<p><strong>ಸೌತಾಂಪ್ಟನ್: </strong>ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಿಂದ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಟ್ಟ ನಿರ್ಧಾರವನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ ಸಮರ್ಥಿಸಿಕೊಂಡಿದ್ದಾರೆ.</p>.<p>ಭಾನುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್ನಲ್ಲಿ ಆತಿಥೇಯ ತಂಡ ನಾಲ್ಕು ವಿಕೆಟ್ಗಳಿಂದ ಸೋತಿತ್ತು.</p>.<p>‘ಆಡುವ ಹನ್ನೊಂದರ ಬಳಗದಿಂದ ಏಕಾಏಕಿ ಹೊರಗಿಟ್ಟಿದ್ದರಿಂದ ತುಂಬಾ ಸಿಟ್ಟು ಬಂದಿತ್ತು. ಜೊತೆಗೆ ಬೇಸರವೂ ಆಗಿತ್ತು’ ಎಂದು ಬ್ರಾಡ್ ಹೋದ ಶುಕ್ರವಾರ ಹೇಳಿದ್ದರು.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಸ್ಟೋಕ್ಸ್‘138 ಟೆಸ್ಟ್ ಪಂದ್ಯಗಳನ್ನು ಆಡಿ 485 ವಿಕೆಟ್ ಉರುಳಿಸಿರುವ ಬ್ರಾಡ್ ಅವರು ಇನ್ನಷ್ಟು ಸಾಧನೆ ಮಾಡುವ ಹಂಬಲ ಹೊತ್ತಿದ್ದಾರೆ. ಇನ್ನಷ್ಟು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಬೇಕೆಂಬ ಆಸೆ ಹೊಂದಿದ್ದಾರೆ. ಅವರ ಉತ್ಸಾಹ ಕಂಡು ನಿಜಕ್ಕೂ ಖುಷಿಯಾಗಿದೆ’ ಎಂದಿದ್ದಾರೆ.</p>.<p>‘ನಾವು ಒಂದು ತೀರ್ಮಾನ ಕೈಗೊಂಡ ಬಳಿಕ ಅದಕ್ಕೆ ಬದ್ಧರಾಗಿರಬೇಕಾಗುತ್ತದೆ. ಪಂದ್ಯ ಸೋತ ನಂತರ ಕೆಲವು ಆಟಗಾರರತ್ತ ಬೊಟ್ಟು ಮಾಡುವುದು ಸರಿಯಲ್ಲ. ನಾನಂತೂ ಆ ಕೆಲಸ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.</p>.<p>‘ಎಲ್ಲಾ ತಂಡಗಳೂ ಎದುರಾಳಿಗಳನ್ನು ಮಣಿಸಲು ಸೂಕ್ತ ಯೋಜನೆ ರೂಪಿಸಿಯೇ ಅಂಗಳಕ್ಕಿಳಿಯುತ್ತವೆ. ಆಡುವ ಬಳಗದ ಆಯ್ಕೆಯೂ ಈ ಯೋಜನೆಯ ಭಾಗವಾಗಿರುತ್ತದೆ. ಕೆಲವೊಮ್ಮೆ ನಮ್ಮ ನಿರ್ಧಾರ ತಲೆಕೆಳಗಾಗುವುದು ಸಹಜ. ಅದಕ್ಕಾಗಿ ಇನ್ನೊಬ್ಬರನ್ನು ದೂಷಿಸುವುದು ಸರಿಯಲ್ಲ’ ಎಂದು ನುಡಿದಿದ್ದಾರೆ.</p>.