು ಸಾಧ್ಯವಾಗದು. ಗೆಲುವು–ಸೋಲು ಸಾಮಾನ್ಯ’ ಎಂದು ಶಾಸ್ತ್ರಿ ಹೇಳಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್ ಬಳಿಕ ಅವರು ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದರು.</p>.<p>ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಒಂದೇ ಒಂದು ಬಾಲ್ ಪಂದ್ಯವನ್ನೂ ನೋಡಿಲ್ಲ ಎಂದಿರುವ ಶಾಸ್ತ್ರಿ, ತಂಡದ ಗುಣಮಟ್ಟ ಕುಸಿದಿದೆ ಎಂಬ ವಾದವನ್ನು ಮಾತ್ರ ಒಪ್ಪಿಲ್ಲ.</p>.<p>‘ಗುಣಮಟ್ಟ ದಿಢೀರಾಗಿ ಕುಸಿಯಲು ಹೇಗೆ ಸಾಧ್ಯ? ಕಳೆದ ಐದು ವರ್ಷಗಳಿಂದ ತಂಡವು ವಿಶ್ವದ ‘ನಂಬರ್ 1’ ಆಗಿ ಗುರುತಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.</p>.<p><a href="https://www.prajavani.net/sports/cricket/smriti-mandhana-wins-international-cricket-councils-womens-player-of-the-year-904629.html" itemprop="url">ಭಾರತದ ಸ್ಮೃತಿ ಮಂದಾನಗೆ ಐಸಿಸಿ ವರ್ಷದ ಆಟಗಾರ್ತಿ ಗೌರವ </a></p>.<p>ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡವು ಹೆಚ್ಚು ನಿಗದಿತ ಓವರ್ಗಳ ಪಂದ್ಯಗಳನ್ನು ಆಯೋಜಿಸುತ್ತಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಈ ವರ್ಷದ ಸರಣಿಗಳನ್ನು ಆಯೋಜಿಸಿದೆ.</p>.<p>ಐಪಿಎಲ್ ಟೂರ್ನಿಯ ಬಳಿಕ ಭಾರತ ತಂಡವು ಕಳೆದ ವರ್ಷ ಬಾಕಿಯಾಗಿದ್ದ ಟೆಸ್ಟ್ ಸರಣಿಯ 1 ಪಂದ್ಯವನ್ನು ಆಡುವುದಕ್ಕಾಗಿ ಜೂನ್ನಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಬಳಿಕ ಮೂರು ಟ್ವೆಂಟಿ–20 ಹಾಗೂ 3 ಏಕದಿನ ಪಂದ್ಯಗಳು ನಡೆಯಲಿವೆ.</p>.<p><a href="https://www.prajavani.net/sports/cricket/balance-of-odi-side-an-issue-accepts-head-coach-dravid-rues-missing-likes-of-hardik-and-jadeja-904651.html" itemprop="url">ಸಮತೋಲನದ ಏಕದಿನ ತಂಡ ಅಗತ್ಯ: ರಾಹುಲ್ ದ್ರಾವಿಡ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ:</strong> ದಕ್ಷಿಣ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ ಸರಣಿಯಲ್ಲಿ ಟೀಮ್ ಇಂಡಿಯಾಕ್ಕೆ ಸೋಲಾಗಿರುವ ಬಗ್ಗೆ ಚಿಂತಿಸಬೇಕಾದ ಅಗತ್ಯವಿಲ್ಲ. ಇದು ಭಾರತಕ್ಕೆ ತಾತ್ಕಾಲಿಕ ಹಂತವಷ್ಟೇ. ಶೀಘ್ರದಲ್ಲೇ ಇದು ಬದಲಾಗಲಿದೆ ಎಂದು ತಂಡದ ಮಾಜಿ ಮುಖ್ಯ ಕೋಚ್ ರವಿ ಶಾಸ್ತ್ರಿ ಹೇಳಿದ್ದಾರೆ.</p>.<p>ವಿರಾಟ್ ಕೊಹ್ಲಿ ಅವರು ಎಲ್ಲ ಮಾದರಿಯ ಕ್ರಿಕೆಟ್ನಲ್ಲಿ ತಂಡದ ನಾಯಕತ್ವದಿಂದ ಹಿಂದೆ ಸರಿದ ಬೆನ್ನಲ್ಲೇ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಏಕದಿನ ಕ್ರಿಕೆಟ್ ಸರಣಿಯಲ್ಲಿ ಭಾರತ 0–3 ಅಂತರದಿಂದ ಸೋಲನುಭವಿಸಿತ್ತು. ನಾಯಕ ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ಕೆ.