<p><strong>ಲಾಹೋರ್</strong>: ಪಾಕಿಸ್ತಾನ ಕ್ರಿಕೆಟ್ಗೆ ಸಂಬಂಧಿಸಿದಂತೆ ತಮ್ಮನ್ನು ಯಾವುದೇ ಚರ್ಚೆಗೆ ಕರೆಯದ ಕಾರಣ ನಿರಾಶರಾಗಿರುವ ಟಿ20 ತಂಡದ ನಾಯಕ ಶಾಹೀನ್ ಶಾ ಅಫ್ರೀದಿ ಇದೀಗ ಆ ಸ್ಥಾನದಿಂದ ಕೆಳಗಿಳಿಯಲು ಚಿಂತನೆ ನಡೆಸುತ್ತಿದ್ದಾರೆ.</p>.<p>ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಆಗಲಿ, ರಾಷ್ಟ್ರೀಯ ಆಯ್ಕೆಗಾರರಾಲಿ, ತಮ್ಮ ಜೊತೆ ಭವಿಷ್ಯದ ಯೋಜನೆ, ನಾಯಕತ್ವ ಅಥವಾ ಕೋಚ್ಗಳ ಆಯ್ಕೆಗೆ ಸಂಬಂಧಿಸಿ ಒಮ್ಮೆಯೂ ಮಾತನಾಡದೇ ಇರುವುದರಿಂದ ಶಾಹೀನ್ ಬೇಸರಗೊಂಡಿದ್ದಾರೆ ಎಂದು ಅವರಿಗೆ ಆಪ್ತವಾದ ಮೂಲಗಳು ತಿಳಿಸಿವೆ.</p>.<p>ಟಿ20 ವಿಶ್ವಕಪ್, ಕೋಚ್ಗಳ ನೇಮಕ, ನಾಯಕತ್ವಕ್ಕೆ ಸಂಬಂಧಿಸಿ ಪಿಸಿಬಿ ಮುಖ್ಯಸ್ಥರು, ತಮ್ಮನ್ನು ಕತ್ತಲಲ್ಲಿಟ್ಟು, ಮಾಜಿ ನಾಯಕ ಬಾಬರ್ ಆಜಂ ಜೊತೆ ಮಾತುಕತೆ ನಡೆಸಿದ್ದರಿಂದ ಶಹೀನ್ ಬೇಸರಗೊಂಡಿದ್ದಾರೆ ಎಂದು ಈ ಮೂಲ ತಿಳಿಸಿದೆ.</p>.<p>‘ನನ್ನನ್ನು ನಾಯಕತ್ವದಿಂದ ತೆಗೆದುಹಾಕುವುದಿದ್ದರೆ ಮಂಡಳಿ ಇಷ್ಟು ಹೊತ್ತಿಗೆ ನನಗೇ ಈ ಬಗ್ಗೆ ತಿಳಿಸಬೇಕಿತ್ತು. ನಾನಾಗಿಯೇ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೆ. ಮಂಡಳಿ ಸೃಷ್ಟಿಸಿರುವ ಈ ಎಲ್ಲ ಗೊಂದಲಗಳಿಂದ ಹೊರಬರಲು ಹುದ್ದೆ ತ್ಯಜಿಸುವಂತೆ ನನ್ನ ಆಪ್ತರೇ ಸಲಹೆ ನೀಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಲಾಹೋರ್</strong>: ಪಾಕಿಸ್ತಾನ ಕ್ರಿಕೆಟ್ಗೆ ಸಂಬಂಧಿಸಿದಂತೆ ತಮ್ಮನ್ನು ಯಾವುದೇ ಚರ್ಚೆಗೆ ಕರೆಯದ ಕಾರಣ ನಿರಾಶರಾಗಿರುವ ಟಿ20 ತಂಡದ ನಾಯಕ ಶಾಹೀನ್ ಶಾ ಅಫ್ರೀದಿ ಇದೀಗ ಆ ಸ್ಥಾನದಿಂದ ಕೆಳಗಿಳಿಯಲು ಚಿಂತನೆ ನಡೆಸುತ್ತಿದ್ದಾರೆ.</p>.<p>ಪಿಸಿಬಿ ಅಧ್ಯಕ್ಷ ಮೊಹಸಿನ್ ನಕ್ವಿ ಆಗಲಿ, ರಾಷ್ಟ್ರೀಯ ಆಯ್ಕೆಗಾರರಾಲಿ, ತಮ್ಮ ಜೊತೆ ಭವಿಷ್ಯದ ಯೋಜನೆ, ನಾಯಕತ್ವ ಅಥವಾ ಕೋಚ್ಗಳ ಆಯ್ಕೆಗೆ ಸಂಬಂಧಿಸಿ ಒಮ್ಮೆಯೂ ಮಾತನಾಡದೇ ಇರುವುದರಿಂದ ಶಾಹೀನ್ ಬೇಸರಗೊಂಡಿದ್ದಾರೆ ಎಂದು ಅವರಿಗೆ ಆಪ್ತವಾದ ಮೂಲಗಳು ತಿಳಿಸಿವೆ.</p>.<p>ಟಿ20 ವಿಶ್ವಕಪ್, ಕೋಚ್ಗಳ ನೇಮಕ, ನಾಯಕತ್ವಕ್ಕೆ ಸಂಬಂಧಿಸಿ ಪಿಸಿಬಿ ಮುಖ್ಯಸ್ಥರು, ತಮ್ಮನ್ನು ಕತ್ತಲಲ್ಲಿಟ್ಟು, ಮಾಜಿ ನಾಯಕ ಬಾಬರ್ ಆಜಂ ಜೊತೆ ಮಾತುಕತೆ ನಡೆಸಿದ್ದರಿಂದ ಶಹೀನ್ ಬೇಸರಗೊಂಡಿದ್ದಾರೆ ಎಂದು ಈ ಮೂಲ ತಿಳಿಸಿದೆ.</p>.<p>‘ನನ್ನನ್ನು ನಾಯಕತ್ವದಿಂದ ತೆಗೆದುಹಾಕುವುದಿದ್ದರೆ ಮಂಡಳಿ ಇಷ್ಟು ಹೊತ್ತಿಗೆ ನನಗೇ ಈ ಬಗ್ಗೆ ತಿಳಿಸಬೇಕಿತ್ತು. ನಾನಾಗಿಯೇ ನಾಯಕತ್ವದಿಂದ ಕೆಳಗಿಳಿಯುತ್ತಿದ್ದೆ. ಮಂಡಳಿ ಸೃಷ್ಟಿಸಿರುವ ಈ ಎಲ್ಲ ಗೊಂದಲಗಳಿಂದ ಹೊರಬರಲು ಹುದ್ದೆ ತ್ಯಜಿಸುವಂತೆ ನನ್ನ ಆಪ್ತರೇ ಸಲಹೆ ನೀಡುತ್ತಿದ್ದಾರೆ ಎಂದು ಅವರು ಹೇಳಿಕೊಂಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>