<p>‘ನಮ್ಮಿಂದಾದ ತಪ್ಪುಗಳೇನು ಎಂಬುದು ಈಗಾಗಲೇ ಎಲ್ಲರಿಗೂ ಅರಿವಾಗಿದೆ. ಪಿಚ್ ಹೇಗಾದರೂ ವರ್ತಿಸಲಿ ಮೊದಲ ಇನಿಂಗ್ಸ್ನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕು. ಈ ವಿಷಯದಲ್ಲಿ ನಾವು ಎಡವಿದೆವು. ಇನ್ನೂ 80ರನ್ ಹೆಚ್ಚು ಗಳಿಸಿದ್ದರೆ ಎದುರಾಳಿಗಳಿಗೆ ಗುರಿ ಮುಟ್ಟುವುದು ಕಷ್ಟವಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p><strong>ನಮ್ಮ ಆಟ ಅಮೋಘವಾಗಿತ್ತು: </strong>‘ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ನಮ್ಮ ಆಟಗಾರರು ತೋರಿದ ಸಾಮರ್ಥ್ಯವು ಅಮೋಘವಾಗಿತ್ತು’ ಎಂದು ವಿಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.</p>.<p>ನಾಲ್ಕನೇ ದಿನ ವಿಂಡೀಸ್ ಬೌಲರ್ಗಳು ಕೇವಲ 30ರನ್ಗಳಿಗೆ ಐದು ವಿಕೆಟ್ ಉರುಳಿಸಿ ಎರಡನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನು 284ರನ್ಗಳಿಗೆ ಕಟ್ಟಿಹಾಕಿದ್ದರು.</p>.<p>‘ಬೌಲರ್ಗಳು ಪರಿಣಾಮಕಾರಿಯಾಗಿ ದಾಳಿ ನಡೆಸಿದರು. ನಮ್ಮ ಆಟಗಾರರ ಕ್ಷೇತ್ರ ರಕ್ಷಣೆಯೂ ಅಮೋಘವಾಗಿತ್ತು. ನೆಪಗಳನ್ನು ಹೇಳದೆ ಎಲ್ಲರೂ ಕೆಚ್ಚೆದೆಯಿಂದ ಹೋರಾಡಿದರು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸೌತಾಂಪ್ಟನ್: </strong>ವೆಸ್ಟ್ ಇಂಡೀಸ್ ಎದುರಿನ ಮೊದಲ ಟೆಸ್ಟ್ ಪಂದ್ಯದಿಂದ ಅನುಭವಿ ವೇಗದ ಬೌಲರ್ ಸ್ಟುವರ್ಟ್ ಬ್ರಾಡ್ ಅವರನ್ನು ಕೈಬಿಟ್ಟ ನಿರ್ಧಾರವನ್ನು ಇಂಗ್ಲೆಂಡ್ ಕ್ರಿಕೆಟ್ ತಂಡದ ಹಂಗಾಮಿ ನಾಯಕ ಬೆನ್ ಸ್ಟೋಕ್ಸ್ ಸಮರ್ಥಿಸಿಕೊಂಡಿದ್ದಾರೆ.</p>.<p>ಭಾನುವಾರ ಮುಕ್ತಾಯಗೊಂಡ ಮೊದಲ ಟೆಸ್ಟ್ನಲ್ಲಿ ಆತಿಥೇಯ ತಂಡ ನಾಲ್ಕು ವಿಕೆಟ್ಗಳಿಂದ ಸೋತಿತ್ತು.</p>.<p>‘ಆಡುವ ಹನ್ನೊಂದರ ಬಳಗದಿಂದ ಏಕಾಏಕಿ ಹೊರಗಿಟ್ಟಿದ್ದರಿಂದ ತುಂಬಾ ಸಿಟ್ಟು ಬಂದಿತ್ತು. ಜೊತೆಗೆ ಬೇಸರವೂ ಆಗಿತ್ತು’ ಎಂದು ಬ್ರಾಡ್ ಹೋದ ಶುಕ್ರವಾರ ಹೇಳಿದ್ದರು.</p>.<p>ಈ ಕುರಿತು ಪ್ರತಿಕ್ರಿಯಿಸಿರುವ ಸ್ಟೋಕ್ಸ್‘138 ಟೆಸ್ಟ್ ಪಂದ್ಯಗಳನ್ನು ಆಡಿ 485 ವಿಕೆಟ್ ಉರುಳಿಸಿರುವ ಬ್ರಾಡ್ ಅವರು ಇನ್ನಷ್ಟು ಸಾಧನೆ ಮಾಡುವ ಹಂಬಲ ಹೊತ್ತಿದ್ದಾರೆ. ಇನ್ನಷ್ಟು ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಬೇಕೆಂಬ ಆಸೆ ಹೊಂದಿದ್ದಾರೆ. ಅವರ ಉತ್ಸಾಹ ಕಂಡು ನಿಜಕ್ಕೂ ಖುಷಿಯಾಗಿದೆ’ ಎಂದಿದ್ದಾರೆ.