<p><strong>ನ್ಯೂಯಾರ್ಕ್:</strong> ಭಾರತ ವಿರುದ್ಧ ಶನಿವಾರ ಇಲ್ಲಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ, ಬಾಂಗ್ಲಾದೇಶ ತಂಡದ ಎಡಗೈ ವೇಗಿ ಶರೀಫುಲ್ ಇಸ್ಲಾಮ್ ಅವರ ಕೈ ಬೆರಳುಗಳ ಮಧ್ಯೆ ಗಾಯವಾಗಿದ್ದು ಆರು ಹೊಲಿಗೆ ಹಾಕಲಾಗಿದೆ. ಇದು ಬಾಂಗ್ಲಾ ತಂಡಕ್ಕೆ ಕಳವಳ ಮೂಡಿಸಿದೆ.</p>.<p>ತಮ್ಮ ಕೊನೆಯ ಓವರ್ ಬೌಲ್ ಮಾಡುವಾಗ ಹಾರ್ದಿಕ್ ಪಾಂಡ್ಯ ಮಾಡಿದ ಬಿರುಸಿನ ಡ್ರೈವ್ನಲ್ಲಿ ಚೆಂಡು ತಡೆಯುವ ಯತ್ನದಲ್ಲಿ ಅವರ ಬೌಲಿಂಗ್ ಮಾಡುವ ಕೈಯ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯೆ ಗಾಯವಾಗಿತ್ತು. ನೋವಿನಿಂದ ಮೈದಾನ ತೊರೆದಿದ್ದರು.</p><p>ಹೀಗಾಗಿ ಓವರ್ನ ಕೊನೆಯ ಎಸೆತವನ್ನು ಅವರ ಬದಲು ತಾನ್ಜಿಮ್ ಹಸನ್ ಶಕೀಬ್ ಮಾಡಿದ್ದರು.</p><p>ಶರೀಫುಲ್ ಅವರನ್ನು ನಸೌ ಯುನಿವರ್ಸಿಟಿ ಮೆಡಿಕಲ್ ಸೆಂಟರ್ಗೆ ಕರೆದೊಯ್ಯಲಾಗಿದ್ದು, ಸರ್ಜನ್ ಅವರು ಆರು ಹೊಲಿಗೆ ಹಾಕಿದ್ದಾರೆ. ಎರಡು ದಿನಗಳ ನಂತರ ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಚೇತರಿಕೆ ಬಗ್ಗೆ ತಿಳಿಯಲಾಗುವುದು ಎಂದು ಮುಖ್ಯ ಫಿಸೀಷಿಯನ್ ಡಾ.ದೇಬಾಶಿಶ್ ಚೌಧರಿ ಇಎಸ್ಪಿನ್ಕ್ರಿಕ್ ಇನ್ಫೋಗೆ ಖಚಿತಪಡಿಸಿದ್ದಾರೆ.</p><p>ಶರೀಫುಲ್ ಆ ಪಂದ್ಯದಲ್ಲಿ 3.5 ಓವರುಗಳಲ್ಲಿ 26 ರನ್ನಿಗೆ 1 ವಿಕೆಟ್ ಪಡೆದಿದ್ದರು.</p><p>ಬಾಂಗ್ಲಾ ತನ್ನ ಮೊದಲ ಪಂದ್ಯವನ್ನು ಜೂನ್ 7ರಂದು ಟೆಕ್ಸಾಸ್ನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದು, ಆ ಪಂದ್ಯದ ವೇಳೆಗೆ ಶರೀಫುಲ್ ಫಿಟ್ ಆಗುವರೇ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನೊಬ್ಬ ವೇಗಿ ತಸ್ಕಿನ್ ಅಹ್ಮದ್ ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನ್ಯೂಯಾರ್ಕ್:</strong> ಭಾರತ ವಿರುದ್ಧ ಶನಿವಾರ ಇಲ್ಲಿ ಟಿ20 ವಿಶ್ವಕಪ್ ಅಭ್ಯಾಸ ಪಂದ್ಯದ ವೇಳೆ, ಬಾಂಗ್ಲಾದೇಶ ತಂಡದ ಎಡಗೈ ವೇಗಿ ಶರೀಫುಲ್ ಇಸ್ಲಾಮ್ ಅವರ ಕೈ ಬೆರಳುಗಳ ಮಧ್ಯೆ ಗಾಯವಾಗಿದ್ದು ಆರು ಹೊಲಿಗೆ ಹಾಕಲಾಗಿದೆ. ಇದು ಬಾಂಗ್ಲಾ ತಂಡಕ್ಕೆ ಕಳವಳ ಮೂಡಿಸಿದೆ.</p>.<p>ತಮ್ಮ ಕೊನೆಯ ಓವರ್ ಬೌಲ್ ಮಾಡುವಾಗ ಹಾರ್ದಿಕ್ ಪಾಂಡ್ಯ ಮಾಡಿದ ಬಿರುಸಿನ ಡ್ರೈವ್ನಲ್ಲಿ ಚೆಂಡು ತಡೆಯುವ ಯತ್ನದಲ್ಲಿ ಅವರ ಬೌಲಿಂಗ್ ಮಾಡುವ ಕೈಯ ತೋರು ಬೆರಳು ಮತ್ತು ಮಧ್ಯದ ಬೆರಳಿನ ಮಧ್ಯೆ ಗಾಯವಾಗಿತ್ತು. ನೋವಿನಿಂದ ಮೈದಾನ ತೊರೆದಿದ್ದರು.</p><p>ಹೀಗಾಗಿ ಓವರ್ನ ಕೊನೆಯ ಎಸೆತವನ್ನು ಅವರ ಬದಲು ತಾನ್ಜಿಮ್ ಹಸನ್ ಶಕೀಬ್ ಮಾಡಿದ್ದರು.</p><p>ಶರೀಫುಲ್ ಅವರನ್ನು ನಸೌ ಯುನಿವರ್ಸಿಟಿ ಮೆಡಿಕಲ್ ಸೆಂಟರ್ಗೆ ಕರೆದೊಯ್ಯಲಾಗಿದ್ದು, ಸರ್ಜನ್ ಅವರು ಆರು ಹೊಲಿಗೆ ಹಾಕಿದ್ದಾರೆ. ಎರಡು ದಿನಗಳ ನಂತರ ಮತ್ತೊಮ್ಮೆ ಅವರನ್ನು ಭೇಟಿ ಮಾಡಿ ಚೇತರಿಕೆ ಬಗ್ಗೆ ತಿಳಿಯಲಾಗುವುದು ಎಂದು ಮುಖ್ಯ ಫಿಸೀಷಿಯನ್ ಡಾ.ದೇಬಾಶಿಶ್ ಚೌಧರಿ ಇಎಸ್ಪಿನ್ಕ್ರಿಕ್ ಇನ್ಫೋಗೆ ಖಚಿತಪಡಿಸಿದ್ದಾರೆ.</p><p>ಶರೀಫುಲ್ ಆ ಪಂದ್ಯದಲ್ಲಿ 3.5 ಓವರುಗಳಲ್ಲಿ 26 ರನ್ನಿಗೆ 1 ವಿಕೆಟ್ ಪಡೆದಿದ್ದರು.</p><p>ಬಾಂಗ್ಲಾ ತನ್ನ ಮೊದಲ ಪಂದ್ಯವನ್ನು ಜೂನ್ 7ರಂದು ಟೆಕ್ಸಾಸ್ನಲ್ಲಿ ಶ್ರೀಲಂಕಾ ವಿರುದ್ಧ ಆಡಲಿದ್ದು, ಆ ಪಂದ್ಯದ ವೇಳೆಗೆ ಶರೀಫುಲ್ ಫಿಟ್ ಆಗುವರೇ ಎಂಬುದನ್ನು ಕಾದುನೋಡಬೇಕಾಗಿದೆ. ಇನ್ನೊಬ್ಬ ವೇಗಿ ತಸ್ಕಿನ್ ಅಹ್ಮದ್ ಪಕ್ಕೆಲುಬಿನ ನೋವಿನಿಂದ ಬಳಲುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>