<p><strong>ಮುಂಬೈ (ಪಿಟಿಐ):</strong> ಅಂಗಳದಲ್ಲಿ ಆಟಗಾರನು ಮಾಡುವ ಸಾಧನೆಯನ್ನು ಮಾತ್ರ ಕ್ರೀಡಾಕ್ಷೇತ್ರವು ಗುರುತಿಸುತ್ತದೆ. ಉಳಿದ ಯಾವುದೇ ಅಂಶಗಳು ಪರಿಗಣನೆಗೆ ಬರುವುದಿಲ್ಲ ಎಂದು ಮಾಜಿ ಕ್ರಿಕಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.</p>.<p>’ಪ್ರತಿಬಾರಿಯೂ ನೀವು ಡ್ರೆಸ್ಸಿಂಗ್ ಕೋಣೆಯೊಳಗೆ ಹೋಗುವಾಗ ಎಲ್ಲಿಂದ ಬಂದಿದ್ದೀರಿ, ಹಿನ್ನಲೆ ಏನು ಮತ್ತು ದೇಶದ ಯಾವ ಭಾಗವನ್ನು ಪ್ರತಿನಿಧಿಸುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ. ಏಕೆಂದರೆ, ಎಲ್ಲರಿಗೂ ಸಮಾನವಾದ ಅವಕಾಶವನ್ನು ಆಟದಂಗಳ ನೀಡುತ್ತದೆ‘ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದರು.</p>.<p>ಅನ್ಅಕಾಡೆಮಿ ಆನ್ಲೈನ್ ಶಿಕ್ಷಣದ ಪ್ರಚಾರ ರಾಯಭಾರಿಯಾಗಿರುವ ಸಚಿನ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.</p>.<p>’ತಂಡದ ಗೆಲುವಿಗಾಗಿ ಕಾಣಿಕೆ ಕೊಡುವ ಕರ್ತವ್ಯದೊಂದಿಗೆ ಕಣಕ್ಕಿಳಿಯುತ್ತೇವೆ. ಅದರ ಮೇಲೆಯೇ ಚಿತ್ತ ಇರಬೇಕು. ನಾನು ಬೇರೆ ಬೇರೆ ಕೋಚ್ಗಳು, ನಾಯಕರೊಂದಿಗೆ ಆಡಿದ ಅನುಭವ ವಿಭಿನ್ನ. ಎಲ್ಲರಿಂದಲೂ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಆ ಕಲಿಕೆಗಳೇ ನನ್ನ ಅನುಭವಗಳು‘ ಎಂದು ಸಚಿನ್ ನುಡಿದರು.</p>.<p>’ಗುರಿ ಮತ್ತು ಕನಸುಗಳ ಈಡೇರಿಕೆಗೆ ಶ್ರಮಿಸುವುದನ್ನು ನಿಲ್ಲಿಸಬಾರದು. ಸತತವಾಗಿ ಅವುಗಳ ಬೆನ್ನತ್ತಬೇಕು. ಒಂದಿಲ್ಲೊಂದಿ ದಿನ ಯಶಸ್ಸು ಖಚಿತ. ಶ್ರಮ, ಶ್ರದ್ಧೆಯಿಂದಲೇ ಸಫಲತೆ ಸಾಧ್ಯ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ (ಪಿಟಿಐ):</strong> ಅಂಗಳದಲ್ಲಿ ಆಟಗಾರನು ಮಾಡುವ ಸಾಧನೆಯನ್ನು ಮಾತ್ರ ಕ್ರೀಡಾಕ್ಷೇತ್ರವು ಗುರುತಿಸುತ್ತದೆ. ಉಳಿದ ಯಾವುದೇ ಅಂಶಗಳು ಪರಿಗಣನೆಗೆ ಬರುವುದಿಲ್ಲ ಎಂದು ಮಾಜಿ ಕ್ರಿಕಟಿಗ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.</p>.<p>’ಪ್ರತಿಬಾರಿಯೂ ನೀವು ಡ್ರೆಸ್ಸಿಂಗ್ ಕೋಣೆಯೊಳಗೆ ಹೋಗುವಾಗ ಎಲ್ಲಿಂದ ಬಂದಿದ್ದೀರಿ, ಹಿನ್ನಲೆ ಏನು ಮತ್ತು ದೇಶದ ಯಾವ ಭಾಗವನ್ನು ಪ್ರತಿನಿಧಿಸುತ್ತೀರಿ ಎಂಬುದು ಮುಖ್ಯವಾಗುವುದಿಲ್ಲ. ಏಕೆಂದರೆ, ಎಲ್ಲರಿಗೂ ಸಮಾನವಾದ ಅವಕಾಶವನ್ನು ಆಟದಂಗಳ ನೀಡುತ್ತದೆ‘ ಎಂದು ಮಾಸ್ಟರ್ ಬ್ಲಾಸ್ಟರ್ ಸಚಿನ್ ಹೇಳಿದರು.</p>.<p>ಅನ್ಅಕಾಡೆಮಿ ಆನ್ಲೈನ್ ಶಿಕ್ಷಣದ ಪ್ರಚಾರ ರಾಯಭಾರಿಯಾಗಿರುವ ಸಚಿನ್ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.</p>.<p>’ತಂಡದ ಗೆಲುವಿಗಾಗಿ ಕಾಣಿಕೆ ಕೊಡುವ ಕರ್ತವ್ಯದೊಂದಿಗೆ ಕಣಕ್ಕಿಳಿಯುತ್ತೇವೆ. ಅದರ ಮೇಲೆಯೇ ಚಿತ್ತ ಇರಬೇಕು. ನಾನು ಬೇರೆ ಬೇರೆ ಕೋಚ್ಗಳು, ನಾಯಕರೊಂದಿಗೆ ಆಡಿದ ಅನುಭವ ವಿಭಿನ್ನ. ಎಲ್ಲರಿಂದಲೂ ಬಹಳಷ್ಟು ವಿಷಯಗಳನ್ನು ಕಲಿತಿದ್ದೇನೆ. ಆ ಕಲಿಕೆಗಳೇ ನನ್ನ ಅನುಭವಗಳು‘ ಎಂದು ಸಚಿನ್ ನುಡಿದರು.</p>.<p>’ಗುರಿ ಮತ್ತು ಕನಸುಗಳ ಈಡೇರಿಕೆಗೆ ಶ್ರಮಿಸುವುದನ್ನು ನಿಲ್ಲಿಸಬಾರದು. ಸತತವಾಗಿ ಅವುಗಳ ಬೆನ್ನತ್ತಬೇಕು. ಒಂದಿಲ್ಲೊಂದಿ ದಿನ ಯಶಸ್ಸು ಖಚಿತ. ಶ್ರಮ, ಶ್ರದ್ಧೆಯಿಂದಲೇ ಸಫಲತೆ ಸಾಧ್ಯ‘ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>