<p><strong>ಮುಂಬೈ</strong>: ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆಯನ್ನು ಐಸಿಸಿಯು ತಾತ್ಕಾಲಿಕವಾಗಿ ನಿಷೇಧಿಸಿರುವುದರಿಂದ ತಮ್ಮ ಬೌಲಿಂಗ್ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಮಧ್ಯಮವೇಗಿ ದೀಪಕ್ ಚಾಹರ್ ಹೇಳಿದ್ದಾರೆ.</p>.<p>ಸೀಮಿತ ಓವರ್ಗಳ ಪರಿಣತ ಬೌಲರ್ ಆಗಿರುವ ದೀಪಕ್, ‘ಟಿ20 ಮಾದರಿಯಲ್ಲಿ ಚೆಂಡು ಕೇವಲ ಎರಡು–ಮೂರು ಓವರ್ಗಳಲ್ಲಿ ಉತ್ತಮವಾಗಿ ಸ್ವಿಂಗ್ ಆಗುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ಪಿಚ್ ಹೊಸದಾಗಿರುತ್ತದೆ. ಆದ್ದರಿಂದ ಬಿಳಿಚೆಂಡನ್ನು ಹೆಚ್ಚು ಹೊಳೆಸುವ ಅಗತ್ಯವಿಲ್ಲ. ಆದ್ದರಿಂದ ಅದಕ್ಕೆ ಎಂಜಲು ಲೇಪನ ಮಾಡುವುದು ಬೇಕಿಲ್ಲ’ ಎಂದಿದ್ದಾರೆ.</p>.<p>ಕೊರೊನಾ ವೈದಸ್ ಸೋಂಕು ತಡೆಯುವ ಉದ್ದೇಶಿಂದ ಕ್ರಿಕೆಟ್ ಚೆಂಡಿಗೆ ಎಂಜಲು ಲೇಪನ ಮಾಡುವುದನ್ನು ಐಸಿಸಿಯು ಮಂಗಳವಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದರೆ, ಬೆವರನ್ನು ಬಳಸಬಹುದು ಎಂದು ಹೇಳಿದೆ.</p>.<p>ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಈಚೆಗೆ ಎಂಜಲು ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಬಗ್ಗೆ ಹಲವು ಕ್ರಿಕೆಟ್ ದಿಗ್ಗಜರು ಪರ–ವಿರೋಧ ಹೇಳಿಕಗಳನ್ನು ನೀಡಿದ್ದರು. ಭಾರತದ ಬಹಳಷ್ಟು ಬೌಲರ್ಗಳು ಎಂಜಲು ಬಳಕೆಯನ್ನು ನಿಷೇಧಿಸಬಾರದೆಂದು ವಾದಿಸಿದ್ದರು. ಆದರೆ ಐಸಿಸಿಯು ತನ್ನ ನಿರ್ಧಾರವನ್ನು ಬದಲಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ</strong>: ಚೆಂಡಿನ ಹೊಳಪು ನಿರ್ವಹಿಸಲು ಎಂಜಲು ಬಳಕೆಯನ್ನು ಐಸಿಸಿಯು ತಾತ್ಕಾಲಿಕವಾಗಿ ನಿಷೇಧಿಸಿರುವುದರಿಂದ ತಮ್ಮ ಬೌಲಿಂಗ್ ಮೇಲೆ ಯಾವುದೇ ಕೆಟ್ಟ ಪರಿಣಾಮ ಬೀರುವುದಿಲ್ಲ ಎಂದು ಮಧ್ಯಮವೇಗಿ ದೀಪಕ್ ಚಾಹರ್ ಹೇಳಿದ್ದಾರೆ.</p>.<p>ಸೀಮಿತ ಓವರ್ಗಳ ಪರಿಣತ ಬೌಲರ್ ಆಗಿರುವ ದೀಪಕ್, ‘ಟಿ20 ಮಾದರಿಯಲ್ಲಿ ಚೆಂಡು ಕೇವಲ ಎರಡು–ಮೂರು ಓವರ್ಗಳಲ್ಲಿ ಉತ್ತಮವಾಗಿ ಸ್ವಿಂಗ್ ಆಗುತ್ತದೆ. ಏಕೆಂದರೆ ಆ ಸಂದರ್ಭದಲ್ಲಿ ಪಿಚ್ ಹೊಸದಾಗಿರುತ್ತದೆ. ಆದ್ದರಿಂದ ಬಿಳಿಚೆಂಡನ್ನು ಹೆಚ್ಚು ಹೊಳೆಸುವ ಅಗತ್ಯವಿಲ್ಲ. ಆದ್ದರಿಂದ ಅದಕ್ಕೆ ಎಂಜಲು ಲೇಪನ ಮಾಡುವುದು ಬೇಕಿಲ್ಲ’ ಎಂದಿದ್ದಾರೆ.</p>.<p>ಕೊರೊನಾ ವೈದಸ್ ಸೋಂಕು ತಡೆಯುವ ಉದ್ದೇಶಿಂದ ಕ್ರಿಕೆಟ್ ಚೆಂಡಿಗೆ ಎಂಜಲು ಲೇಪನ ಮಾಡುವುದನ್ನು ಐಸಿಸಿಯು ಮಂಗಳವಾರ ತಾತ್ಕಾಲಿಕವಾಗಿ ನಿಷೇಧಿಸಿದೆ. ಆದರೆ, ಬೆವರನ್ನು ಬಳಸಬಹುದು ಎಂದು ಹೇಳಿದೆ.</p>.<p>ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿಯು ಈಚೆಗೆ ಎಂಜಲು ಬಳಕೆಯನ್ನು ತಾತ್ಕಾಲಿಕವಾಗಿ ನಿಷೇಧಿಸಬೇಕು ಎಂದು ಶಿಫಾರಸು ಮಾಡಿತ್ತು. ಈ ಬಗ್ಗೆ ಹಲವು ಕ್ರಿಕೆಟ್ ದಿಗ್ಗಜರು ಪರ–ವಿರೋಧ ಹೇಳಿಕಗಳನ್ನು ನೀಡಿದ್ದರು. ಭಾರತದ ಬಹಳಷ್ಟು ಬೌಲರ್ಗಳು ಎಂಜಲು ಬಳಕೆಯನ್ನು ನಿಷೇಧಿಸಬಾರದೆಂದು ವಾದಿಸಿದ್ದರು. ಆದರೆ ಐಸಿಸಿಯು ತನ್ನ ನಿರ್ಧಾರವನ್ನು ಬದಲಿಸಲಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>