ನವದೆಹಲಿ: ಮಹೇಂದ್ರಸಿಂಗ್ ಧೋನಿ ಅವರು ಕಿರಿಯ ಆಟಗಾರರಿಗೆ ಮಾರ್ಗದರ್ಶನ ನೀಡುವ ರೀತಿಯು ವಿಶೇಷವಾಗಿದೆ. ಆವರು ಯಾವುದೇ ಸಮಸ್ಯೆಗೆ ಪೂರ್ತಿ ಪರಿಹಾರ ಹೇಳುವುದಿಲ್ಲ. ಆದರೆ,ಅವರು ಹೇಳುವ ಅಪೂರ್ಣ ಸಲಹೆಯನ್ನು ಸರಿಯಾಗಿ ಪಾಲಿಸಿದರೆ ಸಂಪೂರ್ಣ ಪರಿಹಾರ ಖಚಿತವಾಗಿರುತ್ತದೆ ಎಂದು ಭಾರತ ತಂಡದ ಆಟಗಾರ ರಿಷಭ್ ಪಂತ್ ಹೇಳಿದ್ದಾರೆ.