</p>.<p>‘ನಾವು ಒಂದು ತೀರ್ಮಾನ ಕೈಗೊಂಡ ಬಳಿಕ ಅದಕ್ಕೆ ಬದ್ಧರಾಗಿರಬೇಕಾಗುತ್ತದೆ. ಪಂದ್ಯ ಸೋತ ನಂತರ ಕೆಲವು ಆಟಗಾರರತ್ತ ಬೊಟ್ಟು ಮಾಡುವುದು ಸರಿಯಲ್ಲ. ನಾನಂತೂ ಆ ಕೆಲಸ ಮಾಡುವುದಿಲ್ಲ’ ಎಂದು ತಿಳಿಸಿದ್ದಾರೆ.</p>.<p>‘ಎಲ್ಲಾ ತಂಡಗಳೂ ಎದುರಾಳಿಗಳನ್ನು ಮಣಿಸಲು ಸೂಕ್ತ ಯೋಜನೆ ರೂಪಿಸಿಯೇ ಅಂಗಳಕ್ಕಿಳಿಯುತ್ತವೆ. ಆಡುವ ಬಳಗದ ಆಯ್ಕೆಯೂ ಈ ಯೋಜನೆಯ ಭಾಗವಾಗಿರುತ್ತದೆ. ಕೆಲವೊಮ್ಮೆ ನಮ್ಮ ನಿರ್ಧಾರ ತಲೆಕೆಳಗಾಗುವುದು ಸಹಜ. ಅದಕ್ಕಾಗಿ ಇನ್ನೊಬ್ಬರನ್ನು ದೂಷಿಸುವುದು ಸರಿಯಲ್ಲ’ ಎಂದು ನುಡಿದಿದ್ದಾರೆ.</p>.<p>‘ನಮ್ಮಿಂದಾದ ತಪ್ಪುಗಳೇನು ಎಂಬುದು ಈಗಾಗಲೇ ಎಲ್ಲರಿಗೂ ಅರಿವಾಗಿದೆ. ಪಿಚ್ ಹೇಗಾದರೂ ವರ್ತಿಸಲಿ ಮೊದಲ ಇನಿಂಗ್ಸ್ನಲ್ಲಿ ದೊಡ್ಡ ಮೊತ್ತ ಕಲೆಹಾಕಬೇಕು. ಈ ವಿಷಯದಲ್ಲಿ ನಾವು ಎಡವಿದೆವು. ಇನ್ನೂ 80ರನ್ ಹೆಚ್ಚು ಗಳಿಸಿದ್ದರೆ ಎದುರಾಳಿಗಳಿಗೆ ಗುರಿ ಮುಟ್ಟುವುದು ಕಷ್ಟವಾಗುತ್ತಿತ್ತು’ ಎಂದು ಅಭಿಪ್ರಾಯಪಟ್ಟಿದ್ದಾರೆ.</p>.<p><strong>ನಮ್ಮ ಆಟ ಅಮೋಘವಾಗಿತ್ತು: </strong>‘ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯದ ನಾಲ್ಕನೇ ದಿನದಾಟದಲ್ಲಿ ನಮ್ಮ ಆಟಗಾರರು ತೋರಿದ ಸಾಮರ್ಥ್ಯವು ಅಮೋಘವಾಗಿತ್ತು’ ಎಂದು ವಿಂಡೀಸ್ ತಂಡದ ನಾಯಕ ಜೇಸನ್ ಹೋಲ್ಡರ್ ಹೇಳಿದ್ದಾರೆ.</p>.<p>ನಾಲ್ಕನೇ ದಿನ ವಿಂಡೀಸ್ ಬೌಲರ್ಗಳು ಕೇವಲ 30ರನ್ಗಳಿಗೆ ಐದು ವಿಕೆಟ್ ಉರುಳಿಸಿ ಎರಡನೇ ಇನಿಂಗ್ಸ್ನಲ್ಲಿ ಇಂಗ್ಲೆಂಡ್ ತಂಡವನ್ನು 284ರನ್ಗಳಿಗೆ ಕಟ್ಟಿಹಾಕಿದ್ದರು.</p>.<p>‘ಬೌಲರ್ಗಳು ಪರಿಣಾಮಕಾರಿಯಾಗಿ ದಾಳಿ ನಡೆಸಿದರು. ನಮ್ಮ ಆಟಗಾರರ ಕ್ಷೇತ್ರ ರಕ್ಷಣೆಯೂ ಅಮೋಘವಾಗಿತ್ತು. ನೆಪಗಳನ್ನು ಹೇಳದೆ ಎಲ್ಲರೂ ಕೆಚ್ಚೆದೆಯಿಂದ ಹೋರಾಡಿದರು’ ಎಂದಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>