‘ರಾಹುಲ್ ದ್ರಾವಿಡ್ ಅವರು ಶ್ರೇಷ್ಠ ಆಟಗಾರರಾಗಿದ್ದವರು. ಬದ್ಧತೆ, ಪರಿಪೂರ್ಣತೆ ಮತ್ತು ಶಿಸ್ತುಗಳಿರುವ ವ್ಯಕ್ತಿ. ಅವರಿಂದ ಎನ್ಸಿಎನಲ್ಲಿ ಉತ್ತಮವಾದ ಸೌಲಭ್ಯ ಸಿಗುವುದು ಖಚಿತ. ಅಕಾಡೆಮಿಯ ಉನ್ನತೀಕರಣ ಮತ್ತು ಸುಧಾರಣೆಗೆ ರಾಹುಲ್ ಅವರಿಗೆ ಹೊಣೆ ನೀಡಲಾಗಿದೆ. ಅವರು ಮತ್ತು ಅಲ್ಲಿಯ ಪದಾಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಸದ್ಯದ ವಿಷಯದ ಕುರಿತು ಇನ್ನೊಂದು ವಾರದಲ್ಲಿ ಸಂಪೂರ್ಣ ಮಾಹಿತಿ ಸಿಗುತ್ತದೆ’ ಎಂದು ಗಂಗೂಲಿ ಹೇಳಿದರು.