ಎಲ್.ರಾಹುಲ್ ತಂಡವನ್ನು ಮುನ್ನಡೆಸಿದ್ದರು.</p>.<p>ಅದಕ್ಕೂ ಮುನ್ನ ನಡೆದ ಟೆಸ್ಟ್ ಸರಣಿಯಲ್ಲಿಯೂ ಭಾರತಕ್ಕೆ 1–2ರ ಅಂತರದಲ್ಲಿ ಸೋಲಾಗಿತ್ತು.</p>.<p><a href="https://www.prajavani.net/sports/cricket/south-africa-vs-india-cricket-score-south-africa-won-by-4-runs-904496.html" itemprop="url">IND vs SA: 3–0 ಯಿಂದ ಸರಣಿ ಗೆದ್ದ ದಕ್ಷಿಣ ಆಫ್ರಿಕಾ, ದೀಪಕ್ ವೀರೋಚಿತ ಆಟ ವ್ಯರ್ಥ </a></p>.<p>‘ಒಂದು ಸರಣಿಯನ್ನು ಸೋತ ಕೂಡಲೇ ಜನ ಟೀಕೆ ಮಾಡಲು ಆರಂಭಿಸುತ್ತಾರೆ. ಪ್ರತಿಯೊಂದು ಪಂದ್ಯವನ್ನೂ ಗೆಲ್ಲುವುದು ಸಾಧ್ಯವಾಗದು. ಗೆಲುವು–ಸೋಲು ಸಾಮಾನ್ಯ’ ಎಂದು ಶಾಸ್ತ್ರಿ ಹೇಳಿದ್ದಾರೆ. ಕಳೆದ ವರ್ಷ ಯುಎಇಯಲ್ಲಿ ನಡೆದ ಟ್ವೆಂಟಿ–20 ವಿಶ್ವಕಪ್ ಬಳಿಕ ಅವರು ಕೋಚ್ ಹುದ್ದೆಯಿಂದ ನಿರ್ಗಮಿಸಿದ್ದರು.</p>.<p>ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಒಂದೇ ಒಂದು ಬಾಲ್ ಪಂದ್ಯವನ್ನೂ ನೋಡಿಲ್ಲ ಎಂದಿರುವ ಶಾಸ್ತ್ರಿ, ತಂಡದ ಗುಣಮಟ್ಟ ಕುಸಿದಿದೆ ಎಂಬ ವಾದವನ್ನು ಮಾತ್ರ ಒಪ್ಪಿಲ್ಲ.</p>.<p>‘ಗುಣಮಟ್ಟ ದಿಢೀರಾಗಿ ಕುಸಿಯಲು ಹೇಗೆ ಸಾಧ್ಯ? ಕಳೆದ ಐದು ವರ್ಷಗಳಿಂದ ತಂಡವು ವಿಶ್ವದ ‘ನಂಬರ್ 1’ ಆಗಿ ಗುರುತಿಸಿಕೊಂಡಿದೆ’ ಎಂದು ಅವರು ಹೇಳಿದ್ದಾರೆ.</p>.<p><a href="https://www.prajavani.net/sports/cricket/smriti-mandhana-wins-international-cricket-councils-womens-player-of-the-year-904629.html" itemprop="url">ಭಾರತದ ಸ್ಮೃತಿ ಮಂದಾನಗೆ ಐಸಿಸಿ ವರ್ಷದ ಆಟಗಾರ್ತಿ ಗೌರವ </a></p>.<p>ಆಸ್ಟ್ರೇಲಿಯಾದಲ್ಲಿ ಅಕ್ಟೋಬರ್ನಲ್ಲಿ ನಡೆಯಲಿರುವ ಟ್ವೆಂಟಿ–20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ಭಾರತ ತಂಡವು ಹೆಚ್ಚು ನಿಗದಿತ ಓವರ್ಗಳ ಪಂದ್ಯಗಳನ್ನು ಆಯೋಜಿಸುತ್ತಿದೆ. ವೆಸ್ಟ್ ಇಂಡೀಸ್, ಶ್ರೀಲಂಕಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಈ ವರ್ಷದ ಸರಣಿಗಳನ್ನು ಆಯೋಜಿಸಿದೆ.</p>.<p>ಐಪಿಎಲ್ ಟೂರ್ನಿಯ ಬಳಿಕ ಭಾರತ ತಂಡವು ಕಳೆದ ವರ್ಷ ಬಾಕಿಯಾಗಿದ್ದ ಟೆಸ್ಟ್ ಸರಣಿಯ 1 ಪಂದ್ಯವನ್ನು ಆಡುವುದಕ್ಕಾಗಿ ಜೂನ್ನಲ್ಲಿ ಇಂಗ್ಲೆಂಡ್ಗೆ ಪ್ರಯಾಣ ಬೆಳೆಸಲಿದೆ. ಬಳಿಕ ಮೂರು ಟ್ವೆಂಟಿ–20 ಹಾಗೂ 3 ಏಕದಿನ ಪಂದ್ಯಗಳು ನಡೆಯಲಿವೆ.</p>.<p><a href="https://www.prajavani.net/sports/cricket/balance-of-odi-side-an-issue-accepts-head-coach-dravid-rues-missing-likes-of-hardik-and-jadeja-904651.html" itemprop="url">ಸಮತೋಲನದ ಏಕದಿನ ತಂಡ ಅಗತ್ಯ: ರಾಹುಲ್ ದ್ರಾವಿಡ್ </a></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>